ಶೇಖ್ ರಶೀದ್ ಅಹಮ್ಮದ್ 
ವಿದೇಶ

ನಾವು ಯುದ್ಧದ ಮೂಡ್ ನಲ್ಲಿದ್ದೇವೆ, ಮುಂದಿನ 72 ಗಂಟೆ ನಿರ್ಣಾಯಕ: ಪಾಕ್ ರೈಲ್ವೆ ಸಚಿವ

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹಮ್ಮದ್ ಅವರು, ಮುಂದಿನ 72 ಗಂಟೆಗಳು ನಿರ್ಣಾಯಕ...

ಇಸ್ಲಾಮಾಬಾದ್: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹಮ್ಮದ್ ಅವರು, ಮುಂದಿನ 72 ಗಂಟೆಗಳು ನಿರ್ಣಾಯಕ ಮತ್ತು ಭಾರತ - ಪಾಕ್ ನಡುವೆ ಯುದ್ಧ ನಡೆದರೆ, ಅದು ಎರಡನೇ ವಿಶ್ವ ಸಮರಕ್ಕಿಂತಲೂ ದೊಡ್ಡದಾಗಿರುತ್ತದೆ ಎಂದು ಬುಧವಾರ ಹೇಳಿದ್ದಾರೆ.
ಪಾಕಿಸ್ತಾನ ಬಹುತೇಕ ಯುದ್ಧದ ಮೂಡ್ ನಲ್ಲಿದೆ ಮತ್ತು ಯುದ್ಧಕ್ಕೆ ಸಂಪೂರ್ಣ ಸಿದ್ಧವಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಅಲ್ಲದೆ ಪಾಕ್ ರೈಲ್ವೆಗೆ ತುರ್ತು ಪರಿಸ್ಥಿತಿಯ ಕಾನೂನನ್ನು ಪಾಲಿಸುತ್ತಿದ್ದಾರೆ ಎಂದಿದ್ದಾರೆ.
ಭಾರತ ಪಾಕ್ ನಡುವೆ ಯುದ್ಧ ನಡೆದರೆ ಅದು ಎರಡನೇ ವಿಶ್ವ ಸಮರಕ್ಕಿಂತ ದೊಡ್ಡದಾಗಿರುತ್ತದೆ ಮತ್ತು ಅದೇ ಕೊನೆಯ ಯುದ್ಧವಾಗಲಿದೆ ಎಂದು ಶೇಖ್ ರಶೀದ್ ಅವರು ಹೇಳಿರುವುದಾಗಿ ದುನ್ಯಾ ಟಿವಿ ವರದಿ ಮಾಡಿದೆ.
ಇತ್ತೀಚಿಗಷ್ಟೆ ಪಾಕ್ ರೈಲ್ವೆ ಸಚಿವ, ಯಾರಾದರೂ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಅವರ ಕಣ್ಣು ಕೀಳುತ್ತೇವೆ ಎಂದಿದ್ದರು.
ನಾವು ಬಳೆ ತೊಟ್ಟುಕೊಂಡಿಲ್ಲ. ಪಾಕಿಸ್ತಾನವನ್ನು ಕೊಳಕು ಕಣ್ಣಿನಿಂದ ನೋಡಿದರೆ, ಅವರ ಕಣ್ಣು ಕಿತ್ತು ಹಾಕುತ್ತೇವೆ. ನಂತರ ಹಲ್ಲು. ಪಾಕಿಸ್ತಾನ ಮುಸ್ಲಿಮರ ದೇಶ. ಇಡೀ ವಿಶ್ವದ ಮುಸ್ಲಿಮರು ಪಾಕಿಸ್ತಾನವನ್ನು ನೋಡುತ್ತಿದ್ದಾರೆ. ಇಮ್ರಾನ್ ಖಾನ್ ನೇತೃತ್ವದಲ್ಲಿ 20 ಕೋಟಿ ಜನರು ಸಿದ್ಧವಾಗಿದ್ದಾರೆ. ಶಾಂತಿಯಿರಲಿ, ಯುದ್ಧವಿರಲಿ ನಾವು ಇಮ್ರಾನ್ ಬೆಂಬಲಕ್ಕಿದ್ದೇವೆ' ಎಂದು ಶೇಖ್ ರಶೀದ್ ಅಹಮ್ಮದ್ ವಿಡಿಯೋದಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ