ವಿದೇಶ

ನ್ಯೂಯಾರ್ಕ್ ಗೆ ವಿದಾಯ ಹೇಳಿ ಸ್ವದೇಶದತ್ತ ಹೊರಟ ಸೈಯದ್ ಅಕ್ಬರುದ್ದೀನ್

Nagaraja AB

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ಸೈಯದ್ ಅಕ್ಬರುದ್ದೀನ್ ಕರ್ತವ್ಯದಿಂದ ಮುಕ್ತರಾಗಿದ್ದು, ಇಂದು ನ್ಯೂಯಾರ್ಕ್ ಗೆ ವಿದಾಯ ಹೇಳಿ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ  ಭಾರತದ ರಾಜತಾಂತ್ರಿಕರಲ್ಲಿ ಎದ್ದು ಕಾಣುತ್ತಿದ್ದ ಮುಖಗಳಲ್ಲಿ ಒಬ್ಬರಾಗಿದ್ದ ಸೈಯದ್ ಅಕ್ಬರುದ್ದೀನ್, ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಹುದ್ದೆಯಿಂದ ನಿರ್ಗಮಿಸಿದ್ದಾರೆ. 

ಮನೆಯಿರುವ ಕಡೆಗೆ ಮನಸ್ಸು... ನ್ಯೂಯಾರ್ಕ್ ಗೆ ವಿದಾಯ ಹೇಳಿಕೆ ಮನೆ ಕಡೆಗೆ ಹೊರಟಿದ್ದೇನೆ. ಭಾರತದ ಮಡಿಲಿಗೆ ಮರಳಲು ಅನುವು ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸೈಯದ್ ಅಕ್ಬರುದ್ದೀನ್ ಇಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT