ಅಫ್ಘನ್ ನಲ್ಲಿರುವ ಸಿಖ್ ಧರ್ಮೀಯರು 
ವಿದೇಶ

ಕಾಬುಲ್ ನ ಗುರುದ್ವಾರದಲ್ಲಿ ಸಿಲುಕಿರುವ 260ಕ್ಕೂ ಹೆಚ್ಚು ಅಫ್ಘನ್ ಸಿಖ್ಖರು ಸ್ಥಳಾಂತರಕ್ಕೆ ಮೊರೆ

ಕಾಬುಲ್ ನ ಗುರುದ್ವಾರ ಕರ್ಟೆ ಪರ್ವನ್ ನಲ್ಲಿ 260ಕ್ಕೂ ಹೆಚ್ಚು ಸಿಖ್ ಧರ್ಮೀಯರು ಆಶ್ರಯ ಪಡೆದಿದ್ದು ಭಾರತಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್: ಕಾಬುಲ್ ನ ಗುರುದ್ವಾರ ಕರ್ಟೆ ಪರ್ವನ್ ನಲ್ಲಿ 260ಕ್ಕೂ ಹೆಚ್ಚು ಸಿಖ್ ಧರ್ಮೀಯರು ಆಶ್ರಯ ಪಡೆದಿದ್ದು ಭಾರತಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಾಬುಲ್ ನ ಕರ್ಟೆ ಪರ್ವನ್ ಗುರುದ್ವಾರದಲ್ಲಿ 260ಕ್ಕೂ ಹೆಚ್ಚು ಅಫ್ಘನ್ ಪ್ರಜೆಗಳು ಆಶ್ರಯ ಪಡೆದಿದ್ದು ಅವರಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಮೂರು ನವಜಾತ ಶಿಶುಗಳು ಕೂಡ ಇದ್ದು ಅವುಗಳಲ್ಲಿ ಒಂದು ಶಿಶು ನಿನ್ನೆ ಜನಿಸಿದೆ ಎಂದು ಅಮೆರಿಕ ಸಿಖ್ ಸಂಸ್ಥೆ ತಿಳಿಸಿದೆ.

ಇಲ್ಲಿಯವರೆಗೆ, ಭಾರತ ಸರ್ಕಾರ ಅಫ್ಘನ್ ಸಿಖ್ ರನ್ನು ಮಾತ್ರ ಸ್ಥಳಾಂತರಗೊಳಿಸಿದೆ. ನಾವು ಅಮೆರಿಕ, ಕೆನಡಾ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ತಜಕಿಸ್ತಾನ್, ಇರಾನ್ ಮತ್ತು ಇಂಗ್ಲೆಂಡ್ ದೇಶಗಳ ಸರ್ಕಾರಗಳೊಂದಿಗೆ ಸಹ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುನೈಟೆಡ್ ಸಿಖ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ನಾವು ನೆರವು ಕೋರಲು ನಿರಂತರ ಸಂಪರ್ಕ ನಡೆಸುತ್ತಿದ್ದೇವೆ. ಇದರ ಜೊತೆಗೆ, ನಮ್ಮ ತಂಡಗಳು ಅಫ್ಘಾನಿಸ್ತಾನದಲ್ಲಿ ರಕ್ಷಣಾ ಪ್ರಯತ್ನಗಳನ್ನು ನಿರ್ವಹಿಸಬಲ್ಲ ಕಂಪನಿಗಳೊಂದಿಗೆ ಸಂವಹನ ನಡೆಸುತ್ತಿವೆ. ಯುನೈಟೆಡ್ ಸಿಖ್ಖರ ಪ್ರಕಾರ, ಗುರುದ್ವಾರ ಕಾರ್ಟೆ ಪರ್ವಾನ್ ನಿಂದ ವಿವಿಧ ಚೆಕ್‌ಪೋಸ್ಟ್‌ಗಳ ಮೂಲಕ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 10 ಕಿಲೋಮೀಟರ್ ಪ್ರಯಾಣವು ರಕ್ಷಣಾ ಪ್ರಯತ್ನಗಳಲ್ಲಿ ಒಂದು ದೊಡ್ಡ ಸವಾಲಾಗಿದೆ.

ಕೆಲವು ಅಫ್ಘಾನ್ ಅಲ್ಪಸಂಖ್ಯಾತ ಸದಸ್ಯರು ಕಳೆದ ವಾರ ಈ ಪ್ರವಾಸವನ್ನು ಮಾಡಲು ವಿಫಲರಾಗಿದ್ದಾರೆ ಎಂದು ಅದು ಹೇಳಿದೆ.

ನಾವು ವಿಮಾನ ನಿಲ್ದಾಣಕ್ಕೆ ಹೋಗಲು ಸಿದ್ಧರಿದ್ದೇವೆ, ಆದರೆ ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ವಿಮಾನಗಳ ರದ್ದಾಗಬಹುದು ಎಂದು ಹೆದರುತ್ತಿದ್ದೇವೆ. ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಶಿಶುಗಳನ್ನು ಇಲ್ಲಿಂದ ಸುರಕ್ಷಿತವಾಗಿ ಕಳುಹಿಸುವುದು ನಮ್ಮ ಉದ್ದೇಶ ಎಂದು ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT