ವಾಷಿಗ್ಟನ್ ನಲ್ಲಿ ಪಾಕ್ ವಿರುದ್ಧ ಪ್ರತಿಭಟನೆ 
ವಿದೇಶ

'ಚಪ್ಪಲಿ ಕಳ್ಳ ಪಾಕಿಸ್ತಾನ': ವಾಷಿಂಗ್ಟನ್ ನಲ್ಲಿ ಬಲೂಚ್, ಇಂಡೋ-ಅಮೆರಿಕನ್ನರ ಪ್ರತಿಭಟನೆ ವೈರಲ್

ಕುಲಭೂಷಣ್ ಜಾದವ್ ಭೇಟಿ ವೇಳೆ ಜಾದವ್ ಪತ್ನಿ ಚಪ್ಪಲಿ ಕಸಿದು ಅಮಾನವೀಯತೆ ಪ್ರದರ್ಶನ ಮಾಡಿದ್ದ ಪಾಕಿಸ್ತಾನದ ವಿರುದ್ಧ ಅಮೆರಿಕದ ವಾಷಿಂಗ್ಟನ್ ನಲ್ಲಿ ಬಲೂಚಿಸ್ತಾನ ಪ್ರಜೆಗಳು ಮತ್ತು ಇಂಡೋ ಅಮೆರಿಕನ್ನರ ಸಮೂಹವೊಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ.

ವಾಷಿಂಗ್ಟನ್: ಕುಲಭೂಷಣ್ ಜಾದವ್ ಭೇಟಿ ವೇಳೆ ಜಾದವ್ ಪತ್ನಿ ಚಪ್ಪಲಿ ಕಸಿದು ಅಮಾನವೀಯತೆ ಪ್ರದರ್ಶನ ಮಾಡಿದ್ದ ಪಾಕಿಸ್ತಾನದ ವಿರುದ್ಧ ಅಮೆರಿಕದ ವಾಷಿಂಗ್ಟನ್ ನಲ್ಲಿ ಬಲೂಚಿಸ್ತಾನ ಪ್ರಜೆಗಳು ಮತ್ತು ಇಂಡೋ  ಅಮೆರಿಕನ್ನರ ಸಮೂಹವೊಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಹೆಪ್ಪುಗಟ್ಟಿಸುವ ಚಳಿಯ ನಡುವೆಯೂ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಎದುರು ಬಲೂಚಿಸ್ತಾನ ಪ್ರಜೆಗಳು ಮತ್ತು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರು ಪ್ರತಿಭಟನೆ  ನಡೆಸುತ್ತಿದ್ದಾರೆ. ಚಪ್ಪಲ್ ಚೋರ್ ಪಾಕಿಸ್ತಾನ ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು  ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಅಂತೆಯೇ ಕುಲಭೂಷಣ್ ಜಾದವ್ ಮತ್ತು ಅವರ ಕುಟುಂಬಸ್ಥರ ಭೇಟಿಯನ್ನು ಅಮಾನವೀಯ ಎಂದು ಕರೆದಿರುವ ಬಲೂಚಿಸ್ತಾನ ಪ್ರಜೆಗಳು, ಜಾದವ್ ಪತ್ನಿ ಚೇತನಾ ಅವರ ಚಪ್ಪಲಿ, ತಾಳಿ, ಸಿಂಧೂರವನ್ನು ಅಳಿಸುವ ಮೂಲಕ  ಪಾಕಿಸ್ತಾನ ತನ್ನ ಕ್ರೂರತ್ವವನ್ನು ಜಗತ್ತಿಗೇ ಪರಿಚಯಿಸಿದೆ ಎಂದು ಹೇಳಿದ್ದಾರೆ. ಅಂತೆಯೇ ಅಮೆರಿಕನ್ನರು ಬಲೂಚ್ ಪ್ರಜೆಗಳ ಸ್ನೇಹಿತರಾಗಿದ್ದು, ತಮ್ಮ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ ಎಂದು ಬಲೂಚಿಸ್ತಾನ ಮೂಲದ ಅಹ್ಮರ್  ಮುಸ್ತಿಖಾನ್ ಹೇಳಿದ್ದಾರೆ.
ಅಲ್ಲದೆ ಜಾದವ್ ಮತ್ತು ಅವರ ಕುಟುಂಬಸ್ಥರ ಭೇಟಿ ಸಂಪೂರ್ಣ ಪಾಕಿಸ್ತಾನ ನಿಯಂತ್ರಿತ ಭೇಟಿಯಾಗಿದ್ದು, 40 ನಿಮಿಷಗಳ ಭೇಟಿ ಪಾಕಿಸ್ತಾನ ಅಧಿಕಾರಿಗಳ ಆದೇಶದಂತೆ ಸಾಗಿತ್ತು ಎಂಜು ಅವರು ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅಮೆರಕಿದಲ್ಲಿರುವ ಹಿಂದೂ ಸಂಘಟನೆಯ ಮುಖಂಡ ಕೃಷ್ಣಗುಡಿಪಟಿ ಅವರು, ಜಾದವ್ ಕುಟುಂಬಸ್ಥರ ಪಾಕಿಸ್ತಾನ ಭೇಟಿ ಪ್ರಕರಣ ಪಾಕ್ ನ ನೀಚ ಕೃತ್ಯಗಳಿಗೆ ಒಂದು ಉದಾಹರಣೆಯಾಗಿದೆ. ಹಿಂದೂ  ಸಂಪ್ರದಾಯದಲ್ಲಿ ಗಂಡ ಸತ್ತಾಗ ಮಾತ್ರ ಹಣೆಯಲ್ಲಿನ ಸಿಂಧೂರ ಮತ್ತು ಮಾಂಗಲ್ಯವನ್ನು ತೆಗೆಸಲಾಗುತ್ತದೆ. ಆದರೆ ಪಾಕಿಸ್ತಾನ ಜಾದವ್ ಬದುಕಿರುವಾಗಲೇ ಅವರ ಬಿಂದಿ ಮತ್ತು ಮಾಂಗಲ್ಯ ತೆಗೆಸಿ ಅಮಾನವೀಯತೆ ಮೆರಿದಿದೆ  ಎಂದು ಕಿಡಿಕಾರಿದ್ದಾರೆ. ಅಂತೆಯೇ ಪಾಕಿಸ್ತಾನದ ವಿರುದ್ಧ ಆರ್ಥಿಕ ನಿರ್ಬಂಧ ಹೇರಿ ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT