ಸಾರ್ಕ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ 
ವಿದೇಶ

ಕಾಶ್ಮೀರ ಸಮಸ್ಯೆಯನ್ನು ಕೋಮು ದೃಷ್ಟಿಯಿಂದ ನೋಡಬೇಡಿ: ವಿದೇಶಾಂಗ ಸಚಿವ ಜೈಶಂಕರ್ 

ಕಾಶ್ಮೀರ ವಿವಾದವನ್ನು ಕೋಮು ದೃಷ್ಟಿಯಿಂದ ನೋಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ನ್ಯೂಯಾರ್ಕ್: ಕಾಶ್ಮೀರ ವಿವಾದವನ್ನು ಕೋಮು ದೃಷ್ಟಿಯಿಂದ ನೋಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.


ಭಾರತದಲ್ಲಿರುವ ಪ್ರಮುಖ ಇಸ್ಲಾಮಿಕ್ ಸಂಘಟನೆ ಜಮೈತ್ -ಉಲೆಮಾ-ಇ-ಹಿಂದ್ ಕಾಶ್ಮೀರದಲ್ಲಿ ಬದಲಾವಣೆಯನ್ನು ಬಯಸಿದ್ದು, ಗಲ್ಫ್ ನ ಮುಸಲ್ಮಾನ ದೇಶಗಳೊಂದಿಗೆ ಭಾರತದ ಸಂಬಂಧ ಕಳೆದ 5 ವರ್ಷಗಳಲ್ಲಿ ಪ್ರಗತಿಯ ಹೆಜ್ಜೆಯತ್ತ ಸಾಗುತ್ತಿದೆ. ಹೀಗಿರುವಾಗ ಭಾರತ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಧೋರಣೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು. ಹೇಳಿದರು.


ಅವರು ನಿನ್ನೆ ನ್ಯೂಯಾರ್ಕ್ ನಲ್ಲಿ ಸಾರ್ಕ್ ದೇಶಗಳ ಸಭೆಗೆ ಮುನ್ನ ನಡೆದ ವಿದೇಶಿ ಸಂಬಂಧಗಳ ಮಂಡಳಿಯನ್ನುದ್ದೇಶಿಸಿ ಮಾತನಾಡಿ ಭಾರತ, ರಾಜಕೀಯಗೊಳಿಸಿದ ಹಿಂದೂ ರಾಷ್ಟ್ರೀಯತೆಯ ಉದಯ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿ ಈ ಪ್ರಶ್ನೆಯ ವಿಶ್ಲೇಷಣೆ ರೀತಿಯನ್ನು ಒಪ್ಪುವುದಿಲ್ಲ ಎಂದರು.


ಈ ಪ್ರಶ್ನೆಗೆ ನಾನು ಬೇರೆ ರೀತಿ ವಿಶ್ಲೇಷಿಸುತ್ತೇನೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದ ಮೇಲೆ ನಾವು ಏನು ನೋಡಿದ್ದೇವೆ ಅದು ದೇಶದ ಪ್ರಜಾಪ್ರಭುತ್ವೀಕರಣದ ಫಲಿತಾಂಶವಾಗಿದೆ. ಇಂದು ಭಾರತದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಳಿಗೂ ವಿಸ್ತರಿಸುತ್ತಿವೆ. ಕಾಸ್ಮೊಪೊಲಿಟನ್ ನಗರಗಳ ಸಂಸ್ಕೃತಿ, ಇಂಗ್ಲಿಷ್ ಭಾಷೆ ಮಾತನಾಡುವವರ ಜೀವನ ಮಟ್ಟ ಇಂದು ವಿಭಿನ್ನ ವರ್ಗಗಳ ಜನರನ್ನು ತಲುಪಿದೆ. ಭಾರತದಲ್ಲಿ ಆಗಿರುವ ಈ ಬದಲಾವಣೆ ಪ್ರಜಾಪ್ರಭುತ್ವದ ಯಶಸ್ಸನ್ನು ತೋರಿಸುತ್ತದೆ ಎಂದರು.


ಭಾರತದಲ್ಲಿ ಜಾತ್ಯತೀತತೆ ತತ್ವಗಳಿಗೆ ಅಪಾಯವಿದೆ ಎಂಬ ನಿಲುವನ್ನು ಕೂಡ ಒಪ್ಪುವುದಿಲ್ಲ. ಅಷ್ಟಕ್ಕೂ ಜಾತ್ಯತೀತತೆ ಎಂಬುದನ್ನು ಕಾನೂನಿನ ಮೂಲಕ ಅಥವಾ ಸಾಂವಿಧಾನಿಕ ನಂಬಿಕೆ ಮೂಲಕ ಪ್ರಚುರಪಡಿಸಿಲ್ಲ. ಸಮಾಜದ ನೀತಿಗಳ ಮೂಲಕ ಪ್ರಚುರವಾದಂತಹದ್ದು. ಸಮಾಜದ ನೀತಿಗಳು ಜಾತ್ಯತೀತವಾಗಿಲ್ಲದಿದ್ದಿದ್ದರೆ ಯಾವುದೇ ಕಾನೂನು, ಅಥವಾ ಸಾಂವಿಧಾನಿಕ ನಿಬಂಧನೆಯು ಅದನ್ನು ಖಾತ್ರಿಪಡಿಸುವುದಿಲ್ಲ. ನಮ್ಮ ಸಮಾಜದ ನೀತಿಗಳು ಬದಲಾಗಿವೆ ಎಂದು ನಾನು ಭಾವಿಸುವುದಿಲ್ಲ, ಭಾರತದ ನೀತಿಗಳು, ಹಿಂದೂ ನೀತಿಗಳು ಜಾತ್ಯತೀತವಾಗಿವೆ ಎಂದರು. 


ಭಾರತ ಹಿಂದೂ ರಾಷ್ಟ್ರೀಕರಣವಾಗಿದೆ. ಪ್ರಧಾನಿ ಮೋದಿಯವರು ಹಿಂದೂವಾದಿ, ಮುಸ್ಲಿಂ ವಿರೋಧಿ ಎಂಬ ಧೋರಣೆಯಿದೆಯಲ್ಲವೇ ಎಂದು ಕೇಳಿದ್ದಕ್ಕೆ ಸಹ ಜೈಶಂಕರ್ ಒಪ್ಪಲಿಲ್ಲ. ಭಾರತದಲ್ಲಿನ ಜಮೈತ್ ಉಲೆಮಾ ಇ ಹಿಂದ್ ರಾಷ್ಟ್ರೀಯ ಸಂಘಟನೆಯಾಗಿದ್ದು ಅದು ಸಮಾಜದ ಮೇಲೆ ತೀವ್ರ ಪರಿಣಾಮ ಬೀರಿದೆ, ಅದಕ್ಕೆ ದೇಶದಲ್ಲಿ ಮಹತ್ವವಿದೆ. ಅವರ ವಾರ್ಷಿಕ ಸಭೆಯಲ್ಲಿ ಸ್ಪಷ್ಟವಾಗಿ ಅವರು ಕಾಶ್ಮೀರದಲ್ಲಿ ಬದಲಾವಣೆ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಕೋಮುವಾದದ ದೃಷ್ಟಿಕೋನದಿಂದ ನೋಡಬೇಡಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT