ಅಮೆಜಾನ್ ಕಾಡಿನ ವಿಮಾನ ಅಪಘಾತದಲ್ಲಿ ಬದುಕುಳಿದ ಮಕ್ಕಳು 
ವಿದೇಶ

ಅಮೆಜಾನ್ ಕಾಡಿನ ವಿಮಾನ ಅಪಘಾತದಲ್ಲಿ ಬದುಕುಳಿದ ಮಕ್ಕಳಿಗಾಗಿ ಸಂಬಂಧಿಕರ ತಿಕ್ಕಾಟ

ಅಮೆಜಾನ್ ಮಳೆಕಾಡಿನಲ್ಲಿ ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ವರು ಸ್ಥಳೀಯ ಮಕ್ಕಳ ಸಂಬಂಧಿಕರ ನಡುವೆ ಮಕ್ಕಳ ಮೇಲಿನ ಹಕ್ಕಿಗಾಗಿ ತಿಕ್ಕಾಟ ಆರಂಭವಾಗಿದೆ. 

ಬೊಗೋಟಾ: ಅಮೆಜಾನ್ ಮಳೆಕಾಡಿನಲ್ಲಿ ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ವರು ಸ್ಥಳೀಯ ಮಕ್ಕಳ ಸಂಬಂಧಿಕರ ನಡುವೆ ಮಕ್ಕಳ ಮೇಲಿನ ಹಕ್ಕಿಗಾಗಿ ತಿಕ್ಕಾಟ ಆರಂಭವಾಗಿದೆ. 

1 ರಿಂದ 13 ವರ್ಷದೊಳಗಿನ ಮಕ್ಕಳು ರಕ್ಷಣಾ ಕಾರ್ಯಾಚರಣೆ ಬಳಿಕ ಸೋಮವಾರ ಬಗೋಟಾದ ಆಸ್ಪತ್ರೆಯಲ್ಲಿಯೇ ಉಳಿದಿದ್ದಾರೆ. ಇನ್ನೂ ಹಲವಾರು ದಿನಗಳವರೆಗೆ ಅಲ್ಲಿಯೇ ಇರುವ ಸಾಧ್ಯತೆ ಇದೆ. ಈ ಅವಧಿಯನ್ನು ಕೊಲಂಬಿಯಾದ ಮಕ್ಕಳ ರಕ್ಷಣಾ ಸಂಸ್ಥೆಯು ಅವರ ತಾಯಿ ಸತ್ತ ನಂತರ ಅವರನ್ನು ಯಾರು ನೋಡಿಕೊಳ್ಳಬೇಕು ಎಂದು ನಿರ್ಧರಿಸಲು ಕುಟುಂಬ ಸದಸ್ಯರನ್ನು ಸಂದರ್ಶಿಸಲು ಬಳಸುತ್ತಿದೆ. 

ಕೊಲಂಬಿಯಾದ ಇನ್ಸ್ಟಿಟ್ಯೂಟ್ ಆಫ್ ಫ್ಯಾಮಿಲಿ ವೆಲ್ಫೇರ್‌ನ ಮುಖ್ಯಸ್ಥ ಆಸ್ಟ್ರಿಡ್ ಕ್ಯಾಸೆರೆಸ್, BLU ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ಇಬ್ಬರು ಕಿರಿಯ ಮಕ್ಕಳು ತಂದೆ ಮತ್ತು ಅವರ ಹಿರಿಯ ಪೋಷಕರ ಮನವಿಯ ಮೇರೆಗೆ ಮಕ್ಕಳಿಗೆ ಕೇಸ್‌ವರ್ಕರ್ ನಿಯೋಜಿಸಲಾಗಿದೆ ಎಂದು ಹೇಳಿದರು. ಮಕ್ಕಳ ಸುಪರ್ದಿ ವಿಚಾರವಾಗಿ ನಾವು ತನಿಖೆ ನಡೆಸುತ್ತಿದ್ದೇವೆ. ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇವೆ ಎಂದು ಕ್ಯಾಸೆರೆಸ್ ಹೇಳಿದರು.  

"ಈ ಕ್ಷಣದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಮಕ್ಕಳ ಆರೋಗ್ಯ, ಇದು ದೈಹಿಕ ಮಾತ್ರವಲ್ಲ, ಭಾವನಾತ್ಮಕವೂ ಆಗಿದೆ. ಅವರ ಕುಟುಂಬದಲ್ಲಿ ಕೌಟುಂಬಿಕ ಕಲಹಗಳಿದ್ದು, ಭಾನುವಾರ, ಅಜ್ಜ ನಾರ್ಸಿಸೊ ಮುಕುಟುಯ್ ಮ್ಯಾನುಯೆಲ್ ರಾನೋಕ್ ತನ್ನ ಮಗಳು ಮ್ಯಾಗ್ಡಲೇನಾ ಮುಕುಟಿಯನ್ನು ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಎಲ್ಲ ಗೊಂದಲಗಳ ನಿವಾರಣೆ ಬಳಿಕ ಮಕ್ಕಳ ಸುಪರ್ದಿ ವಿಚಾರ ನಿರ್ಧರಿಸಲಾಗುತ್ತದೆ ಎಂದು  ಕ್ಯಾಸೆರೆಸ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಹಿಂದೆ ವಿಮಾನದಲ್ಲಿ ತೆರಳಿದ್ದ ಈ ಕುಟುಂಬ ಅಪಘಾತಕ್ಕೀಡಾಗಿತ್ತು. ಸೆಸ್ನಾ ಸಿಂಗಲ್ ಇಂಜಿನ್ ಪ್ರೊಪೆಲ್ಲರ್ ವಿಮಾನದ ಇಂಜಿನ್ ವೈಫಲ್ಯದಿಂದಾಗಿ ಪತನವಾಗಿತ್ತು. ಈ ದುರ್ಘಟನೆಯಲ್ಲಿ ಮಕ್ಕಳ ತಾಯಿ ಸೇರಿದಂತೆ ಮೂವರು ಅಸುನೀಗಿದ್ದರು. ಬಳಿಕ ದುರ್ಘಟನೆಯಲ್ಲಿ ಬದುಕುಳಿದಿದ್ದ ಮಕ್ಕಳಿಗಾಗಿ ಕಾರ್ಯಾಚರಣೆ ನಡೆಸಿದ್ದ ಕೊಲಂಬಿಯಾ ಸೇನೆ ಬರೊಬ್ಬರಿ 40 ದಿನಗಳ ಬಳಿಕ ಮಕ್ಕಳನ್ನು ಪತ್ತೆ ಮಾಡಿತ್ತು.  

ಮಾಧ್ಯಮಗಳ ಸಂದರ್ಶನ
ಇನ್ನು ಪವಾಡ ಸದೃಶ ರೀತಿಯಲ್ಲಿ ಮಕ್ಕಳ ಬದುಕುಳಿದುಬಂದ ಬಳಿಕ ಸ್ಥಳೀಯ ಮಾಧ್ಯಮಗಳು ಮಕ್ಕಳು ಮತ್ತು ಅವರ ಸಂಬಂಧಿಕರ ಸಂದರ್ಶನ ಪಡೆಯಲಾರಂಭಿಸಿದ್ದು, ಇದೂ ಕೂಡ ಸಂಬಂಧಿಕರು ಮಕ್ಕಳ ಸುಪರ್ದಿ ಪಡೆಯಲು ಸ್ಪರ್ಧೆ ಏರ್ಪಟ್ಟಿರುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT