ಸಂಗ್ರಹ ಚಿತ್ರ 
ವಿದೇಶ

ನಿಪಾಹ್ ವೈರಸ್: ಕೇರಳದ ಹಣ್ಣು ಆಮದಿಗೆ ಯುಎಇ ನಿಷೇಧ

ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಪಾಹ್ ವೈರಾಣುವಿಗೆ 13 ಮಂದಿ ಬಲಿಯಾದ ಬೆನ್ನಲ್ಲೇ ಅತ್ತ ಯುಎಇ ಸರ್ಕಾರ ಕೇರಳದಿಂದ ಹಣ್ಣು ಮತ್ತು ತರಕಾರಿಗಳ ಆಮದಿನ ಮೇಲೆ ನಿಷೇಧ ಹೇರಿದೆ.

ಅಬುದಾಬಿ: ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಪಾಹ್ ವೈರಾಣುವಿಗೆ 13 ಮಂದಿ ಬಲಿಯಾದ ಬೆನ್ನಲ್ಲೇ ಅತ್ತ ಯುಎಇ ಸರ್ಕಾರ ಕೇರಳದಿಂದ ಹಣ್ಣು ಮತ್ತು ತರಕಾರಿಗಳ ಆಮದಿನ ಮೇಲೆ ನಿಷೇಧ ಹೇರಿದೆ.
ಯುಎಇಯ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲ ಇಂದು ತನ್ನ ಆದೇಶ ಹೊರಡಿಸಿದ್ದು, ಕೇರಳದಿಂದ ಯಾವುದೇ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ಹೇರಿದೆ ಎಂದು ದಿ ನ್ಯಾಷನಲ್ ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಯುಎಇ ಆರೋಗ್ಯ ಇಲಾಖೆ ಕೂಡ ತನ್ನ ನಾಗರಿಕರಿಗೆ ಕೇರಳಕ್ಕೆ ಪ್ರಯಾಣ ಮಾಡದಂತೆ ಸೂಚನೆ ನೀಡಿದೆ. 
ಅನಿವಾರ್ಯ ಕಾರಣಗಳ ಹೊರತಾಗಿ ಕೇರಳಕ್ಕೆ ಪ್ರಯಾಣ ಮಾಡದಂತೆ ಯುಎಇ ಸರ್ಕಾರ ತನ್ನ ನಾಗರಿಕರಿಗೆ ಮನವಿ ಮಾಡಿದ್ದು, ಕೇರಳದಲ್ಲಿರುವ ತನ್ನ ನಾಗರಿಕರು ಸೋಂಕಿಗೆ ತುತ್ತಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಅಂತೆಯೇ ಯುಎಇಯಲ್ಲಿಯೂ ಅಲ್ಲಿನ ಸರ್ಕಾರ ನಾಗರಿಕರಿಗೆ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
1. ಹಣ್ಣುಗಳು ಮಾಗಿವೆಯೇ, ತಾಜಾ ಹಣ್ಣುಗಳೇ ಮತ್ತು ಶುಷ್ಕವಾಗದ, ತೇವ, ಬಣ್ಣ-ಬದಲಾವಣೆಯಾದ ಹಣ್ಣುಗಳಾಗಿದ್ದರೆ ಬಳಕೆ ಬೇಡ.
2. ಹಣ್ಣನ್ನು ತಿನ್ನುವ ಮೊದಲು, ಕೀಟ ಸೋಂಕುಗಳು, ಕೊಳಕು ಅಥವಾ ಕಚ್ಚಿದ ಅಥವಾ  ಇತರೆ ಅವುಗಳ ಮೇಲೆ ಕಾಣುವ ದೋಷಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಿ.
3. ಯಾವುದೇ ವಿಚಿತ್ರ ವಾಸನೆ ಅಥವಾ ವಿಚಿತ್ರ ರುಚಿಯಿಂದ ಹಣ್ಣುಗಳು ಮುಕ್ತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ
4. ಪ್ಯಾಕೇಜ್ ಯಾವುದೇ ಹಾನಿಗೊಳಗಾದ ಹಣ್ಣನ್ನು ಒಳಗೊಂಡಿರಬಾರದು ಮತ್ತು ಅವುಗಳನ್ನು ತಿನ್ನುವ ಮೊದಲು ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಿರಿ
5. ಹಣ್ಣಿನ ಅಥವಾ ತರಕಾರಿಗಳ ಮೂಲವನ್ನು ದೃಢೀಕರಿಸದ ಹೊರತು ಅವುಗಳನ್ನು ಬಳಸಬೇಡಿ ಎಂದು ಯುಎಇ ಸರ್ಕಾರ ಸಲಹೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಯುಎಇ ಆರೋಗ್ಯ ಕಾರ್ಯದರ್ಶಿಗಳು, ಕೇರಳದಿಂದ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು ದೇಶಕ್ಕೆ ಬರುತ್ತಿತ್ತು. ವೈರಾಣು ಸೋಂಕು ಭೀತಿ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಕೇರಳದ ಹಣ್ಣು ಮತ್ತು ತರಕಾರಿ ಆಮದಿಗೆ ನಿಷೇಧ ಹೇರಿದ್ದೇವೆ. ಅಂತೆಯೇ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT