ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ 
ವಿದೇಶ

ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಿಗೆ ಸ್ಪೇನ್‌ನ ಉನ್ನತ ಸಾಮಾಜಿಕ ವಿಜ್ಞಾನ ಪ್ರಶಸ್ತಿ

ನೊಬೆಲ್ ಪ್ರಶಸ್ತಿ ವಿಜೇತ, ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಕುಮಾರ್ ಸೇನ್ ಅವರಿಗೆ ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಸ್ಪೇನ್‌ನ ಅಗ್ರ ರಾಜಕುಮಾರಿ ಆಫ್ ಅಸ್ಟೂರಿಯಸ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಸ್ಪ್ಯಾನಿಷ್ ಬಹುಮಾನ ಪ್ರತಿಷ್ಠಾನ ಬುಧವಾರ ಪ್ರಕಟಿಸಿದೆ.

ಲಂಡನ್: ನೊಬೆಲ್ ಪ್ರಶಸ್ತಿ ವಿಜೇತ, ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಕುಮಾರ್ ಸೇನ್ ಅವರಿಗೆ ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಸ್ಪೇನ್‌ನ ಅಗ್ರ ರಾಜಕುಮಾರಿ ಆಫ್ ಅಸ್ಟೂರಿಯಸ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಸ್ಪ್ಯಾನಿಷ್ ಬಹುಮಾನ ಪ್ರತಿಷ್ಠಾನ ಬುಧವಾರ ಪ್ರಕಟಿಸಿದೆ.

ಈ ಪ್ರಶಸ್ತಿಗಾಗಿ 20 ದೇಶದ 41 ಅಭ್ಯರ್ಥಿಗಳು ಭಾಗವಹಿಸಿದ್ದು ಅವರನ್ನೆಲ್ಲ ಹಿಂದಿಕ್ಕಿ 87 ವರ್ಷದ ಸೇನ್ ಆಯ್ಕೆಯಾಗಿದ್ದಾರೆ ಎಂದು ಪ್ರಿನ್ಸೆಸ್ ಆಫ್ ಅಸ್ಟೂರಿಯಸ್ ಫೌಂಡೇಶನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸೇನ್ ಅವರ ಆಯ್ಕೆಗೆ ಅವರ 'ಕ್ಷಾಮಗಳ ಬಗ್ಗೆ ಸಂಶೋಧನೆ, ಮಾನವ ಅಭಿವೃದ್ಧಿ ಸಿದ್ಧಾಂತ, ಕಲ್ಯಾಣ ಅರ್ಥಶಾಸ್ತ್ರ ಬಡತನದ ಆಧಾರವಾಗಿರುವ ಕಾರ್ಯವಿಧಾನಗಳು ಅನ್ಯಾಯ, ಅಸಮಾನತೆ, ರೋಗ ಮತ್ತು ಅಜ್ಞಾನದ ವಿರುದ್ಧದ ಹೋರಾಟಕ್ಕೆ ಕಾರಣ ಎಂದು ಫೌಂಡೇಶನ್ ಹೇಳಿದೆ.

ಪ್ರಶಸ್ತಿ, ಡಿಪ್ಲೊಮಾ, ಒಂದು ಚಿಹ್ನೆ, 50 ಸಾವಿರ ಯುರೋಗಳ ನಗದು ಬಹುಮಾನ, ಜೋನ್ ಮಿರೊ ಶಿಲ್ಪವನ್ನು ಒಳಗೊಂಡಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ತೀರ್ಪುಗಾರರು ವೀಡಿಯೊ ಕಾನ್ಫರೆನ್ಸ್ ಮೂಲಕ ಆನ್‌ಲೈನ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದರು.

ಸೇನ್ ಅವರ ಅತ್ಯಂತ ಪ್ರಸಿದ್ಧ ಕೃತಿಯಲ್ಲಿ, 'ಬಡತನ ಮತ್ತು ಕ್ಷಾಮಗಳು. ಹಸಿವು ಆಹಾರದ ಕೊರತೆಯ ಪರಿಣಾಮವಲ್ಲ, ಆದರೆ ಅದರ ವಿತರಣೆಯ ಕಾರ್ಯವಿಧಾನಗಳಲ್ಲಿನ ಅಸಮಾನತೆಗಳೆಂದು ಸೆನ್ ಆನ್ ಎಂಟೈಟಲ್ಮೆಂಟ್ ಅಂಡ್ ಡಿಪ್ರಿವೇಷನ್(1981)ನಲ್ಲಿ ತೋರಿಸಿದ್ದರು.

ಅಮರ್ತ್ಯ ಸೇನೆ ಅವರು 1998ರಲ್ಲಿ ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel