ಸಾಂದರ್ಭಿಕ ಚಿತ್ರ 
ವಿದೇಶ

ಆನ್ ಲೈನ್ ಮತ್ತು ವೀಸಾ ವಂಚನೆ: ಭಾರತ ಮೂಲದ ವ್ಯಕ್ತಿಗೆ ಅಮೆರಿಕಾ ಸರ್ಕಾರ ಶಿಕ್ಷೆ

ದೂರಸಂಪರ್ಕ ಅಥವಾ ಮಾಹಿತಿ ತಂತ್ರಜ್ಞಾನದ ಬಳಕೆ ಒಳಗೊಂಡ ಹಣಕಾಸು ಮತ್ತು ವೀಸಾ...

ನ್ಯೂಯಾರ್ಕ್: ದೂರಸಂಪರ್ಕ ಅಥವಾ ಮಾಹಿತಿ ತಂತ್ರಜ್ಞಾನದ ಬಳಕೆ ಒಳಗೊಂಡ ಹಣಕಾಸು ಮತ್ತು ವೀಸಾ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಅಮೆರಿಕಾ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ದೂರಸಂಪರ್ಕ ಮತ್ತು ವೀಸಾ ವಂಚನೆಯಡಿಯಲ್ಲಿ ಭಾರತೀಯ ಕೆಲಸಗಾರರಿಗೆ ಹೆಚ್1ಬಿ ವೀಸಾ ಮತ್ತು ಗ್ರೀನ್ ಕಾರ್ಡು ಕೊಡಿಸಲು ಅಕ್ರಮವಾಗಿ ಶುಲ್ಕ ಸಲ್ಲಿಕೆಗೆ 4,50,000 ಅಮೆರಿಕನ್ ಡಾಲರ್ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ವಿರ್ಗೊ ಇಂಕ್ ಮತ್ತು ಇಸಿಂಕ್ ಸೊಲ್ಯುಷನ್ಸ್ ನ ಮಾಜಿ ಮಾಲಿಕ ಮತ್ತು ಕಾರ್ಯನಿರ್ವಾಹಕ ರಮೇಶ್ ವೆಂಕಟ ಪೊತುರುಗೆ ವೀಸಾ ಮತ್ತು ದೂರಸಂಪರ್ಕ ವಂಚನೆಯಡಿಯಲ್ಲಿ ಒಂದು ವರ್ಷ 1 ದಿನದ ದೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾದ ವಲಸೆ ಮತ್ತು ಸುಂಕ ಜಾರಿ ನಿರ್ದೇಶನಾಲಯ ಹೇಳಿದೆ.

ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೆ ಅಮೆರಿಕಾದ ಸುಂಕ ಜಾರಿ ನಿರ್ದೇಶನಾಲಯ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ತಪಾಸಣೆ ದಾಖಲೆ ಮತ್ತು ವಂಚನೆ ಲಾಭ ಕ್ರಿಯಾಪಡೆ ಜಂಟಿ ತನಿಖೆ ನಡೆಸಿದೆ.

ಅಕ್ರಮವಾಗಿ ಶುಲ್ಕ ಸಲ್ಲಿಸಿ ಮತ್ತು 100ಕ್ಕೂ ಹೆಚ್ಚು ಅಕ್ರಮ ವೀಸಾ ಮತ್ತು ಉದ್ಯೋಗಿಗಳ ಪ್ರಾಯೋಜಿತ ಗ್ರೀನ್ ಕಾರ್ಡುಗಳನ್ನು ನೀಡಿ ಪೊತುರು 4,50,000 ಡಾಲರ್ ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದರು. 2010ಮತ್ತು 2013ರ ನಡುವೆ ಪೊತುರು ವಿರುದ್ಧ ತನಿಖೆ ನಡೆಸಲಾಗಿದ್ದು ಭಾರತೀಯ ಕೆಲಸಗಾರರಿಂದ ಸಾವಿರಾರು ಡಾಲರ್ ಹಣವನ್ನು ಹೆಚ್-1ಬಿ ವಲಸೆರಹಿತ ಕೆಲಸಗಾರರಿಂದ ವೀಸಾ ಕಾರ್ಯಕ್ರಮದಡಿ ಸಂಗ್ರಹಿಸಿದ್ದರು.

ತಮ್ಮ ಖಾಸಗಿ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸುವ ಮೂಲಕ ಪೊತುರು ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT