ಗೋಡಂಬಿ ಅಲರ್ಜಿಯಾದರೆ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸಿ ಎಂದ ವಿಮಾನ ಸಿಬ್ಬಂದಿ 
ವಿದೇಶ

ಗೋಡಂಬಿ ಅಲರ್ಜಿಯಾದರೆ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸಿ ಎಂದ ವಿಮಾನ ಸಿಬ್ಬಂದಿ

ಹುರಿದ ಗೋಡಂಬಿಯ ವಾಸನೆ ನನಗಾಗಲ್ಲ ಎಂದ ಭಾರತೀಯ ಸೋದರರಿಬ್ಬರಿಗೆ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಕುಳಿತು ಪಯಣಿಸಲು ಸೂಚಿಸಿದೆ.

ಲಂಡನ್: ಹುರಿದ ಗೋಡಂಬಿಯ ವಾಸನೆ ನನಗಾಗಲ್ಲ ಎಂದ ಭಾರತೀಯ ಸೋದರರಿಬ್ಬರಿಗೆ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಕುಳಿತು ಪಯಣಿಸಲು ಸೂಚಿಸಿದೆ.
ಶನೆನ್‌ ಸಹೋಟಾ ಮತ್ತು ಸಂದೀಪ್‌ ಸಹೋಟಾ ಎನ್ನುವ ಭಾರತೀಯ ಮೂಲದ ಸೋದರರು ಕಳೆದ ವಾರ ಲಂಡನ್ ನಿಂದ ಸಿಂಗಾಪುರಕ್ಕೆ ಎಮಿರೇಟ್ಸ್‌ ವಿಮಾನದಲ್ಲಿ ತೆರಳುತ್ತಿದ್ದರು. ಅವರಿಗೆ ಹುರಿದ ಗೋಡಂಬಿ ವಾಸನೆ ಅಲರ್ಜಿ ಇತ್ತು. ಆದರೆ ಅದೇ ವಿಮಾನದಲ್ಲಿ ಹುರಿದ ಗೋಡಂಬಿ ಹಾಕಿದ್ದ ಬಿರಿಯಾನಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. 
’ನಮಗೆ ಈ ವಾಸನೆ ಅಲಜಿ ಇದೆ, ನಮಗೆ ಇದರಿಂಡ ಪಾರುಮಾಡಿ’ ಎಂದು ಸೋದರರಿಬ್ಬರೂ ವಿಮಾನದಲ್ಲಿನ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಮೂರು ಬಾರಿ ಹೀಗೆ ಮನವಿ ಮಾಡಿದರೂ ಸಿಬಂದಿ ಮಾತ್ರ ಯಾವ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಾಗಿ ಅವರಿಗೆ ವಿಮಾನದ ಶೌಚಾಲಯದಲ್ಲಿ ಕುಳಿತು ಪ್ರಯಾಣಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ .ಸಹೋಟಾ ಸೋದರರು ವಿಮಾನದ ಆಸನಗಳ ಹಿಂಭಾಗದಲ್ಲಿ ಕುಳಿತೇ 7 ಗಂಟೆ ಪ್ರಯಾಣ ಮಾಡಿದ್ದಾರೆ.
ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವಾಗಲೂ, ಪ್ರಯಾಣ ಪ್ರಾರಂಭಿಸುವ ಮುನ್ನವೂ ತಮಗೆ ಗೋಡಂಬಿ ಅಲರ್ಜಿ ಇದೆ ಎನ್ನುವುದನ್ನು ವಿಮಾನಯಾನ ಸಂಸ್ಥೆಗೆ ತಿಳಿಸಿದ್ದೆವು. ಇಷ್ಟಿದ್ದರೂ ಸಹ ಗೋಡಂಬಿ ಬೆರೆಸಿದ ಬಿರಿಯಾನಿಯನ್ನೇ ಪೂರೈಸಲಾಗಿದೆ. ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬ್ಲಾಂಕೆಟ್‌ನಿಂದ ಮೂಗು ಮುಚ್ಚಿಕೊಂಡು ವಿಮಾನದ ಆಸನಗಳ ಹಿಂಭಾಗ ಕುಳಿತು ಪ್ರಯಾಣ ನಡೆಸಬೇಕಾಯಿತು ಎನ್ನುವುದಾಗಿ ಸೋದರರು ತನ್ನ ಅಳಲು ಹೇಳಿಕೊಂಡಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಯಿಸಿರುವ ವಿಮಾನಯಾನ ಸಂಸ್ಥೆ "ಸಹೋಟಾ ಸಹೋದರರ ಬಗ್ಗೆ ನಮಗೆ ಅನುಕಂಪವಿದೆ, ಆದರೆ ಅವರ ಟಿಕೆಟ್ ಬುಕ್ಕಿಂಗ್ ಮಾಹಿತಿಯಲ್ಲಿ ಗೋಡಂಬಿ ಅಲರ್ಜಿಯ ಬಗೆಗೆ ಯಾವ ದಾಖಲೆಗಳಿಲ್ಲ. ಅಲ್ಲದೆ ವಿಮಾನದ ಪ್ರತಿ ಪ್ರಯಾಣಿಕರ ಆದ್ಯತೆಯನ್ನು ಪೂರೈಸುವುದು ನಮ್ಮ ಉದ್ದೇಶವಾಗಿರುತ್ತದೆ. ಈ ಇಬ್ಬರಿಗಾಗಿ ವಿಮಾನದ ಯಾರಿಗೂ ಗೋಡಂಬಿ ಬೆರೆತ ಊಟ ನೀಡಬಾರದೆನ್ನುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುರ್ತು ಕಾರಣ'ಗಳಿಂದಾಗಿ ಎಲ್ಲಾ ಅಧ್ವಾನವಾಯಿತು: ವಿಮಾನಗಳ ರದ್ದತಿ ಕುರಿತು IndiGo ಸ್ಪಷ್ಟನೆ

ಪಶ್ಚಿಮ ಬಂಗಾಳ: 'ಬಾಬರಿ ಮಸೀದಿ' ನಿರ್ಮಾಣದ ಪ್ಲಾನ್, TMC ಶಾಸಕ ಹುಮಾಯೂನ್ ಕಬೀರ್ ಅಮಾನತು, ಹೊಸ ಪಕ್ಷ ರಚನೆಯ ಘೋಷಣೆ!

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಎಲ್ಗರ್ ಪರಿಷತ್ ಪ್ರಕರಣ: 5 ವರ್ಷಗಳ ನಂತರ DU ಮಾಜಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

SCROLL FOR NEXT