ಗುರುದ್ವಾರ 
ವಿದೇಶ

ಪಾಕಿಸ್ತಾನ: 500 ವರ್ಷ ಹಳೆಯದಾದ ಸಿಯಾಲ್ ಕೋಟ್ ಗುರುದ್ವಾರಕ್ಕೆ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಅವಕಾಶ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್ ನಲ್ಲಿರುವ 500 ವರ್ಷ ಹಳೆಯದಾದ ಗುರುದ್ವಾರ ಭೇಟಿಗೆ ಇನ್ನೂ ಮುಂದೆ ಭಾರತೀಯ ಯಾತ್ರಾರ್ಥಿಗಳಿಗೂ ಅವಕಾಶವಿದೆ.

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್ ನಲ್ಲಿರುವ 500 ವರ್ಷ ಹಳೆಯದಾದ ಗುರುದ್ವಾರ ಭೇಟಿಗೆ  ಇನ್ನೂ ಮುಂದೆ ಭಾರತೀಯ ಯಾತ್ರಾರ್ಥಿಗಳಿಗೂ ಅವಕಾಶವಿದೆ.  
ಲಾಹೋರ್ ನಿಂದ 140 ಕಿಲೋ ಮೀಟರ್ ದೂರದಲ್ಲಿರುವ ಸಿಯಾಲ್ ಕೋಟಿನಲ್ಲಿರುವ ಬಾಬೆ - ಡೆ- ಬರ್ ಗುರುದ್ವಾರಕ್ಕೆ ಭಾರತೀಯರ ಭೇಟಿಗೆ ಈ ಹಿಂದೆ ಅವಕಾಶವಿರಲಿಲ್ಲ. 
ಪಂಜಾಬಿನಲ್ಲಿ ಅನೇಕ ಧಾರ್ಮಿಕ ಕೇಂದ್ರಗಳಿದ್ದು, ಭಾರತೀಯರು, ಯುರೋಪಿನ್ನರು, ಕೆನಡಾ ಹಾಗೂ ಅಮೆರಿಕಾ ದೇಶದವರು ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. 
ಭಾರತದಿಂದ ಬರುವ ಯಾತ್ರಾರ್ಥಿಗಳಿಗೂ ಸಿಯಾಲ್ ಕೋಟ್ ಗುರುದ್ವಾರ ಭೇಟಿಗೆ ಅವಕಾಶ ನೀಡುವಂತೆ ಪಂಜಾಬ್ ಗೌರ್ವನರ್ ಮೊಹಮ್ಮದ್ ಸರ್ವರ್  ನಿರ್ದೇಶನ ನೀಡದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 
ಸಿಖ್ ಧರ್ಮ ಸಂಸ್ಥಾಪಕ ಗುರುನಾನಾಕ್ ಅವರ ಜಯಂತಿ ಹಾಗೂ ವಾರ್ಷಿಕ ಪುಣ್ಯ ಸ್ಮರಣೆ  ಕಾರ್ಯಕ್ರಮಕ್ಕಾಗಿ ಪ್ರತಿವರ್ಷ ನೂರಾರು ಭಾರತೀಯ ಸಿಖ್ ಯಾತ್ರಿಕರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ.
ಸಿಖ್ ಸಂಪ್ರದಾಯದ ಪ್ರಕಾರ ಗುರುನಾನಕ್  16ನೇ ಶತಮಾನದಲ್ಲಿ ಕಾಶ್ಮೀರದಿಂದ ಬರುವಾಗ ಸಿಯಾಲ್ ಕೋಟ್ ನಲ್ಲಿ ಬೆರೆ ಮರದ ಕೆಳಗೆ ವಾಸ್ತವ್ಯಹೂಡಿದ್ದರಂತೆ. ಅವರ ಜ್ಞಾಪಕಾರ್ಥವಾಗಿ ಸರ್ದಾರ್ ನಾಥ್ ಸಿಂಗ್ ಆ ಪ್ರದೇಶದಲ್ಲಿ  ಗುರುದ್ವಾರ ನಿರ್ಮಿಸಿದ್ದರು ಎಂಬುದು ತಿಳಿದುಬಂದಿದೆ. 
ಕಳೆದ ವರ್ಷ ನವೆಂಬರ್ ನಲ್ಲಿ  ಗುರುನಾನಾಕ್  ಅಂತ್ಯವಾದ ಸ್ಥಳ ಪಾಕಿಸ್ತಾನದ ಕಾರ್ತಪುರ್ ದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರ ಹಾಗೂ  ಪಂಜಾಬಿನ ಗುರುದಾಸಪುರದಲ್ಲಿರುವ ಡೇರಾ ಬಾಬಾ ನಾನಕ್ ಗುರುದ್ವಾರದ ನಡುವೆ ಕಾರಿಡಾರ್ ನಿರ್ಮಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಂದಕ್ಕೆ ಸಹಿ ಹಾಕಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT