ಕೋವಿಡ್ ಲಸಿಕೆ 
ವಿದೇಶ

ಕೋವಿಡ್ ಲಸಿಕೆಗಳು ಸಾಕಷ್ಟು ಪರಿಣಾಮಕಾರಿ; ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್ ವರದಿ

ಮಹಾಮಾರಿ ಕೊರೋನಾ ತೀವ್ರತೆಯನ್ನು ತಡೆಗಟ್ಟುವಲ್ಲಿ ಲಸಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿದ್ದು,  ಪ್ರಸ್ತುತ ಜನರಿಗೆ ಮೂರನೇ ಡೋಸ್ ನೀಡುವ ಅಗತ್ಯವಿಲ್ಲ ಎಂದು ದಿ ಲ್ಯಾನ್ಸೆಟ್‌ ವರದಿಯಲ್ಲಿ ತಿಳಿಸಿದೆ.

ಪ್ಯಾರಿಸ್: ಮಹಾಮಾರಿ ಕೊರೋನಾ ತೀವ್ರತೆಯನ್ನು ತಡೆಗಟ್ಟುವಲ್ಲಿ ಲಸಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿದ್ದು,  ಪ್ರಸ್ತುತ ಜನರಿಗೆ ಮೂರನೇ ಡೋಸ್ ನೀಡುವ ಅಗತ್ಯವಿಲ್ಲ ಎಂದು ದಿ ಲ್ಯಾನ್ಸೆಟ್‌ ವರದಿಯಲ್ಲಿ ತಿಳಿಸಿದೆ. 

ಕೆಲವು ದೇಶಗಳು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಭಯದಿಂದ ಹೆಚ್ಚುವರಿ ಡೋಸ್‌ಗಳನ್ನು ನೀಡಲು ಆರಂಭಿಸಿವೆ. ಇದರಿಂದಾಗಿ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಕಂಗಟ್ಟಾಗಿದೆ. ಅಲ್ಲದೆ ಅಲ್ಲಿ ಲಕ್ಷಾಂತರ ಜನರು ತಮ್ಮ ಮೊದಲ ಡೋಸ್ ಅನ್ನು ಸ್ವೀಕರಿಸಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಮೂರನೇ ಡೋಸ್ ಮೇಲೆ ನಿಷೇಧವನ್ನು ಹೇರಬೇಕಾಯಿತು ಎಂದರು.

ಡೆಲ್ಟಾ ಆತಂಕದ ನಡುವೆಯೂ ಸಾಂಕ್ರಾಮಿಕ ರೋಗದ ಈ ಹಂತದಲ್ಲಿ ಸಾಮಾನ್ಯ ಜನಸಂಖ್ಯೆಗೆ ಮೂರನೇ ಡೋಸ್ ಸೂಕ್ತವಲ್ಲ ಎಂದು ಡಬ್ಲ್ಯುಎಚ್‌ಒ ಸೇರಿದಂತೆ ವಿಜ್ಞಾನಿಗಳ ಹೊಸ ವರದಿಯು ತೀರ್ಮಾನಿಸಿದೆ.

ಕೋವಿಡ್ 19ರ ತೀವ್ರ ರೋಗಲಕ್ಷಣಗಳ ವಿರುದ್ಧ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಕಂಡುಬಂದಿದೆ. ಡೆಲ್ಟಾ ಸೇರಿದಂತೆ ಎಲ್ಲಾ ಪ್ರಮುಖ ವೈರಸ್ ರೂಪಾಂತರಗಳನ್ನು ತಡೆಗಟ್ಟುವಲ್ಲಿ ಯಶಸ್ಸು ಕಂಡಿದೆ ಎಂದು ಕ್ಲಿನಿಕಲ್ ಪ್ರಯೋಗಗಳನ್ನು ಪರಿಶೀಲಿಸಿದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಒಟ್ಟಾರೆಯಾಗಿ, ಪ್ರಸ್ತುತ ಲಭ್ಯವಿರುವ ಅಧ್ಯಯನಗಳು ಗಂಭೀರ ಕಾಯಿಲೆಯ ವಿರುದ್ಧ ಗಣನೀಯವಾಗಿ ಕ್ಷೀಣಿಸುತ್ತಿರುವ ರಕ್ಷಣೆಗೆ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸುವುದಿಲ್ಲ, ಇದು ಲಸಿಕೆಯ ಪ್ರಾಥಮಿಕ ಗುರಿಯಾಗಿದೆ ಎಂದು WHO ನ ಪ್ರಮುಖ ಲೇಖಕ ಅನಾ-ಮರಿಯಾ ಹೆನಾವೊ-ರೆಸ್ಟ್ರೆಪೊ ಹೇಳಿದರು. ಪ್ರಪಂಚದಾದ್ಯಂತ ಇನ್ನೂ ಲಸಿಕೆಗಾಗಿ ಕಾಯುತ್ತಿರುವ ಜನರಿಗಾಗಿ ಆದ್ಯತೆ ನೀಡಬೇಕು ಎಂದರು.

"ಲಸಿಕೆಗಳನ್ನು ಬಳಸುವುದರಿಂದ ಅವು ಹೆಚ್ಚು ಒಳ್ಳೆಯದನ್ನು ಮಾಡುತ್ತವೆ. ಅವು ರೂಪಾಂತರಗಳ ಮತ್ತಷ್ಟು ವಿಕಸನವನ್ನು ತಡೆಯುವ ಮೂಲಕ ಸಾಂಕ್ರಾಮಿಕ ರೋಗದ ಅಂತ್ಯವನ್ನು ತ್ವರಿತಗೊಳಿಸಬಹುದು ಎಂದು ಅನಾ-ಮರಿಯಾ ಹೇಳಿದರು.

ಫ್ರಾನ್ಸ್‌ನಂತಹ ದೇಶಗಳು ವಯಸ್ಸಾದವರಿಗೆ ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಮೂರನೇ ಡೋಸ್ ಗಳನ್ನು ವಿತರಿಸಲು ಪ್ರಾರಂಭಿಸಿವೆ. ಇನ್ನು ಒಂದು ಹೆಜ್ಜೆ ಹೋಗಿರುವ ಇಸ್ರೇಲ್ ಎರಡನೇ ಜಬ್ ಪಡೆದ ಐದು ತಿಂಗಳ ನಂತರ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಮೂರನೇ ಡೋಸ್ ನೀಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT