ವಿದೇಶಾಂಗ ಸಚಿವ ಎಸ್ ಜೈಶಂಕರ್ Photo | PTI
ವಿದೇಶ

ಯುಕ್ರೇನ್ ಶಾಂತಿ ಪ್ರಕ್ರಿಯೆಗೆ ಭಾರತದ ಬದ್ಧತೆ ಪುನರುಚ್ಚಾರ: ಮೋದಿ-ಝೆಲೆನ್ಸ್ಕಿ ಮಾತುಕತೆ ಬಗ್ಗೆ ವಿದೇಶಾಂಗ ಸಚಿವ

ಪೋಲೆಂಡ್‌ನಿಂದ ಸುಮಾರು 10 ಗಂಟೆಗಳ ರೈಲು ಪ್ರಯಾಣದ ನಂತರ ಇಂದು ಮುಂಜಾನೆ ಕೈವ್‌ನ ಮಾರಿನ್ಸ್ಕಿ ನಿವಾಸದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಮೋದಿ ಭೇಟಿಯಾದರು.

ಕೈವ್: ಯುಕ್ರೇನ್ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ- ಝೆಲೆನ್ಸ್ಕಿ ದ್ವಿಪಕ್ಷೀಯ ಮಾತುಕತೆ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ಮೊದಲ ಯುಕ್ರೇನ್ ಭೇಟಿಯನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿರುವ ಎಸ್ ಜೈಶಂಕರ್, ಪ್ರಧಾನಿ ಮೋದಿ ಯುಕ್ರೇನ್ ಶಾಂತಿ ಪ್ರಕ್ರಿಯೆಗೆ ಭಾರತದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿರುವುದನ್ನು ತಿಳಿಸಿದ್ದಾರೆ.

ಪೋಲೆಂಡ್‌ನಿಂದ ಸುಮಾರು 10 ಗಂಟೆಗಳ ರೈಲು ಪ್ರಯಾಣದ ನಂತರ ಇಂದು ಮುಂಜಾನೆ ಕೈವ್‌ನ ಮಾರಿನ್ಸ್ಕಿ ನಿವಾಸದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಮೋದಿ ಭೇಟಿಯಾದರು.

ಮೋದಿ ಅವರ ಮಾಸ್ಕೋ ಪ್ರವಾಸದ ಸುಮಾರು ಆರು ವಾರಗಳ ನಂತರ ಕೈವ್‌ಗೆ ಭೇಟಿ ನೀಡಿದ್ದು, ಪ್ರಧಾನಿಯವರ ರಷ್ಯಾ ಪ್ರವಾಸವು ಪಾಶ್ಚಿಮಾತ್ಯ ದೇಶಗಳಲ್ಲಿ ತಲ್ಲಣವನ್ನು ಉಂಟುಮಾಡಿದ ಕಾರಣ ಇದು ಸಮತೋಲನದ ನಡೆಯಾಗಿ ಕಂಡುಬರುತ್ತಿದೆ.

"ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ನಡುವಿನ ಚರ್ಚೆಯಲ್ಲಿನ ಹೆಚ್ಚಿನ ಭಾಗ, ಉಕ್ರೇನ್ ಯುದ್ಧದ ಮೇಲೆ ಕೇಂದ್ರೀಕರಿಸಿದೆ" ಎಂದು ಜೈಶಂಕರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಅವರ ಮಾತುಕತೆಯ ಮಹತ್ವದ ಭಾಗವನ್ನು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮೀಸಲಿಡಲಾಗಿದೆ ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಶಾಂತಿಗೆ ಕೊಡುಗೆ ನೀಡುವ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ಮಧ್ಯಸ್ಥಗಾರರ ನಡುವೆ ಪ್ರಾಯೋಗಿಕ ಮಾತುಕತೆಗಳಲ್ಲಿ ತೊಡಗುವಂತೆ ಪಿಎಂ ಮೋದಿ ಕರೆ ನೀಡಿರುವ ಅಂಶವನ್ನು ವಿದೇಶಾಂಗ ಸಚಿವರು ಎತ್ತಿ ತೋರಿಸಿದ್ದಾರೆ.

"ಸಮಯದಲ್ಲಿ ವಿವಿಧ ಹಂತಗಳಲ್ಲಿ, ಉಲ್ಬಣಗೊಳ್ಳುವ ಅಪಾಯದ ವಿರುದ್ಧ ಭಾರತ ಸಾರ್ವಜನಿಕವಾಗಿ ನಿಲುವುಗಳನ್ನು ತೆಗೆದುಕೊಂಡಿದೆ. ಝೆಲೆನ್ಸ್ಕಿಯೊಂದಿಗಿನ ಮಾತುಕತೆಯಲ್ಲಿ, ಪ್ರಧಾನಿ ಮೋದಿ ಈ ಸಂಘರ್ಷದ ಪರಿಣಾಮಗಳ ಬಗ್ಗೆ ಜಾಗತಿಕ ದಕ್ಷಿಣದಲ್ಲಿ ಇರುವ ವ್ಯಾಪಕವಾದ ಭಾವನೆಯನ್ನು ಹಂಚಿಕೊಂಡಿದ್ದಾರೆ" ಎಂದು ಜೈಶಂಕರ್ ಹೇಳಿದರು.

ಮೋದಿ ಮತ್ತು ಝೆಲೆನ್ಸ್ಕಿ ನಡುವಿನ ಮಾತುಕತೆಯಲ್ಲಿ ಮಿಲಿಟರಿ ಪರಿಸ್ಥಿತಿ ಮತ್ತು ಶಾಂತಿಯ ಸಂಭಾವ್ಯ ಮಾರ್ಗಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಜೈಶಂಕರ್ ಹೇಳಿದರು. ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಇತ್ತೀಚಿನ ಚರ್ಚೆಗಳ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು ಎಂದು ಇಎಎಂ ತಿಳಿಸಿದ್ದಾರೆ.

ಏತನ್ಮಧ್ಯೆ, ಮೋದಿ ಮತ್ತು ಝೆಲೆನ್ಸ್ಕಿ ವ್ಯಾಪಾರ, ಆರ್ಥಿಕ ಸಹಕಾರ, ರಕ್ಷಣೆ, ಔಷಧೀಯ, ಕೃಷಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಉಭಯ ನಾಯಕರು ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮರುನಿರ್ಮಾಣ ಮಾಡುವ ಅಂತರ-ಸರ್ಕಾರಿ ಆಯೋಗವನ್ನು ರಚಿಸಿದ್ದಾರೆ.

ಅವರ ಮಾತುಕತೆಗಳ ನಂತರ, ಭಾರತ ಮತ್ತು ಉಕ್ರೇನ್ ಕೃಷಿ, ಆಹಾರ ಉದ್ಯಮ, ಔಷಧ, ಸಂಸ್ಕೃತಿ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ಸಹಕಾರವನ್ನು ಒದಗಿಸುವ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel-Iran war: Dohaದಲ್ಲಿ ಸಿಲುಕಿದ Indian basketball team, ತಂಡದಲ್ಲಿದ್ದಾರೆ ಮೂವರು ಕನ್ನಡಿಗರು..!

'ನಾನೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತು, ಖಂಡಿತಾ ನಮ್ಮಿಬ್ಬರದ್ದು ಹಾಲು-ಜೇನಿನ ಸಂಬಂಧ': D K ಶಿವಕುಮಾರ್

ವಾಯುಮಾರ್ಗ ಬಂದ್ ಎಫೆಕ್ಟ್: ದುಬೈಗೆ ಹೊರಟ Emirates ವಿಮಾನ KIAಗೆ ವಾಪಸ್

SCROLL FOR NEXT