ಹೌತಿ ಉಗ್ರರ ಬೋಟ್ ಸ್ಫೋಟಿಸಿದ ಅಮೆರಿಕ ಸೇನೆ 
ವಿದೇಶ

ಮತ್ತೊಂದು ಹಡಗು ಅಪಹರಣಕ್ಕೆ ಯತ್ನಿಸಿದ ಹೌತಿ ಉಗ್ರರ ಬೋಟ್ ಸ್ಫೋಟಿಸಿದ ಅಮೆರಿಕ ಸೇನೆ

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ ಮಿತಿ ಮೀರುತ್ತಿದ್ದು, ಇದೀಗ ಮತ್ತೊಂದು ಹಡಗು ಹೈಜಾಕ್ ಯತ್ನಿಸಿದ್ದ ವೇಳೆ ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್ ಗಳು ಹೌತಿ ಉಗ್ರರ 2 ಬೋಟ್ ಗಳನ್ನು ಸ್ಫೋಟಿಸಿ ನಾಶಪಡಿಸಿದೆ.

ನವದೆಹಲಿ: ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ಹಾವಳಿ ಮಿತಿ ಮೀರುತ್ತಿದ್ದು, ಇದೀಗ ಮತ್ತೊಂದು ಹಡಗು ಹೈಜಾಕ್ ಯತ್ನಿಸಿದ್ದ ವೇಳೆ ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್ ಗಳು ಹೌತಿ ಉಗ್ರರ 2 ಬೋಟ್ ಗಳನ್ನು ಸ್ಫೋಟಿಸಿ ನಾಶಪಡಿಸಿದೆ.

ಕೆಂಪು ಸಮುದ್ರದಲ್ಲಿ ಕಂಟೈನರ್ ಹಡಗಿನ ಮೇಲೆ ದಾಳಿ ನಡೆಸಿದ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಅಮೆರಿಕ ಸೇನಾಪಡೆ ದಾಳಿ ನಡೆಸಿದ್ದು, ಉಗ್ರರು ನಿರ್ವಹಿಸುತ್ತಿದ್ದ ಹಡಗುಗಳನ್ನು ಸ್ಫೋಟಿಸಿ ಮುಳುಗಿಸಿವೆ ಎಂದು ಅಮೆರಿಕ ಸೇನಾ ಮಿಲಿಟರಿ ಭಾನುವಾರ ತಿಳಿಸಿದೆ.

ಕೆಂಪು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸರಕುಸಾಗಾಣಿಕಾ ಹಡಗಿನ ಮೇಲೆ ದಾಳಿ ಯತ್ನಿಸಿದ ಹೌತಿ ಬಂಡುಕೋರರು ಭದ್ರತಾ ಪಡೆಗಳ ಹೆಲಿಕಾಪ್ಟರ್‌ಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಸೇನಾಪಡೆಯೂ ಕೂಡ  'ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ. ಹಡಗಿನ 20 ಮೀಟರ್‌ಗಳ ಒಳಗೆ ಬಂದ ನಾಲ್ಕು ಸಣ್ಣ ದೋಣಿಗಳಲ್ಲಿ ಮೂರು ಬೋಟ್ ಗಳನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಅದರಲ್ಲಿದ್ದ ಬಂಡುಕೋರರು ಕೂಡ ಹತರಾಗಿದ್ದಾರೆ. ಅಮೆರಿಕ ಸೇನಾ ಸಿಬ್ಬಂದಿ ದಾಳಿ ಆರಂಭಿಸಿದ ಬೆನ್ನಲ್ಲೇ ಹೌತಿ ಬಂಡುಕೋರರ ನಾಲ್ಕನೇ ದೋಣಿ ಪ್ರದೇಶದಿಂದ ಪಲಾಯನ ಮಾಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೆಯಲ್ಲಿ ತಿಳಿಸಿದೆ.

24 ಗಂಟೆಗಳಲ್ಲಿ 2ನೇ ದಾಳಿ
ಸಿಂಗಾಪುರದ ಧ್ವಜದ, ಡೆನ್ಮಾರ್ಕ್ ಒಡೆತನದ ಮತ್ತು ಚಾಲಿತ ಕಂಟೇನರ್ ಹಡಗಿನ ಮಾರ್ಸ್ಕ್ ಹ್ಯಾಂಗ್‌ಝೌ ಅವರ ಸಹಾಯಕ್ಕಾಗಿ ಕೋರಿಕೆಗೆ ನೌಕಾಪಡೆ ಪ್ರತಿಕ್ರಿಯಿಸಿದೆ ಎಂದು ಸೆಂಟ್‌ಕಾಮ್ ಹೇಳಿದೆ, ಇದು ಕೆಂಪು ಸಮುದ್ರದಲ್ಲಿ 24 ಗಂಟೆಗಳಲ್ಲಿ ಎರಡನೇ ಬಾರಿಗೆ ದಾಳಿಗೆ ಒಳಗಾಗಿದೆ. ಹಡಗನ್ನು ಮೊದಲು ಎರಡು ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ ಗುರಿಯಾಗಿಸಲಾಗಿತ್ತು, ಅದನ್ನು ಯುಎಸ್ ಮಿಲಿಟರಿ ಹೊಡೆದುರುಳಿಸಿತು.

ಹೌತಿ-ನಿಯಂತ್ರಿತ ಯೆಮೆನ್‌ನಿಂದ ಉಡಾವಣೆಯಾದ ಕ್ಷಿಪಣಿಗಳಲ್ಲಿ ಒಂದು, ಮಾರ್ಸ್ಕ್ ಹ್ಯಾಂಗ್‌ಝೌಗೆ ಅಪ್ಪಳಿಸಿತು. ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲ ನೀಡುವ ಸಲುವಾಗಿ ಹೌತಿ ಬಂಡುಕೋರರು ಈ ದಾಳಿ ಮಾಡುತ್ತಿದ್ದಾರೆ. ಪ್ರಮುಖವಾದ ಕೆಂಪು ಸಮುದ್ರದ ಹಡಗು ಲೇನ್‌ನಲ್ಲಿ ಬಂಡುಕೋರರು ಪದೇ ಪದೇ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT