ಸಾಂದರ್ಭಿಕ ಚಿತ್ರ 
ವಿದೇಶ

ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟ

ಕಾಬೂಲ್ ನಲ್ಲಿ ಮಹಿಳೆಯೊಬ್ಬರು, ತನ್ನ ಹಸುಗೂಸನ್ನು 37 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದರೆ, ಉಳಿದವರ ಪ್ರಾಣ ಉಳಿಬೇಕಂದ್ರೆ ಈ ಮಗು ಮಾರಾಟ ಮಾಡಲೇಬೇಕಿತ್ತು ಎಂದು ಅಸಹಾಯಕತೆ ತೋರ್ಪಡಿಸಿಕೊಂಡಿದ್ದಾಳೆ.

ಕಾಬೂಲ್: ಹೊರಗಡೆ ಹೋದ್ರೆ ಬಾಂಬ್ ಸ್ಫೋಟ. ಮನೆಯಲ್ಲಿದ್ರೆ ಮಕ್ಕಳ ಆಕ್ರಂದನ. ಅನ್ನ-ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಹೌದು, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಹಿಡಿತಕ್ಕೆ ಸಿಕ್ಕ ಮೇಲೆ ದೇಶ ನರಕವಾಗಿಬಿಟ್ಟಿದೆ. ಮಹಿಳೆಯರು, ಮಕ್ಕಳಿಗಂತೂ ರಕ್ಷಣೆಯೇ ಇಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ ದಿನ ದೂಡೂವುದು ಅಫ್ಘನ್ ಪ್ರಜೆಗಳಿಗೆ ಕಾಯಕವಾಗಿದೆ. ಈ ಸಮಯದಲ್ಲಿ ಸಿಕ್ಕ ಸಿಕ್ಕ ಬೆಲೆಗೆ ಮಕ್ಕಳನ್ನು ಮಾರಾಟ ಮಾಡಿ ಅಲ್ಲಿನ ಮಹಿಳೆಯರು ಇನ್ನುಳಿದ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ.

ಕಾಬೂಲ್ ನಲ್ಲಿ ಮಹಿಳೆಯೊಬ್ಬರು, ತನ್ನ ಹಸುಗೂಸನ್ನು 37 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದರೆ, ಉಳಿದವರ ಪ್ರಾಣ ಉಳಿಬೇಕಂದ್ರೆ ಈ ಮಗು ಮಾರಾಟ ಮಾಡಲೇಬೇಕಿತ್ತು ಅಂತಾ ಮಹಿಳೆ ತಿಳಿಸುತ್ತಾಳೆ. ಪಶ್ಚಿಮ ಅಫ್ಘಾನಿಸ್ತಾನದ ಮತ್ತೊಬ್ಬ ಮಹಿಳೆ, ಹೊಟ್ಟೆ ತುಂಬಿಸಿಕೊಳ್ಳಲು ತನ್ನ ಗಂಡ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಗಾಗಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. 6 ವರ್ಷ ಹಾಗೂ 18 ವರ್ಷದ ಇಬ್ಬರು ಮಕ್ಕಳನ್ನು ಸ್ವಲ್ಪ ದೊಡ್ಡವರಾದ ಮೇಲೆ ಖರೀದಿದಾರರಿಗೆ ಒಪ್ಪಿಸಬೇಕಿದೆ ಅಂತಾ ಹೇಳಿದ್ದಾಳೆ.

ಇದು ಒಂದು ಕುಟುಂಬದ ಪರಿಸ್ಥಿತಿಯಲ್ಲ. ನೂರಾರು ಕುಟುಂಬಗಳು ತಮ್ಮ ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡುವುದಕ್ಕೋಸ್ಕರ ಚಿಂತನೆ ಮಾಡುತ್ತಿದ್ದಾರೆ ಅಂತಾ ಅಲ್ಲಿನ ಮಹಿಳೆಯರು ತಿಳಿಸುತ್ತಾರೆ.
ಅಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹ ಪದ್ಧತಿ ಶತಮಾನಗಳಿಂದಲೂ ನಡೆಯುತ್ತಾ ಬಂದಿದೆ. ಆದರೆ, ತಾಲಿಬಾನ್ ಆಕ್ರಮಣದ ನಂತ್ರ ಬಡತನ ಹಾಗೂ ಹಿಂಸೆಯಿಂದಾಗಿ ಮದುವೆಯಾದವರನ್ನು ಸಹ ಮಾರಾಟ ಮಾಡುವ ಸ್ಥಿತಿ ಅಲ್ಲಿನ ಜನ ಎದುರಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ