ಡೊನಾಲ್ಡ್ ಟ್ರಂಪ್ 
ವಿದೇಶ

ದೇಶದ ಆರ್ಥಿಕತೆ ಬಲಪಡಿಸಲು ಹೆಚ್-1ಬಿ ವೀಸಾ 'ವಿಶೇಷ ಪ್ರತಿಭಾವಂತ'ರಿಗೆ ಮಾತ್ರ ಮೀಸಲು: ಶ್ವೇತಭವನ

ದೇಶದ ಆರ್ಥಿಕತೆಯನ್ನು ಬಲಪಡಿಸಲು ಹೆಚ್-1ಬಿ ವೀಸಾವನ್ನು ವಿಶೇಷ ಪ್ರತಿಭಾವಂತರಿಗೆ ಮಾತ್ರ ಮೀಸಲಿಡಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ವಾಷಿಂಗ್ಟನ್: ದೇಶದ ಆರ್ಥಿಕತೆಯನ್ನು ಬಲಪಡಿಸಲು ಹೆಚ್-1ಬಿ ವೀಸಾವನ್ನು ವಿಶೇಷ ಪ್ರತಿಭಾವಂತರಿಗೆ ಮಾತ್ರ ಮೀಸಲಿಡಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಈ ಕುರಿತು ನಿನ್ನೆ ತಡರಾತ್ರಿ ಪ್ರಕಟಣೆ ಹೊರಡಿಸಿರುವ ಶ್ವೇತಭವನ, ಅಮೆರಿಕಾದ ಕೆಲಸ ವೀಸಾ ನಿಯಮಗಳನ್ನು ಹೆಚ್ಚು ಜನಸ್ನೇಹಿಗೊಳಿಸುವ ಕಾರ್ಯದಲ್ಲಿ ಅಧ್ಯಕ್ಷ ಟ್ರಂಪ್ ಅವರು ನಿರತರಾಗಿದ್ದು, ಅತಿ ಹೆಚ್ಚು ಕೌಶಲ್ಯ ಹೊಂದಿರುವ ವಿದೇಶಿ ನೌಕರರಿಗೆ ಹೆಚ್-1ಬಿ ವೀಸಾ ನೀಡಲು ಮತ್ತು ಅದರೊಟ್ಟಿಗೆ ಅಮೆರಿಕನ್ನರ ಉದ್ಯೋಗ ಮತ್ತು ವೇತನವನ್ನು ಕಾಪಾಡಿ ದೇಶದ ಆರ್ಥಿಕತೆಯನ್ನು ಕೊರೋನಾ ಮಧ್ಯೆ ಹೆಚ್ಚಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಹೇಳಿದೆ.

ಹೆಚ್-1ಬಿ ವಲಸೆರಹಿತ ವೀಸಾ ಕಾರ್ಯಕ್ರಮದ ಬಗ್ಗೆ ಹೊಸ ನಿರ್ಬಂಧ ಹೇರಿಕೆ ಬಗ್ಗೆ ಅಮೆರಿಕಾದ ಟ್ರಂಪ್ ಸರ್ಕಾರ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಶ್ವೇತಭವನ ಈ ಪ್ರಕಟಣೆ ಹೊರಡಿಸಿದೆ. ಹೆಚ್-1ಬಿ ವಲಸೆರಹಿತ ವೀಸಾ ಅಮೆರಿಕಾದ ಕೆಲಸಗಾರರನ್ನು ರಕ್ಷಿಸಲು, ಸಮಗ್ರತೆ ಮರುಸ್ಥಾಪಿಸಲು ಮತ್ತು ಹೆಚ್-1ಬಿ ವೀಸಾ ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಸಿಗುವಂತೆ ಮಾಡಲು ಸಹಕಾರಿಯಾಗುತ್ತದೆ. ಈ ವೀಸಾದ ಮೇಲೆ ಸಾವಿರಾರು ಭಾರತೀಯ ವೃತ್ತಿಪರರು ಅವಲಂಬಿಸಿಕೊಂಡಿದ್ದಾರೆ.

ಇನ್ನು ಕೇವಲ ಒಂದು ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಹೋಂಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮಧ್ಯಂತರ ಅಂತಿಮ ಆದೇಶವನ್ನು ಹೊರಡಿಸಿದೆ. ವಿದೇಶಗಳ ನೌಕರರನ್ನು ತೆಗೆದುಕೊಳ್ಳುವುದರಿಂದ ಅಮೆರಿಕದ ಕೆಲಸಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಟ್ರಂಪ್ ಆಡಳಿತ ಬದ್ಧವಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT