ಮೆಹುಲ್ ಚೋಕ್ಸಿ 
ವಿದೇಶ

ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನದ ಸುತ್ತ ವಿವಾದಗಳು ಎದ್ದಿರುವಂತೆಯೇ, ಡೊಮಿನಿಕಾದ ರೋಸೌನಲ್ಲಿ ಚೋಕ್ಸಿಯನ್ನು ಹೇಗೆ ಪೊಲೀಸರು ಬಂಧಿಸಿದರು ಎಂಬುದನ್ನು  ಪ್ರತ್ಯಕ್ಷದರ್ಶಿಯೊಬ್ಬರು ಬಹಿರಂಗಪಡಿಸಿದ್ದಾರೆ. ದೇಶದ ಸಿಐಡಿ ತಂಡ ರೋಸ್ ನಲ್ಲಿಯೇ ಚೋಕ್ಸಿಯನ್ನು ಬಂಧಿಸಿದ್ದರು.

ಡೊಮಿನಿಕಾ:  ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನದ ಸುತ್ತ ವಿವಾದಗಳು ಎದ್ದಿರುವಂತೆಯೇ, ಡೊಮಿನಿಕಾದ ರೋಸೌನಲ್ಲಿ ಚೋಕ್ಸಿಯನ್ನು ಹೇಗೆ ಪೊಲೀಸರು ಬಂಧಿಸಿದರು ಎಂಬುದನ್ನು  ಪ್ರತ್ಯಕ್ಷದರ್ಶಿಯೊಬ್ಬರು ಬಹಿರಂಗಪಡಿಸಿದ್ದಾರೆ. ದೇಶದ ಸಿಐಡಿ ತಂಡ ರೋಸ್ ನಲ್ಲಿಯೇ ಚೋಕ್ಸಿಯನ್ನು ಬಂಧಿಸಿದ್ದರು.

ಪ್ರತ್ಯಕ್ಷದರ್ಶಿ ಡೊಮಿನಿಕ ಪ್ರಜೆ ಹ್ಯಾರಿ ಬ್ಯಾರನ್ ಪ್ರಕಾರ, ಚೋಕ್ಸಿ ಕೆರಿಬಿಯನ್ ಸಮುದ್ರಕ್ಕೆ ಕೆಲವೊಂದನ್ನು ದಾಖಲೆಗಳನ್ನು ಎಸೆಯುತ್ತಿರುವಾಗ ಪೊಲೀಸರು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆಗ ಆತ ಅಲ್ಲಿಂದ ಓಡಲು ಶುರು ಮಾಡಿದ ನಂತರ ಅನುಮಾನಗೊಂಡ ಪೊಲೀಸರು ಆತನ ಹಿಂದೆ ಓಡಿದ್ದಾರೆ. ಆದರೆ, ಚೋಕ್ಸಿ ಹೆಚ್ಚು ದೂರ ಓಡಲು ಸಾಧ್ಯವಾಗದೆ ಎರಡು ಬಾರಿ ಕೆಳಗೆ ಬಿದಿದ್ದಾನೆ. ಹೀಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಚೋಕ್ಸಿ ಬಂಧನಕ್ಕೊಳಗಾದ ಎಂದು ರೈಟ್ ಆಪ್ಸ್ 24 ವರದಿ ಮಾಡಿದೆ.

ಚೇಸಿಂಗ್ ವೇಳೆಯಲ್ಲಿ ಚೋಕ್ಸಿ ಹೇಗೆ ಗಾಯಗೊಂಡ ಎಂಬುದರ ಬಗ್ಗೆಯೂ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ತದನಂತರ ಪೊಲೀಸರು ವಿಚಾರಣೆಗೊಳಪಡಿಸಿ ಬೀಚ್ ನಲ್ಲಿ ಬಂಧಿಸಿದ್ದು, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಅಂಟಿಗುವಾ ಮತ್ತು ಬಾರ್ಬುಡಾದಿಂದ ಕಣ್ಮರೆಯಾಗುತ್ತಿದ್ದ ಕಣ್ಮರೆಯಾಗಿ ಆಗಾಗ್ಗೆ ಕ್ಯೂಬಾಗೆ ಪರಾರಿಯಾಗುತ್ತಿದ್ದ ಚೋಕ್ಸಿ ಪ್ರಯತ್ನ ಹಾಲಿವುಡ್ ಸಿನಿಮಾಗಿಂತಲೂ ಭಿನ್ನವಾಗಿತ್ತು ಎಂದು ಕೆರಿಬಿಯನ್ ನ್ಯೂಸ್ ಪೇಪರ್ ಹೇಳಿದೆ. ಚೋಕ್ಸಿಯನ್ನು ವಶಕ್ಕೆ ಪಡೆದ ನಂತರ ವಿದೇಶದಿಂದ ಪರಾರಿಯಾದ, ಇಂಟರ್ ಫೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಹೊರಡಿಸಿರುವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರಿಗೆ ಗೊತ್ತಾಗಿದೆ. 

ಚೋಕ್ಸಿಯ ಅಪಹರಣ ನಾಟಕ ತಳ್ಳಲು ಡೊಮಿನಿಕಾದ ಪ್ರತಿಪಕ್ಷ ನಾಯಕ ಲೆನ್ನಾಕ್ಸ್ ಲಿಂಟನ್ ಗೆ ಚೋಕ್ಸಿ ಸಹೋದರ ಚುನಾವಣಾ ನಿಧಿಯ ಭರವಸೆ ನೀಡಿದ್ದ, ಇಡೀ ಸನ್ನಿವೇಶಕ್ಕೆ ಅಪಹರಣದ ಕಥೆ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿತ್ತು. ವಕೀಲರ ಸಲಹೆ ಮೇರೆಗೆ ಚೋಕ್ಸಿಯ ಕುಟುಂಬ ರಚಿಸಿದ ವಂಚನೆಯಲ್ಲಿ ಮಾಧ್ಯಮಗಳು ಸಿಕ್ಕಿ ಬಿದಿದ್ದವು ಎಂದು ರೈಟ್ ಆಪ್ಸ್ 24  ವರದಿ ಮಾಡಿದೆ.

ಚೋಕ್ಸಿ ಹಾಗೂ ಆತನ ಸೋದರಳಿಯ ನಿರಾವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಭಾರತದಿಂದ ಪಲಾಯನವಾಗಿದ್ದ ಚೋಕ್ಸಿ, ಜನವರಿ 2018ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ದೊರಕಿತ್ತು. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಅವರು ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT