ಉಗ್ರ ಒಸಾಮಾ ಬಿನ್ ಲ್ಯಾಡನ್ 
ವಿದೇಶ

ನನ್ನ ನಾಯಿಗಳ ಮೇಲೆ ಒಸಾಮ ರಾಸಾಯನಿಕ ಆಯುಧಗಳ ಪರೀಕ್ಷೆ ನಡೆಸಿದ್ದರು: ಒಸಾಮ ಪುತ್ರ

ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ ಲ್ಯಾಡನ್ ತಮ್ಮ ನಾಯಿಗಳ ಮೇಲೆ ರಾಸಾಯನಿಕ ಆಯುಧಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು ಎಂದು ಒಸಾಮ ಪುತ್ರ ಹೇಳಿದ್ದಾರೆ. 

ನವದೆಹಲಿ: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ ಲ್ಯಾಡನ್ ತಮ್ಮ ನಾಯಿಗಳ ಮೇಲೆ ರಾಸಾಯನಿಕ ಆಯುಧಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದರು ಎಂದು ಒಸಾಮ ಪುತ್ರ ಹೇಳಿದ್ದಾರೆ. 

ನನ್ನ ತಂದೆ ಒಸಾಮ ಬಿನ್ ಲ್ಯಾಡನ್ ನನ್ನನ್ನು ಅವರ ಹಾದಿಯಲ್ಲೇ ಮುನ್ನಡೆಸಲು ತರಬೇತಿ ನೀಡುತ್ತಿದ್ದರು, ಅಫ್ಘಾನಿಸ್ತಾನದಲ್ಲಿದ್ದಾಗ ಬಾಲ್ಯದಲ್ಲೇ ಗನ್ ನೀಡಿದ್ದರು ಹಾಗೂ ನನ್ನ ನಾಯಿಗಳನ್ನು ರಾಸಾಯನಿಕ ಆಯುಧಗಳ ಪರೀಕ್ಷೆಗೆ ಒಳಪಡಿಸಿದ್ದರು ಎಂದು ಒಸಾಮ ಪುತ್ರ ಹೇಳಿದ್ದಾನೆ.

ಸನ್ ಸುದ್ದಿ ಪತ್ರಿಕೆಗೆ ಸಂದರ್ಶನ ನೀಡಿರುವ ಬಿನ್ ಲ್ಯಾಡನ್ ನ ನಾಲ್ಕನೇ ಹಿರಿಯ ಪುತ್ರ ಒಮರ್, ತನ್ನನ್ನು ಸಂತ್ರಸ್ತನೆಂದು ಕರೆದುಕೊಂಡಿದ್ದು, ತನ್ನ ತಂದೆಯೊಂದಿಗೆ ಕಳೆದ ಕೆಟ್ಟ ಸಮಯವನ್ನು ಮರೆಯಲು ಯತ್ನಿಸಿದ್ದಾಗಿ ಹೇಳಿದ್ದಾನೆ

ಫ್ರಾನ್ಸ್ ನ ನಾರ್ಮಂಡಿಯಲ್ಲಿ ವಾಸಿಸುತ್ತಿರುವ 41 ವರ್ಷದ ಒಸಾಮ ಪುತ್ರ, ನೀನು ನನ್ನ ಕೆಲಸಗಳನ್ನು ಮುಂದುವರೆಸುವುದಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಪುತ್ರ ಎಂದು ಹೇಳುತ್ತಿದ್ದದ್ದನ್ನು ನೆನಪಿಸಿಕೊಂಡಿದ್ದಾನೆ. ಆದರೆ ಸೆ.11 ರಂದು ನ್ಯೂ ಯಾರ್ಕ್ ನಲ್ಲಿ ಭಯೋತ್ಪಾದಕ ದಾಳಿಗೂ ಕೆಲವೇ ತಿಂಗಳುಗಳ ಮುನ್ನ ಅಂದರೆ ಏಪ್ರಿಲ್ 2001 ರಲ್ಲಿ ನಾನು ಅಫ್ಘಾನಿಸ್ತಾನ ತೊರೆದೆ, ನಾನು ಗುಡ್ ಬೈ ಹೇಳಿದೆ ಎಂದು ಅವರು ಹೇಳಿದರು, ನಾನು ಅಲ್ಲಿಂದ ನಿರ್ಗಮಿಸಲು ನಿರ್ಧರಿಸಿದ್ದು ಒಸಾಮಾಗೆ ಇಷ್ಟರವಿರಲಿಲ್ಲ ಎಂದೂ ಒಮರ್ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಸಭೆ ಚುನಾವಣೆಗೆ ಇಂದು ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ?: NDAಯಲ್ಲಿ ಮಹತ್ವದ ಬೆಳವಣಿಗೆ

US–Iran conflict| ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ; 6ನೇ ದಿನಕ್ಕೆ ಕಾಲಿಟ್ಟ ಯುದ್ಧ –ಡೊನಾಲ್ಡ್ ಟ್ರಂಪ್ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಸೆನೆಟ್ ವಿಫಲ

'ನೀವಿಬ್ರೇ ಅಲ್ವಾ ಹೇಳಿದ್ದು..': ಲೈವ್ ನಲ್ಲೇ ನಾಸರ್ ಹುಸೇನ್-ಅಥೆರ್ಟನ್ ಗೆ ತಿವಿದ Dinesh Karthik, ಮುಖ ಮುಚ್ಚಿಕೊಂಡ ಮಾಜಿ ದಂತಕಥೆಗಳು!

'ಮಧ್ಯಪ್ರಾಚ್ಯ ಸಂಘರ್ಷ: ಇರಾನ್ ಯುದ್ಧಕ್ಕೆ ನಾನು 10ಕ್ಕೆ 15 ಅಂಕ ಕೊಡುತ್ತೇನೆ, ಅಮೆರಿಕಾ ಈಗ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ': Donald Trump

ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯಿಂದ ರಾಜ್ಯಕ್ಕೆ ಭಾರೀ ಆದಾಯ, ಆದಾಯ ಗುರಿ 45,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ..!

SCROLL FOR NEXT