ಕೆನಡಾ ಸಂಸತ್ತು  
ವಿದೇಶ

1984ರ ಸಿಖ್ ವಿರೋಧಿ ದಂಗೆಯನ್ನು ನರಮೇಧ ಎಂದು ಘೋಷಿಸುವ ಪ್ರಸ್ತಾವನೆ: ಕೆನಡಾ ಸಂಸತ್ತು ತಿರಸ್ಕಾರ

ಈ ಕ್ರಮವನ್ನು ವಿರೋಧಿಸಿದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಮಸೂದೆಯನ್ನು ವಿರೋಧಿಸಿದ ಏಕೈಕ ಸಂಸದರಾಗಿದ್ದಾರೆ.

ಚಂಡೀಗಢ: ಚಂದ್ರ ಆರ್ಯರಂತಹ ಸಂಸದರ ತೀವ್ರ ವಿರೋಧದ ನಡುವೆಯೂ 1984ರ ಸಿಖ್ ವಿರೋಧಿ ದಂಗೆಯನ್ನು ನರಮೇಧ ಎಂದು ಘೋಷಿಸುವ ಪ್ರಸ್ತಾವನೆಯನ್ನು ಕೆನಡಾ ಸಂಸತ್ತು ತಿರಸ್ಕರಿಸಿದೆ.

ಈ ಪ್ರಸ್ತಾಪವನ್ನು ವಿರೋಧಿಸಿದ್ದಕ್ಕಾಗಿ ಸಂಸತ್ತಿನ ಕಟ್ಟಡದೊಳಗೆ ಬೆದರಿಕೆಗಳನ್ನು ಎದುರಿಸಬೇಕಾಯಿತು ಎಂದು ಚಂದ್ರ ಆರ್ಯ ಹೇಳಿದ್ದು, ಇದು "ರಾಜಕೀಯವಾಗಿ ಪ್ರಬಲವಾದ ಖಲಿಸ್ತಾನಿ ಲಾಬಿ" ಯಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಕೆನಡಿಯನ್ನರು ತಮ್ಮ ಸ್ಥಳೀಯ ಸಂಸತ್ ಸಂಸದರೊಂದಿಗೆ ಅಂತಹ ಪ್ರಸ್ತಾವನೆಯನ್ನು ತಮ್ಮ ಬದ್ಧತೆ ತೋರಿಸಬೇಕೆಂದು ಒತ್ತಾಯಿಸಿದ್ದಾರೆ.

ನ್ಯೂ ಡೆಮಾಕ್ರಟಿಕ್ ಪಾರ್ಟಿ (ND) ಸಂಸದ ಸುಖ್ ಧಲಿವಾಲ್ ಅವರು ವಿದೇಶಾಂಗ ವ್ಯವಹಾರಗಳು ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿಯ ಹೌಸ್ ಆಫ್ ಕಾಮನ್ಸ್ ಸ್ಥಾಯಿ ಸಮಿತಿಯ ಮುಂದೆ ಈ ಪ್ರಸ್ತಾಪವನ್ನು ಮಂಡಿಸಿದ್ದರು.

ಈ ಕ್ರಮವನ್ನು ವಿರೋಧಿಸಿದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಈ ಮಸೂದೆಯನ್ನು ವಿರೋಧಿಸಿದ ಏಕೈಕ ಸಂಸದರಾಗಿದ್ದಾರೆ.

ಈ ದುರಂತ ಮತ್ತು ಭೀಕರ ಗಲಭೆಗಳನ್ನು ನರಮೇಧ ಎಂದು ಹಣೆಪಟ್ಟಿ ಹಚ್ಚುವುದು ದಾರಿತಪ್ಪಿಸುವ ಕ್ರಮವಾಗಿದ್ದು, ನ್ಯಾಯಸಮ್ಮತವಲ್ಲ. ಅಂತಹ ಸಮರ್ಥನೆಯು ಹಿಂದೂ ವಿರೋಧಿ ಶಕ್ತಿಗಳ ಕಾರ್ಯಸೂಚಿಯನ್ನು ಉತ್ತೇಜಿಸುತ್ತದೆ ಮತ್ತು ಕೆನಡಾದಲ್ಲಿ ಹಿಂದೂ ಮತ್ತು ಸಿಖ್ ಸಮುದಾಯಗಳ ನಡುವೆ ಬಿರುಕು ಉಂಟುಮಾಡುವ ಅಪಾಯವಿದೆ. ಈ ವಿಭಜಕ ಅಂಶಗಳು ಸಾಮರಸ್ಯವನ್ನು ಅಸ್ಥಿರಗೊಳಿಸುವ ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಬಿಡಬಾರದು ಎಂದು ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.

ಕೆನಡಾದ ಸಂಸತ್ತು 1984 ರ ಗಲಭೆಗಳನ್ನು ನರಮೇಧ ಎಂದು ಘೋಷಿಸುವುದನ್ನು ತಡೆಯುವ ಏಕೈಕ ಮಾರ್ಗವೆಂದರೆ ಪ್ರತಿಯೊಬ್ಬ ಸಂಸದರು ಅಥವಾ ಸಾಕಷ್ಟು ಸಂಖ್ಯೆಯಲ್ಲಿ ಸಂಸದರು ಎದ್ದುನಿಂತು ಸರ್ವಾನುಮತದ ಒಪ್ಪಿಗೆ ಕೇಳಿದಾಗ ಇಲ್ಲ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT