ಪ್ಯಾಲೇಸ್ಟಿನ್ ನಿರಾಶ್ರಿತರು 
ವಿದೇಶ

ಇಸ್ರೇಲ್-ಹಮಾಸ್ ಯುದ್ಧ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಅಮೆರಿಕದ 2,000 ಪಡೆಗಳು ನಿಯೋಜನೆಗೆ ಸಿದ್ಧ!

ಇಸ್ರೇಲ್-ಗಾಜಾ ಸಂಘರ್ಷವು ಹೊಸ ಕೊಲ್ಲಿ ಯುದ್ಧವಾಗಿ ಬದಲಾಗಬಹುದು ಎಂಬ ಆತಂಕದ ನಡುವೆ ಬಲಪ್ರದರ್ಶನವಾಗಿ ಮಧ್ಯಪ್ರಾಚ್ಯದಲ್ಲಿ 2,000 ಮಿಲಿಟರಿ ಸಿಬ್ಬಂದಿ ನಿಯೋಜನೆಗೆ ಅಮೆರಿಕ ಮುಂದಾಗಿದೆ.

ವಾಷಿಂಗ್ಟನ್: ಇಸ್ರೇಲ್-ಗಾಜಾ ಸಂಘರ್ಷವು ಹೊಸ ಕೊಲ್ಲಿ ಯುದ್ಧವಾಗಿ ಬದಲಾಗಬಹುದು ಎಂಬ ಆತಂಕದ ನಡುವೆ ಬಲಪ್ರದರ್ಶನವಾಗಿ ಮಧ್ಯಪ್ರಾಚ್ಯದಲ್ಲಿ 2,000 ಮಿಲಿಟರಿ ಸಿಬ್ಬಂದಿ ನಿಯೋಜನೆಗೆ ಅಮೆರಿಕ ಮುಂದಾಗಿದೆ.

ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಮೆರಿಕ ಬಿಕ್ಕಟ್ಟಿಗೆ ಹೆಚ್ಚು ವೇಗವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ಮಧ್ಯಪ್ರಾಚ್ಯದಲ್ಲಿ 2000 ಅಮೆರಿಕ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸುವ ಯೋಚನೆಯಲ್ಲಿದೆ. ಆದರೆ ಸದ್ಯಕ್ಕೆ ಶ್ವೇತಭವನಕ್ಕೆ ಆ ಉದ್ದೇಶವಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಅವರು ನಿಯೋಜನೆಗಾಗಿ ಸೇನೆಯನ್ನು ಸಿದ್ಧಪಡಿಸುವುದು 'ನಿಜವಾಗಿಯೂ ಬಿಕ್ಕಟ್ಟನ್ನು ತಡೆಗಟ್ಟುವಿಕೆಯ ಸಂಕೇತ ಕಳುಹಿಸುವುದು ಎಂದು ಹೇಳಿದ್ದಾರೆ.

ಈ ಸಂಘರ್ಷವು ಉಲ್ಬಣಗೊಳ್ಳುವುದು, ವಿಸ್ತರಿಸುವುದು ನಮಗೆ ಇಷ್ಟವಿಲ್ಲ ಎಂದು ಕಿರ್ಬಿ ಹೇಳಿದ್ದಾರೆ. ತನ್ನ ನಿಕಟ ಮಿತ್ರರಾಷ್ಟ್ರಕ್ಕೆ ವಾಷಿಂಗ್ಟನ್‌ನ ಬೆಂಬಲವನ್ನು ಒತ್ತಿಹೇಳಲು ಅಧ್ಯಕ್ಷ ಜೋ ಬಿಡನ್ ಬುಧವಾರ ಇಸ್ರೇಲ್‌ಗೆ ಬರುತ್ತಿದ್ದಾರೆ. ಆದರೆ ಗಾಜಾದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧವು ಕೊಲ್ಲಿ ಯುದ್ಧವಾಗಿ ಬದಲಾಗುವುದನ್ನು ತಡೆಯಲು ಬಿಡೆನ್ ಆಶಿಸಿದ್ದಾರೆ.

ಹಮಾಸ್ ಉಗ್ರರು ಅಕ್ಟೋಬರ್ 7ರಂದು ಗಾಜಾ ಗಡಿಯನ್ನು ಭೇದಿಸಿ ಒಳನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದರು ಪರಿಣಾಮ ಇಸ್ರೇಲ್ ನಲ್ಲಿ ಇಲ್ಲಿಯವರೆಗೂ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೇ ಅಲ್ಲದೆ ಹಮಾಸ್ ಉಗ್ರರು 250ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದೆ. ಉಗ್ರರ ಕುಕೃತ್ಯದ ನಂತರ ಇಸ್ರೇಲ್ ಹಮಾಸ್ ಮೇಲೆ ಯುದ್ಧ ಘೋಷಿಸಿತ್ತು.

ಇನ್ನು ಇಸ್ರೇಲ್ ವಾಯುದಾಳಿಯಲ್ಲಿ ಗಾಜಾದಲ್ಲಿ 2,700ಕ್ಕೂ ಹೆಚ್ಚು ಜನರನ್ನು ಮೃತಪಟ್ಟಿದ್ದು 9 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT