ಶ್ರೀನಗರ-ಲಡಾಕ್ ಹೆದ್ದಾರಿಯಲ್ಲಿ ಭಾರತೀಯ ಯೋಧರು ವಾಹನಗಳಲ್ಲಿ ಸಾಗುತ್ತಿರುವುದು 
ವಿದೇಶ

ಲಡಾಕ್ ಸಂಘರ್ಷ ಮಧ್ಯೆ ಅಂಧ್ರ ಪ್ರದೇಶದಲ್ಲಿ ಭಾರತದ ಗಡಿಗೆ ಹತ್ತಿರವಾಗಿ ರೈಲ್ವೆ ಸಂಪರ್ಕ ಜಾಲ ನಿರ್ಮಾಣ ಆರಂಭಿಸಿದ ಚೀನಾ!

ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.

ಬೀಜಿಂಗ್: ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.

ಸಿಚುವಾನ್-ಟಿಬೆಟ್ ರೈಲ್ವೆಯ ಯಾನ್-ಲಿನ್ಜಿ ಭಾಗದಲ್ಲಿ ವಿದ್ಯುತ್ ಪೂರೈಕೆ ಯೋಜನೆಗೆ ಎರಡು ಸುರಂಗಗಳು ಮತ್ತು ಒಂದು ಸೇತುವೆ ನಿರ್ಮಾಣಕ್ಕೆ ಚೀನಾ ರೈಲ್ವೆ ಬಿಡ್ಡಿಂಗ್ ಕರೆದಿದೆ. ಕಿಂಗ್‌ಹೈ-ಟಿಬೆಟ್ ರೈಲ್ವೆಯ ನಂತರ ಸಿಚುವಾನ್-ಟಿಬೆಟ್ ರೈಲ್ವೆ ಟಿಬೆಟ್‌ನಲ್ಲಿ ಎರಡನೆಯ ಇಂತಹ ಯೋಜನೆಯಾಗಿದೆ.

ಈ ರೈಲ್ವೆ ಸಂಪರ್ಕ ಜಾಲ ನೈರುತ್ಯ ಕ್ವಿಂಗೈ-ಟಿಬೆಟ್ ಪ್ರಸ್ಥಭೂಮಿ ಮೂಲಕ ಹಾದುಹೋಗುತ್ತಿದ್ದು ಭೌಗೋಳಿಕವಾಗಿ ವಿಶ್ವದಲ್ಲಿಯೇ ಅತಿಹೆಚ್ಚು ಚಟುವಟಿಕೆ ಹೊಂದಿರುವ ಪ್ರದೇಶವಾಗಿದೆ ಎಂದು ಚೀನಾದ ಸುದ್ದಿಸಂಸ್ಥೆಯೊಂದು ಹೇಳಿದೆ.

ಸಿಚುವಾನ್-ಟಿಬೆಟ್ ರೈಲ್ವೆ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡೂನಿಂದ ಪ್ರಾರಂಭವಾಗಿ, ಯಾನ್ ಮೂಲಕ ಪ್ರಯಾಣಿಸಿ ಕಾಮ್ಡೋ ಮೂಲಕ ಟಿಬೆಟ್‌ ಪ್ರವೇಶಿಸುತ್ತದೆ, ಚೆಂಗ್ಡೂನಿಂದ ಲಾಸಾಗೆ ಪ್ರಯಾಣವನ್ನು 48 ಗಂಟೆಗಳಿಂದ 13 ಗಂಟೆಗಳವರೆಗೆ ಈ ಸಂಪರ್ಕ ಜಾಲ ಕಡಿಮೆ ಮಾಡುತ್ತದೆ.

ಲಿಂಜ್ಹಿಯನ್ನು ನಿಯಿಂಗ್ಚಿ ಎಂದು ಸಹ ಕರೆಯಲಾಗುತ್ತಿದ್ದು, ಅರುಣಾಚಲ ಪ್ರದೇಶ ಗಡಿಗೆ ಹತ್ತಿರದಲ್ಲಿದೆ. ದಕ್ಷಿಣ ಟಿಬೆಟ್ ನ ಭಾಗ ಅರುಣಾಚಲ ಪ್ರದೇಶ ಎಂದು ಚೀನಾ ವಾದಿಸುತ್ತಿದ್ದರೆ ಭಾರತ ಅದನ್ನು ವಿರೋಧಿಸುತ್ತಾ ಬಂದಿದ್ದು, ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು ಎಂದು ಹೇಳುತ್ತಿದೆ. ಸಿಂಜ್ಹಿಯಲ್ಲಿ ವಿಮಾನ ನಿಲ್ದಾಣವಿದ್ದು ಹಿಮಾಲಯದಲ್ಲಿ ಚೀನಾ ನಿರ್ಮಿಸಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಹೊಸದಾಗಿ ನಿರ್ಮಾಣಗೊಳ್ಳುವ ಯಾನ್-ಲಿಂಜ್ಹಿ ರೈಲ್ವೆ ಸಂಪರ್ಕ ಜಾಲ 1,011 ಕಿಲೋ ಮೀಟರ್ ದೂರ ಹೊಂದಿದ್ದು 26 ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ರೈಲುಗಳು ಪ್ರತಿ ಗಂಟೆಗೆ 120ರಿಂದ 200 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಯೋಜನೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT