ಧರ್ಮೇಂದ್ರ ಪ್ರಧಾನ್ 
ವಿದೇಶ

ರಿಯಾಯಿತಿ ದರದಲ್ಲಿ ಇಂಧನ ಪೂರೈಕೆಗೆ 'ಒಪೆಕ್ ಸಭೆ 'ಯಲ್ಲಿ ಒತ್ತಾಯ- ಧರ್ಮೇಂದ್ರ ಪ್ರಧಾನ್

ರಿಯಾಯಿತಿ ದರದಲ್ಲಿ ಇಂಧನ ಪೂರೈಸುವಂತೆ ಪೆಟ್ರೋಲಿಯಂ ರಪ್ತು ರಾಷ್ಟ್ರಗಳ ಒಕ್ಕೂಟ- ಒಪೆಕ್ಸ್ ಸಭೆಯಲ್ಲಿ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ವಿಯನ್ನಾ: ರಿಯಾಯಿತಿ ದರದಲ್ಲಿ ಇಂಧನ  ಪೂರೈಸುವಂತೆ  ಪೆಟ್ರೋಲಿಯಂ ರಪ್ತು ರಾಷ್ಟ್ರಗಳ ಒಕ್ಕೂಟ- ಒಪೆಕ್ಸ್ ಸಭೆಯಲ್ಲಿ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಪೆಟ್ರೋಲಿಯಂ ಖಾತೆ  ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಸಿಗಬೇಕೆಂದು ನಾವು ಯಾವಾಗಲೂ ನಿರೀಕ್ಷಿಸುತ್ತೇವೆ. ಕಳೆದ ಹಲವು ವರ್ಷಗಳಿಂದ ಭಾರತ ಇದನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಮುಂದಿನ ಸಭೆಯಲ್ಲಿ ಅದನ್ನೇ ಪುನರಾವರ್ತಿಸುತ್ತೇವೆ. ನಾಲ್ಕು ವರ್ಷಗಳ ಹಿಂದೆ ಭಾರತದ ಮಾತನ್ನು ನಿರ್ಲಕ್ಷಿಸುತ್ತಿದ್ದರು. ಆದರೆ ಈಗ ಭಾರತ ಸ್ವಂತ ಧ್ವನಿ ಹೊಂದಿದೆ ಎಂದರು.

ಭಾರತದ ಅಗತ್ಯಕ್ಕೆ ತಕ್ಕಂತೆ  ದುಬಾರಿಯಲ್ಲದ ರಿಯಾಯಿತ ದರದಲ್ಲಿ  ಒಪೆಕ್ ರಾಷ್ಟ್ರಗಳು ಇಂಧನ ಪೂರೈಸುವಂತೆ ಪ್ರಧಾನ್ ಆಗ್ರಹಿಸಿದರು.

 ಒಪೆಕ್ ರಾಷ್ಟ್ರಗಳ ಸಭೆಯ ಮಹತ್ವ ಕುರಿತಂತೆ ವಿವರಿಸಿದ ಪ್ರಧಾನ್, ಇಂಧನ ಭದ್ರತೆ ಯುಗದಲ್ಲಿ ಈ ಸಭೆ ಮಹತ್ವದ್ದಾಗಿದೆ.  ಇಂಧನ ಪೂರೈಕೆ ಜಾಲದಲ್ಲಿ ಅಡ್ಡಿಯುಂಟು ಮಾಡದ ಬಗ್ಗೆ ಭರವಸೆ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಿಯನ್ನಾದಲ್ಲಿ ನಡೆಯಲಿರುವ ಒಪೆಕ್ ರಾಷ್ಟ್ರಗಳ ಸಭೆಯಲ್ಲಿ ಭಾರತ ಕೂಡಾ ಪಾಲ್ಗೊಳ್ಳಲಿದ್ದು, ನಮ್ಮ  ರಾಷ್ಟ್ರದ ಸಲಹೆಗಳನ್ನು ಮಂಡಿಸಲಾಗುವುದು,  ತೈಲ ಉತ್ಪನ್ನ ರಾಷ್ಟ್ರಗಳ ಬೆಲೆ ಇಳಿಕೆ ಎದುರು ನೋಡಲಾಗುತ್ತಿಗೆ, ತೈಲ ಬೆಲೆ ಗಳು ಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್