ಅಮೆರಿಕ ನೂತನ ಉಪಾಧ್ಯಕ್ಷ್ಯೆ ಕಮಲ ಹ್ಯಾರಿಸ್ ಪದಗ್ರಹಣ ಸಮಾರಂಭದಲ್ಲಿ ಭಾರತೀಯ ಮೂಲದ ಸೋದರ ಮಾವ ಭಾಗಿ?! 
ವಿದೇಶ

ಅಮೆರಿಕ ನೂತನ ಉಪಾಧ್ಯಕ್ಷ್ಯೆ ಕಮಲ ಹ್ಯಾರಿಸ್ ಪದಗ್ರಹಣ ಸಮಾರಂಭದಲ್ಲಿ ಭಾರತೀಯ ಮೂಲದ ಸೋದರ ಮಾವ ಭಾಗಿ?! 

ಅಮೆರಿಕ ಉಪಾಧ್ಯಕ್ಷರ ಹುದ್ದೆಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದು, ಭಾರತೀಯ ಮೂಲದ ಮಹಿಳೆಯೆನ್ನುವುದು ಮತ್ತೊಂದು ವಿಶೇಷವಾಗಿದೆ.

ಅಮೆರಿಕ ಉಪಾಧ್ಯಕ್ಷರ ಹುದ್ದೆಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದು, ಭಾರತೀಯ ಮೂಲದ ಮಹಿಳೆಯೆನ್ನುವುದು ಮತ್ತೊಂದು ವಿಶೇಷವಾಗಿದೆ. ಕಮಲ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಪದಗ್ರಹಣ ಸಮಾರಂಭಕ್ಕೆ ಅವರ ಭಾರತೀಯ ಮೂಲದ ಕುಟುಂಬದ ಸಂಬಂಧಿಕರು ತೆರಳುವ ಸಾಧ್ಯತೆ ಇದೆ.    

ಕಮಲ ಹ್ಯಾರಿಸ್ ನ ಸೋದರ ಮಾವ ಗೋಪಾಲನ್ ಬಾಲಚಂದ್ರನ್ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧದ ತಜ್ಞರೂ ಆಗಿದ್ದು, ಜ.20 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

"ನಾನು ಎರಡು ದಿನಗಳ ಹಿಂದೆಯಷ್ಟೇ ಕಮಲಾ ಹ್ಯಾರಿಸ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದೆ, ಅದು ಕೌಟುಂಬಿಕ ಮಾತುಕತೆಯಾಗಿತ್ತು, ರಾಜಕೀಯದ ಬಗ್ಗೆ ಚರ್ಚಿಸಲಿಲ್ಲ, ಜ.20 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ನಾನು ತೆರಳಲು ಯೋಜಿಸುತ್ತಿದ್ದೇನೆ ಎಂದು ಗೋಪಾಲನ್ ಬಾಲಚಂದ್ರನ್ ತಿಳಿಸಿದ್ದಾರೆ.

ಬೇರೆ ಯಾವುದೇ ಪೋಷಕರ ರೀತಿಯಲ್ಲೇ ತಾವು ಕಮಲಾ ಹ್ಯಾರಿಸ್ ಗೆ ಉತ್ತೇಜನ ನೀಡಿ ಒಳ್ಳೆಯ ಕೆಲಸ ಮುಂದುವರೆಸುವಂತೆ ಸಲಹೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

ನಾನು ಡಾಟಾಗಳನ್ನು ಅಧ್ಯಯನ ಮಾಡಿದ್ದೆ. ಆಕೆ ಗೆಲ್ಲುತ್ತಾಳೆ ಎಂಬುದು ನನಗೆ ತಿಳಿದಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಆತಂಕ ಇರಲಿಲ್ಲ ಆದರೆ ಅಂತಿಮ ಫಲಿತಾಂಶ ಬಂದ ನಂತರವಷ್ಟೇ ನೆಮ್ಮದಿಯಿಂದ ನಿದ್ದೆ ಮಾಡುವಂತಾಯಿತು ಎಂದು ಬಾಲಚಂದ್ರನ್ ಹೇಳಿದ್ದಾರೆ. 

ಜೋ ಬೈಡನ್ ಹಾಗೂ ಕಮಲ ಹ್ಯಾರಿಸ್ ತಂಡದಿಂದ ಭಾರಿ ನಿರೀಕ್ಷೆ ಇದೆ. ಅಮೆರಿಕಾದಲ್ಲಿ ಮಧ್ಯರಾತ್ರಿವರೆಗೂ ಜನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಎಂದು ಬಾಲಚಂದ್ರನ್ ಹೇಳಿದ್ದಾರೆ.

ಟ್ರಂಪ್ ಸರ್ಕಾರದ ಅವಧಿಯಲ್ಲಿ ಹಾಳಾಗಿದ್ದ ಹಲವು ಅಂತಾರಾಷ್ಟ್ರೀಯ ಬಾಂಧವ್ಯಗಳನ್ನು ಜೋ ಬೈಡನ್ ಗೆಲುವು ಮರುನಿರ್ಮಾಣ ಮಾಡಲಿದೆ ಎಂದು ಬಾಲಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT