ಸಾಂಕೇತಿಕ ಚಿತ್ರ 
ವಿದೇಶ

8 ಭಾರತೀಯ ನೌಕಾಪಡೆ ಯೋಧರ ಪರ ಕತಾರ್ ಕ್ಯಾಸೇಶನ್ ಕೋರ್ಟ್ ನಲ್ಲಿ ಮೊದಲ ಮನವಿ ಸಲ್ಲಿಕೆ

ಭಾರತದ 8 ನೌಕಾಪಡೆ ಯೋಧರ ಪರವಾಗಿ ಕತಾರ್ ನ ಕ್ಯಾಸೇಶನ್ ಕೋರ್ಟ್ ನಲ್ಲಿ ಕಾನೂನು ತಂಡ ಮನವಿ ಸಲ್ಲಿಸಿದೆ.

ನವದೆಹಲಿ: ಭಾರತದ 8 ನೌಕಾಪಡೆ ಯೋಧರ ಪರವಾಗಿ ಕತಾರ್ ನ ಕ್ಯಾಸೇಶನ್ ಕೋರ್ಟ್ ನಲ್ಲಿ ಕಾನೂನು ತಂಡ ಮನವಿ ಸಲ್ಲಿಸಿದೆ.

ಕತಾರ್ ನಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಮಂದಿ ಭಾರತೀಯರಿಗೆ ಡಿ.28 ರಂದು ಶಿಕ್ಷೆಯನ್ನು ಬದಲಿಸಿ ಜೀವಾವಧಿಸಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಬಳಿಕ ನೌಕಾಪಡೆ ಯೋಧರ ಪರವಾಗಿ ಮೊದಲ ಮನವಿ ಸಲ್ಲಿಸಲಾಗಿದೆ.

"ಕೆಲವು ವಾರಗಳ ಕಾಲ ದೋಹಾದಲ್ಲಿದ್ದ ಯೋಧರ ಕುಟುಂಬ ಸದಸ್ಯರು, ಡಿಸೆಂಬರ್ 28 ರಂದು ಕೊನೆಯ ಮನವಿಯ ವಿಚಾರಣೆಗೆ ಮುಂಚಿತವಾಗಿ, ಕ್ಯಾಸೇಶನ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೇಲ್ಮನವಿ ಪತ್ರಗಳಿಗೆ ಸಹಿ ಹಾಕಿದರು.

ಕುಟುಂಬದ ಬಹುತೇಕ ಸದಸ್ಯರು ಈಗ ಭಾರತಕ್ಕೆ ಮರಳಿದ್ದಾರೆ. ಮರಣದಂಡನೆಯನ್ನು ರದ್ದುಗೊಳಿಸಲಾಗಿದ್ದರೂ ಸಹ, 8 ನೌಕಾ ಯೋಧರಿಗೆ - ಮೂರು ವರ್ಷದಿಂದ (ನೌಕಾಪಡೆ ಯೋಧ ರಾಗೇಶ್ ಅವರಿಗೆ ನೀಡಲಾದ ಶಿಕ್ಷೆ) 25 ವರ್ಷಗಳವರೆಗೆ ವಿವಿಧ ಹಂತಗಳಲ್ಲಿ ಜೈಲು ಶಿಕ್ಷೆಯನ್ನು ನೀಡಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಪ್ರತಿಯೊಬ್ಬರ ವಿರುದ್ಧವೂ ಒಂದೇ ರೀತಿಯ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿಯಾಗಿದೆ.

ಹಾಗಾದರೆ ಮುಂದೆ ಏನಾಗಲಿದೆ ಎಂದರೆ? ಈ ಕುರಿತ ವಿಷಯ ತಜ್ಞರ ಪ್ರಕಾರ, 8 ಯೋಧರಿಗೆ ಮತ್ತೊಂದು ಶಿಕ್ಷೆ ಘೋಷಣೆ ಮಾಡುವ ಮೊದಲು ಮೇಲ್ಮನವಿಯನ್ನು ಕ್ಯಾಸೇಶನ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತದೆ. ಬಂಧಿತರ ಸುರಕ್ಷಿತ ವಾಪಸಾತಿ ಎಲ್ಲರೂ ಆಶಿಸುತ್ತಿದ್ದಾರೆ.

ಕೆಲವು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಕ್ಯಾಸೇಶನ್ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಇರುವ ಅತ್ಯುನ್ನತ ನ್ಯಾಯಾಲಯವಾಗಿದೆ. ಕ್ಯಾಸೇಶನ್ ನ್ಯಾಯಾಲಯಗಳು ಪ್ರಕರಣದ ಸತ್ಯಗಳನ್ನು ಮರು-ಪರಿಶೀಲಿಸುವುದಿಲ್ಲ, ಅವು ಸಂಬಂಧಿತ ಕಾನೂನನ್ನು ಮಾತ್ರ ಅರ್ಥೈಸುತ್ತವೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಶಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಕಮಾಂಡರ್ ಸಂಜೀವ್ ಗುಪ್ತಾ. ಆಗಸ್ಟ್ 30, 2022 ರಿಂದ ಕತಾರ್‌ನಲ್ಲಿ ಬಂಧನದಲ್ಲಿರುವ ಎಂಟು ನೌಕಾ ಯೋಧರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT