ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ವಿದೇಶ

ವಿಮಾನ ದುರಂತ: ಅಜರ್ ಬೈಜಾನ್ ಅಧ್ಯಕ್ಷರ ಕ್ಷಮೆ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್!

ಈ ವಾರದ ಆರಂಭದಲ್ಲಿ 38 ಜನರು ಸಾವನ್ನಪ್ಪಿದ್ದ ವಿಮಾನ ದುರಂತಕ್ಕೆ ರಷ್ಯಾ ವಾಯುಪಡೆ ಕಾರಣ ಎಂಬಂತಹ ವರದಿಗಳು ಹಬ್ಬಿತ್ತು. ಈ ವದಂತಿಗಳ ಬೆನ್ನಲ್ಲೇ ಅಜರ್ ಬೈಜಾನ್ ಅಧ್ಯಕ್ಷರಿಗೆ ಕರೆ ಮಾಡಿರುವ ಪುಟಿನ್

ಮಾಸ್ಕೋ: ಗ್ರೋಝ್ನಿ ಪ್ರಾಂತ್ಯದ ಬಳಿ ಅಜರ್ ಬಜಾನ್ ಏರ್ ಲೈನ್ಸ್ ಸೇರಿದ ವಿಮಾನ ಅಪಘಾತಕ್ಕೂ ಮುನ್ನಾ ಲ್ಯಾಂಡಿಂಗ್ ಆಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರಷ್ಯಾದ ವಾಯುಸೇನೆಯು ಕಾರ್ಯಾಚರಣೆ ನಡೆಸುತಿತ್ತು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಜರ್ ಬೈಜಾನ್ ನ ಅಧ್ಯಕ್ಷ ಇಲ್ ಹ್ಯಾಮ್ ಅಲಿಯೆವ್ ಅವರಿಗೆ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ 38 ಜನರು ಸಾವನ್ನಪ್ಪಿದ್ದ ವಿಮಾನ ದುರಂತಕ್ಕೆ ರಷ್ಯಾ ವಾಯುಪಡೆ ಕಾರಣ ಎಂಬಂತಹ ವರದಿಗಳು ಹಬ್ಬಿತ್ತು. ಈ ವದಂತಿಗಳ ಬೆನ್ನಲ್ಲೇ ಅಜರ್ ಬೈಜಾನ್ ಅಧ್ಯಕ್ಷರಿಗೆ ಕರೆ ಮಾಡಿರುವ ಪುಟಿನ್, ವಿಮಾನ ಗ್ರೋಝ್ನಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ಆಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಉಕ್ರೇನ್ ಡ್ರೋನ್ ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತಿತ್ತು ಎಂದು ಪುಟಿನ್ ತಿಳಿಸಿರುವುದಾಗಿ ರಷ್ಯಾ ಹೇಳಿದೆ.

ಅಪಘಾತದ ಹೊಣೆ ಹೊತ್ತುಕೊಳ್ಳದ ಪುಟಿನ್, ರಷ್ಯಾದ ವಾಯು ಪ್ರದೇಶದಲ್ಲಿ ಅಪಘಾತ ಸಂಭವಿಸಿರುವುದಕ್ಕೆ ಅಜರ್ ಬೈಜಾನ್ ಅಧ್ಯಕ್ಷರ ಕ್ಷಮೆಯಾಚಿಸಿದ್ದಾರೆ. ದುರಂತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ ಎಂದು ಹೇಳಿಕೆಯಲ್ಲಿ ರಷ್ಯಾ ತಿಳಿಸಿದೆ.

ಅಪಘಾತ ಕುರಿತು ಉಭಯ ನಾಯಕರು ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಅಪಘಾತ ಕುರಿತು ಅಜರ್ ಬೈಜಾನ್ ಮತ್ತು ಕಜಕಿಸ್ತಾನ ಜೊತೆಗೆ ನಿಕಟವಾಗಿ ಸಹಕಿರುಸುವುದಾಗಿ ರಷ್ಯಾ ಹೇಳಿದೆ. ವಿಮಾನ ಹಾರಾಟ ಮಧ್ಯದಲ್ಲಿ ವಿಮಾನ ಅಪಘಾತವಾಗಿದೆ ಎಂದು ಅಜರ್ ಬೈಜಾನ್ ಹೇಳಿತ್ತು. ಆದರೆ, ರಷ್ಯಾ ವಾಯುಪಡೆ ಅಪಘಾತದ ಕಾರಣ ಹೊರಬೇಕಾಗಬಹುದು ಎಂದು ಆರಂಭಿಕ ಸೂಚನೆಗಳಿವೆ ಎಂದು ಅಮೆರಿಕ ಹೇಳಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT