ಎಫ್ -16 
ವಿದೇಶ

ಎಫ್ -16 ಪತನದ ಕುರಿತ ಐಎಎಫ್ ಪುರಾವೆ ಸುಳ್ಳು, ರಾಡಾರ್ ಚಿತ್ರಗಳು ನಿಜವಲ್ಲ ಎಂದ ಪಾಕ್

ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತದ ವಾಯುಪಡೆಫೆಬ್ರವರಿ 27ರಂದು ಹೊಡೆದುರುಳಿಸಿರುವ ಕುರಿತು ಸೋಮವಾರ ವಾಯ್ಪಡೆ ಮುಖ್ಯಸ್ಥರು ಅಧಿಕೃತ ಸಾಕ್ಷಿಯನ್ನು ಬಹಿರಂಗಪಡಿಸಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತದ ವಾಯುಪಡೆ ಫೆಬ್ರವರಿ 27ರಂದು ಹೊಡೆದುರುಳಿಸಿರುವ ಕುರಿತು ಸೋಮವಾರ ವಾಯ್ಪಡೆ ಮುಖ್ಯಸ್ಥರು ಅಧಿಕೃತ ಸಾಕ್ಷಿಯನ್ನು ಬಹಿರಂಗಪಡಿಸಿದ್ದಾರೆ.  ಆದರೆ ಪಾಕಿಸ್ತಾನ ಭಾರತ ನಮಗೆ ಸೇರಿದ್ದ ಎಫ್ -16 ಉರುಳಿಸಿದೆ ಎನ್ನುವುದಕ್ಕೆ ಇನ್ನೂ ಯಾವುದೇ ಸಾಕ್ಷಿಯನ್ನು ನೀಡಲು ವಿಫಲವಾಗಿದೆ ಎಂದು ತನ್ನ ಮೊಂಡುವಾದವನ್ನೇ ಮುಂದುವರಿಸಿದೆ.
ವಾಯುದಾಳಿಯ ಸಮಯದಲ್ಲಿ ಪಕಿಸ್ತಾನದ ಎಫ್ -16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ ಕುರಿತು  ಭಾರತೀಯ ವಾಯುಪಡೆಯು ಸೋಮವಾರ ರಾಡಾರ್ ಚಿತ್ರಗಳ ಆಧಾರವನ್ನು ಬಹಿರಂಗ ಮಾಡಿದೆ. ಅಲ್ಲದೆ ಇದು "ನಿರಾಕರಿಸಲಾಗದ ಸಾಕ್ಷ್ಯ"  ಎಂದೂ ಹೇಳಿದೆ.
ಆದರೆ ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿ "ಸುಳ್ಳುಗಳನ್ನು ಪುನರಾವರ್ತಿಸಿ ಹೇಳಿದ ಮಾತ್ರಕ್ಕೆ ಸತ್ಯವಾಗುವುದಿಲ್ಲ. ಎಫ್ -16 ಹೊಡೆದುರುಳಿಸಿದ ಬಗ್ಗೆ ಚಿತ್ರಗಳನ್ನು ತೋರಿಸಿದ ಹೊರತಾಗಿಯೂ  ಐಎಎಫ್ ಇನ್ನೂ ಖಚಿತ ಸಾಕ್ಷ್ಯವನ್ನು ನೀಡುವ ಮೂಲಕ ಸಾಬೀತು ಪಡಿಸಿಲ್ಲ" ಎಂದಿದ್ದಾರೆ.
ಸೋಮವಾರ ಪಾಕಿಸ್ತಾನ ಜೆಟ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಭಾರತ ಬಳಕೆ ಮಾಡಿದ್ದ ಐಎಎಫ್ ಸುಖೋಯ್ ಎಂಕೆಐ, ಮಿರಾಜ್ 2000 ಮತ್ತು ಮಿಗ್ 21 ಬೈಸನ್ ಫೈಟರ್ ಜೆಟ್ ಗಳ ರಾಡಾರ್ ದಾಖಲಾತಿ ಸಂಗ್ರಹವನ್ನೂ ವಾಯುಸೇನೆ ಬಿಡುಗಡೆ ಮಾಡಿದ್ದು ಈ ಮೂಲಕ ಪಾಕ್ ಯುದ್ಧ ವಿಮಾನ ಪತನವನ್ನು ಜಗಜ್ಜಾಹೀರುಗೊಳಿಸಿದೆ. ಈ ಮೂಲಕ ಅಮೆರಿಕ ಪತ್ರಿಕೆ 'ಫಾರಿನ್ ಪಾಲಿಸಿ' ವರದಿ ಸುಳ್ಳು ಎಂದು ಸಾಬೀತಾಗಿದೆ.
ಅಮೆರಿಕ ಪತ್ರಿಕೆ 'ಫಾರಿನ್ ಪಾಲಿಸಿ' ಪತ್ರಿಕೆಯು ಅಮೆರಿಕಾ ಸೇನೆ ಪಾಕಿಸ್ತಾನಕ್ಕೆ ನೀಡಿದ್ದ ಎಫ್ -16  ಯುದ್ಧ ವಿಮಾನಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ಅಂದು ಭಾರತ ಪಾಕಿಸ್ತಾನದ ಎಫ್ -16  ಹೊಡೆದುರುಳಿಸಿದ್ದು ಸುಳ್ಳು ಎಂದು ವರದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ