ನಿವೃತ್ತಿಯಾದರೂ ಬಿಟ್ಟಿಲ್ಲ ಶಿಕ್ಷಕ ವೃತ್ತಿ, ಶ್ವೇತ ಭವನದ ಪತ್ರದಲ್ಲಿ ದೋಷಗಳನ್ನು ಗುರುತಿಸಿದ ಶಿಕ್ಷಕಿ! 
ವಿದೇಶ

ನಿವೃತ್ತಿಯಾದರೂ ಬಿಟ್ಟಿಲ್ಲ ಶಿಕ್ಷಕ ವೃತ್ತಿ, ಶ್ವೇತ ಭವನದ ಪತ್ರದಲ್ಲಿ ದೋಷಗಳನ್ನು ಗುರುತಿಸಿದ ಶಿಕ್ಷಕಿ!

ಶಿಕ್ಷಕರು ನಿವೃತ್ತರಾದ ನಂತರವೂ ತಪ್ಪುಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.

ನ್ಯೂಯಾರ್ಕ್: ಶಿಕ್ಷಕರು ನಿವೃತ್ತರಾದ ನಂತರವೂ  ತಪ್ಪುಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಈಕೆ ಸಾಮಾನ್ಯರ ತಪ್ಪನ್ನು ತಿದ್ದಿ ಸುದ್ದಿಯಾಗಿಲ್ಲ, ಬದಲಾಗಿ ಅಮೆರಿಕದ ಶಕ್ತಿ ಕೇಂದ್ರ ಶ್ವೇತ ಭವನದ ಪತ್ರಗಳಲ್ಲಿ ಕಂಡು ಬಂದ ದೋಷಗಳನ್ನು ತಿದ್ದಿದ್ದು ಸುದ್ದಿಯಾಗಿದ್ದಾರೆ. 
ಆಗಿದ್ದು ಇಷ್ಟೇ,  ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದಿದ್ದ ಶೂಟಿಂಗ್ ನಲ್ಲಿ 17 ಜನರು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಯವೊನೆ ಮ್ಯಾಸನ್ (61) ಎಂಬ ನಿವೃತ್ತ ಶಿಕ್ಷಕಿ ಡೊನಾಲ್ಡ್ ಟ್ರಂಪ್ ಗೆ ಪತ್ರ ಬರೆದು ಪ್ರತಿಯೊಬ್ಬರ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದರ ಬಗ್ಗೆ ಕೇಳಿದ್ದರು. ಕೊನೆಗೊಂದು ದಿನ ಶ್ವೇತ ಭವನದಿಂದ ಉತ್ತರವೂ ಬಂದಿದೆ. ಆದರೆ ಅದರಲ್ಲಿ ಶಿಕ್ಷಕಿ ಪ್ರಸ್ತಾಪಿಸಿದ್ದ ಆಕೆಯ ಆತಂಕಗಳ ಬಗ್ಗೆ ಏನನ್ನೂ ಪ್ರಸ್ತಾಪಿಸಿರಲಿಲ್ಲ. ಇದರಿಂದ ಕುಪಿತಗೊಂಡ ಶಿಕ್ಷಕಿ ಶ್ವೇತ ಭವನದಿಂದ ತಮಗೆ ಬಂದಿದ್ದ ಪತ್ರದಲ್ಲಿದ್ದ ದೋಷಗಳನ್ನು ತೋರಿಸಿ ಫೇಸ್ ಬುಕ್ ನಲ್ಲಿ ಯಥಾವತ್ ಪ್ರಕಟಿಸಿದ್ದು, ಇದನ್ನೇ ಶ್ವೇತ ಭವನಕ್ಕೆ ಇ-ಮೇಲ್ ಮೂಲಕ ವಾಪಸ್ ಕಳಿಸಿದ್ದಾರೆ. 
"ಪತ್ರದಲ್ಲಿ ನಾನು ಪ್ರಸ್ತಾಪಿಸಿದ್ದ ಆತಂಕಕಾರಿ ವಿಷಯಗಳ ಬಗ್ಗೆ ಶ್ವೇತ ಭವನ ಉತ್ತರಿಸಿಲ್ಲ, ಬದಲಾಗಿ ಘಟನೆ ನಡೆದ ಬಳಿಕ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ, ಎಷ್ಟೆಲ್ಲಾ ಸಭೆಗಳನ್ನು ಮಾಡಿದ್ದೇವೆ ಎಂಬುದನ್ನು ಹೇಳಲಾಗಿತ್ತು. ಇದನ್ನು ಗಮನಿಸಿದ ಶಿಕ್ಷಕಿ ಪತ್ರದಲ್ಲಿದ್ದ ಅಕ್ಷರ ಹಾಗೂ ವ್ಯಾಕರಣ ದೋಷಗಳನ್ನು ಗುರುತಿಸಿ, ನೀವು ಗ್ರಾಮರ್ ನ್ನು ಪರಿಶೀಲಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

India vs Sri Lanka: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್!

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

'ಮಹಾತ್ಮ ಗಾಂಧಿ, ನೆಹರು ಅಷ್ಟೇ ಅಲ್ಲ ವಾಜಪೇಯಿ ವಿರುದ್ಧವೂ ಕೇಸ್ ದಾಖಲಿಸಿ': ವಂದೇ ಮಾತರಂ ವಿವಾದ ಕುರಿತು ಖರ್ಗೆ ತಿರುಗೇಟು

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video