ಸಂಗ್ರಹ ಚಿತ್ರ 
ವಿದೇಶ

ಅಮೆರಿಕದ ವಿರುದ್ಧ ಚೀನಾ ಶೀಥಲ ಸಮರ: ಸಿಐಎ ಎಚ್ಚರಿಕೆ

ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ಚೀನಾ ಅಕ್ಷರಶಃ ಶೀಥಲ ಸಮರ ನಡೆಸುತ್ತಿದೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ಅಭಿಪ್ರಾಯವ್ಯಕ್ತಪಡಿಸಿದೆ.

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ವಿರುದ್ಧ ಚೀನಾ ಅಕ್ಷರಶಃ ಶೀಥಲ ಸಮರ ನಡೆಸುತ್ತಿದೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ಅಭಿಪ್ರಾಯವ್ಯಕ್ತಪಡಿಸಿದೆ.
ಅಮೆರಿಕದಲ್ಲಿ ನಡೆದ ಯುಎಸ್-ಏಷ್ಯಾ ಸಂಬಂಧಗಳ ಕುರಿತಂತೆ ನಡೆದ ಸಭೆಯಲ್ಲಿ ಸಿಐಎ ತಜ್ಞರು ಇತಂಹುದೊಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಚೀನಾ ಅಮೆರಿಕದ ವಿರುದ್ಧ ಟ್ರೇಡ್ ವಾರ್ (ವ್ಯಾಪಾರ ಸಮರ) ಆರಂಭಿಸಿದ್ದು, ಅಮೆರಿಕದ ವಾಣಿಜ್ಯ ರಹಸ್ಯಗಳನ್ನು ತಿಳಿದುಕೊಳ್ಳುವ ಮೂಲಕ ಅಮೆರಿಕದ ವಾಣಿಜ್ಯ ಆರ್ಥಿಕ ಆದಾಯದ ಮೂಲಕ್ಕೆ ಕೊಡಲಿಪೆಟ್ಟು ನೀಡಲು ಹೊರಟಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಐಎ ಉಪ ನಿರ್ದೇಶಕ ಮೈಕೆಲ್ ಕೊಲ್ಲಿನ್ಸ್ ಅವರು, ಬೀಜಿಂಗ್ ನೇರವಾಗಿ ಯುದ್ಧ ಮಾಡಲು ಮುಂದಾಗದೇ ಪರೋಕ್ಷವಾಗಿ ನಮ್ಮ ಆದಾಯದ ವಾಣಿಜ್ಯ ಮೂಲಗಳ ಮೇಲೆ ಕಣ್ಣಿಟ್ಟಿದೆ. ಪ್ರಮುಖವಾಗಿ ಚೀನಾ ರಷ್ಯಾದೊಂದಿಗಿನ ತನ್ನ ವಾಣಿಜ್ಯ ವಹಿವಾಟನ್ನು ದ್ವಿಗುಣಗೊಳಿಸಿಕೊಂಡಿದ್ದು, ಅಮೆರಿಕದ ವಾಣಿಜ್ಯ ರಹಸ್ಯಗಳನ್ನು ತಿಳಿದುಕೊಳ್ಳಲು ಚೀನಾ ಸದಾಕಾಲ ಯತ್ನಿಸುತ್ತಿರುತ್ತದೆ ಎಂದು ಹೇಳಿದರು. ಅಂತೆಯೇ ವಾಣಿಜ್ಯಾತ್ಮಕವಾಗಿ ಮಾತ್ರವಲ್ಲದೇ ಚೀನಾ ದೇಶ ತನ್ನ ಸೇನೆಯನ್ನೂ ಅಧುನೀಕರಣಗೊಳಿಸುತ್ತಿದೆ. ಚೀನಾ ಮಾತ್ರವಲ್ಲದೇ ವಿಶ್ವದ ಇತರೆ ರಾಷ್ಟ್ರಗಳೂ ಕೂಡ ಸೇನೆಯ ಆಧುನೀಕರಣದತ್ತ ದಾಪುಗಾಲಿರಿಸಿವೆ. ದಕ್ಷಿಣ ಚೀನಾ ಸಮುದ್ರಲ್ಲಿ ಚೀನಾ ದೇಶ ಅನಧಿಕೃತವಾಗಿ ದ್ವೀಪಗಳನ್ನು ಸೃಷ್ಟಿ ಮಾಡಿದ್ದು ಮಾತ್ರವಲ್ಲದೇ ಅಲ್ಲಿ ತನ್ನ ಸೈನಿಕ ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. 
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಫ್ ಬಿಐ ತಜ್ಞರು ಇತ್ತೀಚೆಗೆ ಚೀನಾ ದೇಶ ಆಕ್ರಮಣಕಾರಿ ಮನೋಭಾವ ತೋರುತ್ತಿದ್ದು, ತನ್ನ ಕೌಂಟರ್ ಇಂಟಲಿಜೆನ್ಸ್ ಮೂಲಕ ಅಮೆರಿಕಕ್ಕೆ ಸೆಡ್ಡುಹೊಡೆದು ನಿಂತಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ದಳದ ನಿರ್ದೇಶಕ ಡ್ಯಾನ್ ಕೋಟ್ಸ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT