ಎಲೆಕ್ಷನ್ ಬ್ಯಾನರ್ 
ವಿದೇಶ

ಇಸ್ರೇಲ್ : ಎಲೆಕ್ಷನ್ ಬ್ಯಾನರ್ ನಲ್ಲಿ ನೇತನ್ಯಾಹು ಜೊತೆಗೆ ಪ್ರಧಾನಿ ಮೋದಿ ಮಿಂಚಿಂಗ್!

ಇಸ್ರೇಲ್ ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಅಲ್ಲಿನ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.

ಇಸ್ರೇಲ್: ಇಸ್ರೇಲ್ ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ  ಮಿಂಚುತ್ತಿದ್ದಾರೆ. ನರೇಂದ್ರ ಮೋದಿ ಅವರ ಆಪ್ತ ಸ್ನೇಹಿತರಾಗಿರುವ  ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಅಲ್ಲಿನ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ. 
ಕಟ್ಟಡ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಇರುವ ಎಲೆಕ್ಷನ್ ಬ್ಯಾನರ್ ವೊಂದನ್ನು ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  
ಇದೇ ರೀತಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್  ಟ್ರಂಪ್, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆಗೆ ನೇತನ್ಯಾಹು ಇರುವ ಪೋಟೋಗಳು ಕೂಡಾ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.
ನೇತನ್ಯಾಹು ಚುನಾವಣಾ ಜಾಹೀರಾತು , ಪುಟಿನ್ , ಟ್ರಂಪ್  ಮತ್ತು ಮೋದಿ ಎಂಬ ಅಡಿಬರಹ ನೀಡಿ ಅಮಿಚೈ ಸ್ಟೇಯಿನ್ ಈ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 17 ರಂದು ಇಸ್ರೇಲ್ ನಲ್ಲಿ ಚುನಾವಣೆ ನಡೆಯಲಿದ್ದು, ವಿಶ್ವ ನಾಯಕರೊಂದಿಗೆ ನೇತನ್ಯಾಹು  ಒಪ್ಪಂದ ಮಾಡಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಶ್ರಮಿಸುತ್ತಿರುವ ವಿಚಾರವನ್ನು  ಚುನಾವಣಾ ಬ್ಯಾನರ್ ನಲ್ಲಿ ತಿಳಿಸಲಾಗುತ್ತಿದೆ.ಇಸ್ರೇಲ್ ನಲ್ಲಿ ಬಹುದಿನಗಳ ಕಾಲ ಆಡಳಿತ ನಡೆಸಿರುವ ನೇತನ್ಯಾಹು ಈ ಬಾರಿ ಭಾರಿ ಸವಾಲು ಎದುರಿಸುತ್ತಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಇಸ್ರೇಲ್  ಆರ್ಥಿಕ, ರಕ್ಷಣಾ  ಮತ್ತಿತರ ವಲಯಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಉಭಯ ದೇಶಗಳ ನಡುವೆ ಉತ್ತಮ ಸಂಬಂಧವಿದೆ. ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೇರಿದಾಗ ವಿಶ್ವದ ಮೊದಲ ನಾಯಕರಾಗಿ ನೇತನ್ಯಾಹು ದೂರವಾಣಿ ಮೂಲಕ ಶುಭ ಕೋರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?

ಪಾದಚಾರಿ ಮಾರ್ಗದಲ್ಲಿ Bescom ಅಟಾಟೋಪಕ್ಕೆ ಬ್ರೇಕ್; ಸಚಿವ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್..!

ಕರಾವಳಿಯಲ್ಲಿ ವಿಷ ಬಿತ್ತಿದರೆ ಪರಿಣಾಮ ನೆಟ್ಟಗಿರಲ್ಲ, ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗ್ತೀರಿ: ಪ್ರಕಾಶ್ ರಾಜ್‌ಗೆ ಉಡುಪಿ BJP ಶಾಸಕ ಎಚ್ಚರಿಕೆ..!

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!