ಸೌದಿ ರಾಜನ ಭೇಟಿ ಮಾಡಲು ಯತ್ನಿಸಿದ ಪಾಕ್ ಸೇನಾ ಮುಖ್ಯಸ್ಥನಿಗೆ ಭಾರಿ ಮುಖಭಂಗ! 
ವಿದೇಶ

ಸೌದಿ ರಾಜನ ಭೇಟಿ ಮಾಡಲು ಯತ್ನಿಸಿದ ಪಾಕ್ ಸೇನಾ ಮುಖ್ಯಸ್ಥನಿಗೆ ಭಾರಿ ಮುಖಭಂಗ!

ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಾಮರ್ ಜಾವೇದ್ ಬಾಜ್ವಾ ಸೌದಿ ರಾಜನನ್ನು ಭೇಟಿ ಮಾಡಲು ಯತ್ನಿಸಿ ಮುಖಭಂಗ ಎದುರಿಸಿದ್ದಾರೆ. 

ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಾಮರ್ ಜಾವೇದ್ ಬಾಜ್ವಾ ಸೌದಿ ರಾಜನನ್ನು ಭೇಟಿ ಮಾಡಲು ಯತ್ನಿಸಿ ಮುಖಭಂಗ ಎದುರಿಸಿದ್ದಾರೆ. 

ಕಾಶ್ಮೀರದ ವಿಚಾರವಾಗಿ ಸೌದಿ ಅರೇಬಿಯಾ ಭಾರತದ ವಿರುದ್ಧ ಕ್ರಮಕ್ಕೆ ನಿರಾಕರಿಸಿದಾಗ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಕುರೇಶಿ ಸೌದಿ ಅರೇಬಿಯಾಗೇ ಎಚ್ಚರಿಕೆ ನೀಡಿದ್ದರು. ಪರಿಣಾಮ ಪಾಕ್ ವಿರುದ್ಧ ಸೌದಿ ನಾಯಕತ್ವ ಕೆಂಡಾಮಂಡಲವಾಗಿದ್ದರ ಪರಿಣಾಮವಾಗಿ ದಶಕಗಳಷ್ಟು ಹಳೆಯ ಸೌದಿ-ಪಾಕಿಸ್ತಾನದ ಮಿತ್ರತ್ವದಲ್ಲಿ ಬಿರುಕು ಮೂಡಿತ್ತು. 

ಈ ಹಿನ್ನೆಲೆಯಲ್ಲಿ ಮೈತ್ರಿಯನ್ನು ಸರಿಪಡಿಸುವುದಕ್ಕಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥರಾದ ಜ.ಫೈಜ್ ಹಮೀದ್ ಜೊತೆಗೆ ರಿಯಾಧ್ ಗೆ ಭೇಟಿ ನೀಡಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ನ್ನು ಭೇಟಿ ಮಾಡಲು ಯತ್ನಿಸಿದರು. ಆದರೆ ಅದು ಸಾಧ್ಯವಾಗದ ಕಾರಣ ಅಲ್ಲಿನ, ರಕ್ಷಣಾ ಉಪ ಸಚಿವ, ರಕ್ಷಣಾ ಮುಖ್ಯಸ್ಥರನ್ನಷ್ಟೇ ಭೇಟಿ ಮಾಡಿ ಮಾತುಕತೆ ನಡೆಸುವುದಕ್ಕೆ ಅಷ್ಟೇ ಸಾಧ್ಯವಾಗಿದೆ. 

ಆರ್ಟಿಕಲ್ 370 ರದ್ದತಿಯ ಕುರಿತಂತೆ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ (ಒಐಸಿ)  ಸಭೆಯನ್ನು ಆಯೋಜಿಸುವ ಪಾಕ್ ನ ಪ್ರಸ್ತಾವನೆಗೆ ಸೌದಿ ಬೆಂಬಲ ನೀಡದೇ ಇದ್ದದ್ದಕ್ಕೆ ಇತ್ತೀಚೆಗಷ್ಟೇ ಪಾಕ್ ವಿದೇಶಾಂಗ ಸಚಿವ ಟಿ.ವಿ ಚರ್ಚೆಯೊಂದರಲ್ಲಿ ಸೌದಿ ಅರೇಬಿಯಾಗೆ ಎಚ್ಚರಿಕೆ ನೀಡಿದ್ದರು. 

ಪಾಕ್ ನ ಈ ನಡೆಗೆ ತೀವ್ರ ಆಕ್ರೋಶಗೊಂಡಿದ್ದ ಸೌದಿ ಅರೇಬಿಯಾ, ತಾನು ಪಾಕ್ ಗೆ ನೀಡಿದ್ದ 1 ಬಿಲಿಯನ್ ಡಾಲರ್ ಸಾಲವನ್ನು ವಾಪಸ್ ನೀಡುವಂತೆ ಒತ್ತಡ ಹಾಕುತ್ತಿದೆ, ಹಾಗೂ ಮತ್ತೊಂದು ಸಾಲದ ಮೊತ್ತವಾಗಿರುವ 1 ಬಿಲಿಯನ್ ಡಾಲರ್ ನ್ನು ಅವಧಿಗೂ ಮುನ್ನವೇ ವಾಪಸ್  ನೀಡುವಂತೆ ಕೇಳುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT