ಇಸ್ರೇಲ್ ನಲ್ಲಿ ಭಾರತೀಯ ಕಾರ್ಮಿಕರು (ಸಾಂದರ್ಭಿಕ ಚಿತ್ರ) 
ವಿದೇಶ

ಪ್ಯಾಲೆಸ್ಟೀನಿಯನ್ನರಿಗೆ ಮತ್ತಷ್ಟು ಸಂಕಷ್ಟ; 16,000 ಭಾರತೀಯ ಕಟ್ಟಡ ಕಾರ್ಮಿಕರು ಇಸ್ರೇಲ್‌ ಗೆ ಪ್ರವೇಶ

ಹತ್ತಾರು ಸಾವಿರ ಪ್ಯಾಲೆಸ್ಟೀನಿಯನ್ ನಿರ್ಮಾಣ ಕಾರ್ಮಿಕರ ತೆರವಿನ ಬಳಿಕ ಉಂಟಾದ ಕಾರ್ಮಿಕರ ಕೊರತೆಯನ್ನು ನೀಗಿಸಲು ಇದೀಗ ಇಸ್ರೇಲ್ ಸರ್ಕಾರ ಭಾರತದ ಮೊರೆ ಹೋಗಿದೆ.

ಟೆಲ್ ಅವೀವ್: ಹಮಾಸ್ ಉಗ್ರ ದಾಳಿ ಬಳಿಕ ಇಸ್ರೇಲ್ ನಲ್ಲಿ ಕಟ್ಟಡ ಕಾಮಗಾರಿ ಕೆಲಸದಲ್ಲಿದ್ದ ಪ್ಯಾಲೆಸ್ಟೀನಿಯನ್ನರನ್ನು ದೇಶದಿಂದ ಹೊರಹಾಕಲಾಗಿದ್ದು, ಇದೀಗ ಅವರ ಸ್ಥಾನಕ್ಕೆ ಭಾರತದಿಂದ ಬರೊಬ್ಬರಿ 16 ಸಾವಿರ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದೆ.

ಹೌದು.. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭೀಕರ ಉಗ್ರ ದಾಳಿಯ ನಂತರ ಪ್ಯಾಲೆಸ್ಟೀನಿಯನ್ ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್‌ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಹತ್ತಾರು ಸಾವಿರ ಪ್ಯಾಲೆಸ್ಟೀನಿಯನ್ ನಿರ್ಮಾಣ ಕಾರ್ಮಿಕರ ತೆರವಿನ ಬಳಿಕ ಉಂಟಾದ ಕಾರ್ಮಿಕರ ಕೊರತೆಯನ್ನು ನೀಗಿಸಲು ಇದೀಗ ಇಸ್ರೇಲ್ ಸರ್ಕಾರ ಭಾರತದ ಮೊರೆ ಹೋಗಿದ್ದು, ಇದೀಗ ಭಾರತದಿಂದ ಸುಮಾರು 16 ಸಾವಿರ ಕಾರ್ಮಿಕರನ್ನು ಇಸ್ರೇಲ್ ಕರೆಸಿಕೊಂಡಿದೆ.

ಹಮಾಸ್ ಅಂದು ಆ ದಾಳಿ ನಡೆಸದೇ ಇದಿದ್ದರೆ, ಇಸ್ರೇಲ್ ನಲ್ಲಿ ನಿಧಾನವಾಗಿ ಹೊರಹೊಮ್ಮುತ್ತಿರುವ ಎತ್ತರದ ಗೋಪುರಗಳು, ಮನೆಗಳು, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳೊಂದಿಗೆ ಈ ಸ್ಥಳವು ಅರೇಬಿಕ್ ಮಾತನಾಡುವ ಕಾರ್ಮಿಕರಿಂದ ತುಂಬಿರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದ್ದು, ಇದೀಗ ಇಲ್ಲಿ ಹಿಂದಿ, ಹೀಬ್ರೂ ಮತ್ತು ಮ್ಯಾಂಡರಿನ್ ಭಾಷೆಗಳನ್ನಾಡುವ ಕಾರ್ಮಿಕರು ಹೆಚ್ಚಾಗಿ ಕಾಣತೊಡಗಿದ್ದಾರೆ.

ಹಮಾಸ್ ದಾಳಿಯು ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಇದುವರೆಗಿನ ಅತ್ಯಂತ ಮಾರಕ ಯುದ್ಧವನ್ನು ಪ್ರಾರಂಭಿಸಿತು. ನಂತರ ಇದು ಲೆಬನಾನ್‌ನ ಹಿಜ್ಬೊಲ್ಲಾ ಮತ್ತು ಯೆಮೆನ್‌ನ ಹುತಿ ಬಂಡುಕೋರರು ಸೇರಿದಂತೆ ಇತರ ಇರಾನ್ ಬೆಂಬಲಿತ ಗುಂಪುಗಳಿಗೆ ಹರಡಿತು ಮತ್ತು ಇಸ್ಲಾಮಿಕ್ ಗಣರಾಜ್ಯದೊಂದಿಗೆ ನೇರ ಮುಖಾಮುಖಿಯಾಯಿತು.

ಭಯಪಡ ಬೇಕಾಗಿಲ್ಲ

ಇನ್ನು ಇಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲಕ ಕಟ್ಟಡ ಕಾರ್ಮಿಕ 35 ವರ್ಷದ ನಿಶಾದ್, ನಾನು ಇಸ್ರೇಲ್ ಬಂದು ತುಂಬಾ ದಿನಗಳು ಕಳೆದಿವೆ. ಇಲ್ಲಿ ಭಯಪಡಲು ಏನೂ ಇಲ್ಲ... ಆಗಾಗ ವಾಯುದಾಳಿ ಎಚ್ಚರಿಕೆಗಳ ಬರುತ್ತವೆ. ಆದರೆ ಇಸ್ರೇಲ್ ಐರನ್ ಡೋಮ್ ಮತ್ತು ಇತರೆ ರಕ್ಷಣಾ ವ್ಯವಸ್ಥೆಗಳು ಬಾಹ್ಯ ಶತೃಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ. ಸೈರನ್ ನಿಂತ ನಂತರ, ನಾವು ನಮ್ಮ ಕೆಲಸವನ್ನು ಪುನರಾರಂಭಿಸುತ್ತೇವೆ" ಎಂದು ಹೇಳಿದರು.

ಇದೇ ವೇಳೆ ಇಸ್ರೇಲ್‌ನಲ್ಲಿ ಹೆಚ್ಚಿನ ಗಳಿಕೆ ಇದೆ. ಅಲ್ಲಿ ಕೆಲವು ಕಾರ್ಮಿಕರು ಭಾರತದಲ್ಲಿ ಗಳಿಸುವುದಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯವನ್ನು ಇಲ್ಲಿ ಗಳಿಸಬಹುದು. ಇದುವೇ ನಿಶಾದ್‌ನಂತಹ ಅನೇಕ ಜನರು ಸಾವಿರಾರು ಕಿಲೋಮೀಟರ್ (ಮೈಲಿ) ದೂರದಲ್ಲಿರುವ ಇಸ್ರೇಲ್ ಗೆ ಬರಲು ಪ್ರಮುಖ ಕಾರಣ. "ನಾನು ಭವಿಷ್ಯಕ್ಕಾಗಿ ಉಳಿತಾಯ ಮಾಡುತ್ತಿದ್ದೇನೆ, ಬುದ್ಧಿವಂತ ಹೂಡಿಕೆಗಳನ್ನು ಮಾಡಲು ಮತ್ತು ನನ್ನ ಕುಟುಂಬಕ್ಕೆ ಅರ್ಥಪೂರ್ಣವಾದದ್ದನ್ನು ಮಾಡಲು ಯೋಜಿಸುತ್ತಿದ್ದೇನೆ" ಎಂದು ನಿಶಾದ್ ಹೇಳಿದರು.

ನೇಮಕಾತಿ ಅಭಿಯಾನ

ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ, ಆದರೆ ಲಕ್ಷಾಂತರ ಜನರಿಗೆ ಪೂರ್ಣ ಸಮಯದ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಇದು ಹೆಣಗಾಡುತ್ತಿದೆ. ಭಾರತೀಯರು ದಶಕಗಳಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ, ಸಾವಿರಾರು ಜನರು ವೃದ್ಧ ಇಸ್ರೇಲಿಗಳನ್ನು ನೋಡಿಕೊಳ್ಳುವ ಆರೈಕೆದಾರರಾಗಿ ಮತ್ತು ಇತರರು ವಜ್ರ ವ್ಯಾಪಾರಿಗಳು ಮತ್ತು ಐಟಿ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ.

ಆದರೆ ಗಾಜಾದಲ್ಲಿ ಯುದ್ಧ ಉಲ್ಬಣಗೊಂಡಾಗ, ನೇಮಕಾತಿದಾರರು ಇಸ್ರೇಲ್‌ನ ನಿರ್ಮಾಣ ಕ್ಷೇತ್ರಕ್ಕೂ ಭಾರತೀಯರನ್ನು ಕರೆತರಲು ಚಾಲನೆ ನೀಡಿದ್ದಾರೆ. ದೆಹಲಿ ಮೂಲದ ಡೈನಾಮಿಕ್ ಸ್ಟಾಫಿಂಗ್ ಸರ್ವೀಸಸ್‌ನ ಅಧ್ಯಕ್ಷ ಸಮೀರ್ ಖೋಸ್ಲಾ, 30 ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡಲು ಸುಮಾರು 500,000 ಭಾರತೀಯರನ್ನು ಕಳುಹಿಸಿದ್ದಾರೆ, ಇದುವರೆಗೆ 3,500 ಕ್ಕೂ ಹೆಚ್ಚು ಕಾರ್ಮಿಕರನ್ನು ಇಸ್ರೇಲ್‌ಗೆ ಕರೆತಂದಿದ್ದಾರೆ, ಇದು ಅವರಿಗೆ ಹೊಸ ಮಾರುಕಟ್ಟೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

ಮತ್ತೊಂದು ಗುಡ್ ನ್ಯೂಸ್: ಕದನ ವಿರಾಮದ ನಂತರ ಹಾರ್ಮುಜ್ ದಾಟಿದ ಎಲ್‌ಪಿಜಿ ಹೊತ್ತ ಭಾರತದ ಹಡಗು

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

5 ವರ್ಷದ ಬಾಲಕನ ಜೊತೆ ಅಸ್ವಾಭಾವಿಕ s*x; ವಸತಿ ಶಾಲೆ ವಿದ್ಯಾರ್ಥಿಯ ಗಂಟಲು ಸೀಳಿದ ಗಾರ್ಡ್!

SCROLL FOR NEXT