ಲಂಕಾದಲ್ಲಿ ಪ್ರತಿಭಟನೆ 
ವಿದೇಶ

ಮುಂದಿನ ವಾರ ಶ್ರೀಲಂಕಾ ಸಂಸತ್ತಿನಲ್ಲಿ ನೂತನ ಅಧ್ಯಕ್ಷರ ನೇಮಕ

ಶ್ರೀಲಂಕಾ ಸಂಸತ್ ಜುಲೈ 20 ರಂದು ನೂತನ ಅಧ್ಯಕ್ಷರನ್ನು ನೇಮಕ ಮಾಡಲಿದೆ ಎಂದು ಸ್ಪೀಕರ್ ಮಹಿಂದಾ ಯಪ ಅಬೇವರ್ಧನ ಜು.11 ರಂದು ಘೋಶಿಸಿದ್ದಾರೆ. 

ಕೊಲಂಬೋ: ಶ್ರೀಲಂಕಾ ಸಂಸತ್ ಜುಲೈ 20 ರಂದು ನೂತನ ಅಧ್ಯಕ್ಷರನ್ನು ನೇಮಕ ಮಾಡಲಿದೆ ಎಂದು ಸ್ಪೀಕರ್ ಮಹಿಂದಾ ಯಪ ಅಬೇವರ್ಧನ ಜು.11 ರಂದು ಘೋಶಿಸಿದ್ದಾರೆ. ಲಂಕಾದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಜನ ದಂಗೆ ಎದ್ದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಜಪಕ್ಸ ರಾಜೀನಾಮೆಗೆ ಒತ್ತಡ ಹೆಚ್ಚಿದೆ. 

ಲಂಕಾ ಅಧ್ಯಕ್ಷ ಗೋಟಾಬಾಯ ರಾಜಪಕ್ಸ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಸರ್ವಪಕ್ಷ ಸಭೆಯಲ್ಲಿ ನಾಯಕರು ನಿರ್ಧಾರ ಕೈಗೊಂಡಿದ್ದರು. ಅಧ್ಯಕ್ಷ ರಾಜಪಕ್ಸ ಅಧಿಕೃತವಾಗಿ ಇನ್ನಷ್ಟೇ ರಾಜೀನಾಮೆ ನೀಡಬೇಕಿದ್ದು, ಜು.13 ರಂದು ರಾಜೀನಾಮೆ ನೀಡುವುದಾಗಿ ಸ್ಪೀಕರ್ ಗೆ ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ಲಂಕಾದಲ್ಲಿ ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ಮಧ್ಯಂತರ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದ್ದು, ಪ್ರಧಾನಿ ರನಿಲ್ ವಿಕ್ರಮಸಿಂಘೆ ಸಹ ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಡಲು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
 
ರಾಜಪಕ್ಸ ರಾಜೀನಾಮೆ ಬಳಿಕ ಸಂಸತ್ ಜು.15 ರಂದು ಸೇರಲಿದ್ದು,  ಹೊಸ ಅಧ್ಯಕ್ಷರ ಹುದ್ದೆಗೆ ನೇಮಕದ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಹಾಗೂ ಜು.19 ರಂದು ನಾಪಪತ್ರಗಳನ್ನು ಅಂಗೀಕರಿಸಲು ಮತ್ತೆ ಸಂಸತ್ ಸೇರಲಿದೆ ಎಂದು ಸ್ಪೀಕರ್ ಅಬೇವರ್ಧನ ಹೇಳಿದ್ದಾರೆ. 

ಜು.20 ರಂದು ಹೊಸ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಯಲಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಲಂಕಾದ ಸಂವಿಧಾನದ ಪ್ರಕಾರ ಲಂಕಾದ ಪ್ರಧಾನಿ ಹಾಗೂ ಅಧ್ಯಕ್ಷರು ಏಕಕಾಲದಲ್ಲಿ ರಾಜೀನಾಮೆ ನೀಡಿದರೆ ಸಂಸತ್ ನ ಸ್ಪೀಕರ್ ಅವರು ಲಂಕಾದ ಹಂಗಾಮಿ ಅಧ್ಯಕ್ಷರಾಗಿ ಗರಿಷ್ಠ 30 ದಿನಗಳ ಕಾಲ ಕಾರ್ಯನಿರ್ವಹಿಸಲು ಅವಕಾಶವಿದೆ. ಈ 30 ದಿನಗಳಲ್ಲಿ ಸಂಸತ್ ನ ಸದಸ್ಯರ ಪೈಕಿ ಒಬ್ಬರನ್ನು ಹೊಸ ಅಧ್ಯಕ್ಷರನ್ನಾಗಿ ಸಂಸತ್ ನೇಮಕ ಮಾಡಬೇಕಾಗುತ್ತದೆ. ಹೊಸ ಅಧ್ಯಕ್ಷರು ಈಗಿನ ಅಧ್ಯಕ್ಷರ ಉಳಿದ ಅವಧಿಗೆ (2 ವರ್ಷಗಳ ಅವಧಿಗೆ) ನೇಮಕಗೊಳ್ಳಲಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT