ಸಂಗ್ರಹ ಚಿತ್ರ 
ವಿದೇಶ

ಅಮಾನುಷ ಕೃತ್ಯ: ಪ್ರಿಯತಮನನ್ನು ತುಂಡರಿಸಿ, ಅಡುಗೆ ಮಾಡಿ ಪಾಕ್ ಕೆಲಸಗಾರರಿಗೆ ಬಡಿಸಿದ ಮಹಿಳೆ!

ಮಹಿಳೆಯೊಬ್ಬಳು ಮಾಜಿ ಪ್ರಿಯಕರನೊಬ್ಬನನ್ನು ಕೊಂದು ಆತನ ದೇಹವನ್ನು ತುಂಡರಿಸಿ ಮಾಂಸವನ್ನು ಬೇಯಿಸಿ ಅಕ್ಕಿಯೊಡನೆ ಬೆರೆಸಿ ಪಾಕಿಸ್ತಾನ ಮೂಲದ ತನ್ನ ಮನೆಗೆಲಸದವರಿಗೆ....

ದುಬೈ: ಮಹಿಳೆಯೊಬ್ಬಳು ಮಾಜಿ ಪ್ರಿಯಕರನೊಬ್ಬನನ್ನು ಕೊಂದು ಆತನ ದೇಹವನ್ನು ತುಂಡರಿಸಿ ಮಾಂಸವನ್ನು ಬೇಯಿಸಿ ಅಕ್ಕಿಯೊಡನೆ ಬೆರೆಸಿ ಪಾಕಿಸ್ತಾನ ಮೂಲದ  ತನ್ನ ಮನೆಗೆಲಸದವರಿಗೆ ಊಟಕ್ಕೆ ಬಡಿಸಿರುವ ಅಮಾನುಷ ಘಟನೆ ಯುಎಇ ನ ಅಬುದಾಬಿಯಲ್ಲಿ ನಡೆದಿದೆ.
ಅಲ್ ಎನ್ (30) ಎಂಬ ಮಹಿಳೆ ತಾನೇ ತನ್ನ ಪ್ರಿಯಕರನ ದೇಹವನ್ನು ತುಂಡರಿಸಿ ಅದನ್ನು ಖಾದ್ಯದೊಡನೆ ಬೆರೆಸಿ ಪಾಕಿಸ್ತಾನಿ ಮೂಲದ ಕೆಲಸಗಾರರಿಗೆ ನಿಡಿದ್ದಾಗಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾಳೆ.
ಕೊಲೆಗೀಡಾದ ಪ್ರಿಯಕರ ಹಾಗೂ ಆಲ್ ಎನ್ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಆದರೆ ಕಳೆದ ಕೆಲ ದಿನಗಳಿಂದ ಯುವಕ ಈಕೆಯಿಂದ ಬೇರಾಗಿದ್ದಲ್ಲದೆ ಬೇರೊಬ್ಬ ಮಹಿಳೆಯೊಡನೆ ಓಡಾಡುತ್ತಿದ್ದ. ಇದರಿಂದ ಕೋಪಗೊಂಡ ಆಲ್ ಎನ್ ಆತನಿಗೆ ಬುದ್ದಿ ಕಲಿಸಲು ಈ ಭೀಕರ ಕೃತ್ಯ ಎಸಗಿದ್ದಾಳೆ.
ತಾನು ಪ್ರಿಯಕರನ ದೇಹ ಬಳಸಿ ತಯಾರಿಸಿದ ಖಾದ್ಯವನ್ನು ಕೆಲಸದವರಿಗೆ ಹಂಚಿದ ಬಳಿಕ ಉಳಿದ ಕೆಲ ತುಣುಕುಗಳನ್ನು ಬೀದಿಯಲ್ಲಿದ್ದ ನಾಯಿಗಳಿಗೆ ಎಸೆದಿದ್ದಳು.
ಅಪರಾಧ ಕೃತ್ಯ ನಡೆದು ಅದಾಗಲೇ ತಿಂಗಳು ಉರುಳಿದ್ದರೂ ಇತ್ತೀಚೆಗೆ ಮೃತನ ಸೋದರೆಅ ಯುವಕನನ್ನು ಹುಡುಕಿ ಆಕೆಯ ಮನೆಗೆ ಧಾವಿಸಿದಾಗಷ್ಟೇ ಬೆಳಕಿಗೆ ಬಂದಿದೆ.
ಮೊದಲಿಗೆ ಯುವಕನ ಸೋದರ ಆಗಮಿಸಿದಾಗ ಆರೋಪಿ ತನಗೇನೂ ತಿಳಿದಿಲ್ಲ ಎಂದಿದ್ದಾಳೆ. ಯುವಕನು ಬೇರೊಬ್ಬಳೊಡನೆ ಪ್ರೇಮ ಸಂಬಂಧ ಇರಿಸಿಕೊಂಡ ಬಳಿಕ ತನ್ನಿಂದ ದೂರಾದನೆಂದು ಆಕೆ ಹೇಳಿದ್ದಾಳೆ. ಆದರೆ ಆಕೆಯ ಅಡಿಗೆ ಮನೆಯ ಮಿಕ್ಸಿ ಬಳಿ ಸಿಕ್ಕಿದ ಮೃತನ ಹಲ್ಲಿನಿಂದಾಗಿ ಪ್ರಕರಣ  ಬಯಲಾಗಿದೆ.
ವಿಚಾರಣೆ ವೇಳೆ ತಾನು ಕೃತ್ಯ ನಡೆಸಿದ ತರುವಾಯ ಅಪಾರ್ಟ್ ಮೆಂಟ್ ಸ್ವಚ್ಚಗೊಳಿಸಲು ಸ್ನೇಹಿತನಿಂದ ಸಹಾಯ ಪಡೆದುಕೊಂಡಳು ಎಂದು ಅವಳು ಹೇಳಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT