ಸಂಗ್ರಹ ಚಿತ್ರ 
ವಿದೇಶ

ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು: ಚೀನಾ ಎಚ್ಚರಿಕೆ

ಮಾಲ್ಡೀವ್ಸ್‌ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿರುವ ಚೀನಾ ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು ಎಂದು ಹೇಳಿದೆ.

ಬೀಜಿಂಗ್‌: ಮಾಲ್ಡೀವ್ಸ್‌ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿರುವ ಚೀನಾ ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು ಎಂದು ಹೇಳಿದೆ.
ಈ ಬಗ್ಗೆ ಈ ಹಿಂದೆ ನೇರವಾಗಿ ಭಾರತಕ್ಕೆ ಕಿವಿಮಾತು ಹೇಳಿದ್ದ ಚೀನಾ ಸರ್ಕಾರ ಇದೀಗ ತನ್ನ ಮಾಧ್ಯಮಗಳನ್ನು ಭಾರತದ ವಿರುದ್ಧ ಛೂ ಬಿಟ್ಟಿದ್ದು ಮಾಲ್ಡೀವ್ಸ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾ ಮಾಧ್ಯಮಗಳು ಭಾರತದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿರುವ ಚೀನಾ ಮಾಧ್ಯಮಗಳು ಒಂದು ವೇಳೆ ಭಾರತ ದೇಶ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಮಾಲ್ಡೀವ್ಸ್ ಗೆ ಸೇನೆ ರವಾನೆ ಮಾಡಿದರೆ, ಭಾರತದ ವಿರುದ್ಧ  ಚೀನಾ ನಿರ್ಧಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ. ಅಂತೆಯೇ ಮಾಲ್ಡೀವ್ಸ್ ಗೆ ಭಾರತೀಯ ಸೇನೆ ರವಾನೆ ಮಾಡುವ ಕುರಿತು ಚೀನಾ ವಿರೋಧವಿದ್ದು, ಯಾವುದೇ ಕಾರಣಕ್ಕೂ ಇಂತಹ ಬೆಳವಣಿಗೆಯನ್ನು ಒಪ್ಪಲು  ಸಾಧ್ಯವಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.
ಮಾಲ್ಡೀವ್ಸ್ ಬಿಕ್ಕಟ್ಟು ಚೀನಾದ ಆಂತರಿಕ ವಿಚಾರವಾಗಿದ್ದು, ಯಾವುದೇ ಕಾರಣಕ್ಕೆ ಭಾರತ ಮಧ್ಯ ಪ್ರವೇಶ ಮಾಡಬಾರದು. ಒಂದು ವೇಳೆ ಭಾರತ ದುಸ್ಸಾಹಸಕ್ಕೆ ಮುಂದಾದರೆ ತನ್ನ ಪ್ರಾದೇಶಿಕ  ಸಮಗ್ರತೆ ಕಾಪಾಡಿಕೊಳ್ಳಲು ಚೀನಾ  ಯಾವುದೇ ರೀತಿಯ ಕಠಿಣ ನಿರ್ಣಯ ಕೈಗೊಳ್ಳುಲು ಸ್ವತಂತ್ರವಾಗಿದೆ. ಮಾಲೆಯಿಂದ ಭಾರತವನ್ನು ತಡೆಯಲು ಚೀನಾ ಯಾವುದೇ ರೀತಿಯ ಕ್ರಮ ಜರುಗಿಸಬಹುದು ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಅಂತೆಯೇ ಮಾಲ್ಡೀವ್ಸ್ ಮತ್ತೊಂದು ಡೊಕ್ಲಾಮ್ ಸಮಸ್ಯೆಯಾಗುವುದು ಬೇಡ. ಈ ಬಗ್ಗೆ ಭಾರತ ಎಚ್ಚರಿಕೆಯ ನಡೆ ಇಡಲಿ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಈ ಹಿಂದೆ ಚೀನಾ ಸರ್ಕಾರ ಕೂಡ ಮಾಲ್ಡೀವ್ಸ್ ವಿಚಾರದಲ್ಲಿ ಭಾರತ ಮಧ್ಯ ಪ್ರವೇಶ ಮಾಡುವುದು ಬೇಡ ಎಂದು ಹೇಳಿತ್ತು. ಭಾರತ ಜತೆ ಮತ್ತೊಂದು ಮುಸುಕಿನ ಗುದ್ದಾಟಕ್ಕೆ ಮಾಲ್ಡೀವ್ಸ್ ಬಿಕ್ಕಟ್ಟು ಕಾರಣವಾಗುವುದು ಬೇಡ ಎಂದು  ಹೇಳಿದ್ದ ಚೀನಾ,  ಈ ವಿಷಯದಲ್ಲಿ ಯಾವುದೇ ಬಾಹ್ಯ ಮಧ್ಯಸ್ಥಿಕೆ ಬೇಡ ಎನಿಸುತ್ತದೆ. ಈ ವಿಷಯವನ್ನು ಮಾತುಕತೆಯ ಮೂಲಕವೇ ಸರಿಪಡಿಸಬೇಕು ಎಂದು ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT