ವಿಶ್ವಸಂಸ್ಥೆ (ಸಾಂದರ್ಭಿಕ ಚಿತ್ರ) 
ವಿದೇಶ

ಇಸ್ರೇಲ್ ಮೇಲಿನ ಹಮಾಸ್ ದಾಳಿಯಲ್ಲಿ ಭಾಗಿ ಆರೋಪ: ವಿಶ್ವಸಂಸ್ಥೆಯ 9 ಸಿಬ್ಬಂದಿ ಅಮಾನತು

ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಹಮಾಸ್ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ (UNRWA) 12 ಸಿಬ್ಬಂದಿಗಳಲ್ಲಿ ಒಂಬತ್ತು ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ನ್ಯೂಯಾರ್ಕ್: ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಹಮಾಸ್ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ (UNRWA) 12 ಸಿಬ್ಬಂದಿಗಳಲ್ಲಿ ಒಂಬತ್ತು ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಸ್ವತಃ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಘೋಷಿಸಿದ್ದು, ಆರೋಪ ಎದುರಿಸುತ್ತಿರುವ ಒಟ್ಟು 12 ಸಿಬ್ಬಂದಿಯ ಪೈಕಿ 9 ಮಂದಿಯನ್ನು ಅಮಾನತು ಮಾಡಲಾಗಿದೆ. ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದು, ಇತರ ಇಬ್ಬರ ಗುರುತುಗಳು ಇನ್ನೂ ಸ್ಪಷ್ಟೀಕರಣದಲ್ಲಿದೆ ಎಂದು ಹೇಳಿದ್ದಾರೆ. ಅಂತೆಯೇ ಸಿಬ್ಬಂದಿಗಳ ಮೇಲಿನ ಆರೋಪಗಳ ತೀವ್ರತೆ ಒತ್ತಿ ಹೇಳಿದ ಅವರು, ನಡೆಯುತ್ತಿರುವ ತನಿಖೆ ಮತ್ತು ಸ್ವತಂತ್ರ ಪರಿಶೀಲನೆ ಪ್ರಗತಿಯಲ್ಲಿದ್ದು, ತ್ವರಿತ ಕ್ರಮದ ಭರವಸೆ ನೀಡಿದರು.

ಸಂಭಾವ್ಯ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಯಾವುದೇ ವಿಶ್ವಸಂಸ್ಥೆ ಉದ್ಯೋಗಿಯನ್ನು ಸಹಿಸಲಸಾಧ್ಯ ಎಂದು ಹೇಳಿದ ಗುಟೆರೆಸ್, ಯಾವುದೇ ಯುಎನ್ ಉದ್ಯೋಗಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದರೆ ಹೊಣೆಗಾರಿಕೆಯನ್ನು ಎದುರಿಸಬೇಕಾಗುತ್ತದೆ. ಸವಾಲಿನ ಪರಿಸ್ಥಿತಿಗಳಲ್ಲಿ UNRWA ನಡೆಸಿದ ಮಾನವೀಯ ಕೆಲಸದಿಂದ ನಿರ್ದಿಷ್ಟ ಸಿಬ್ಬಂದಿ ಸದಸ್ಯರ ಆಪಾದಿತ ಕ್ರಮಗಳನ್ನು ಪ್ರತ್ಯೇಕಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಅಂತೆಯೇ ಗಂಭೀರ ಆರೋಪಗಳ ಹೊರತಾಗಿಯೂ, ಯುಎನ್‌ಆರ್‌ಡಬ್ಲ್ಯೂಎಗೆ ಹಣಕಾಸಿನ ನೆರವು ಮುಂದುವರಿಸಲು ಅವರು ದೇಶಗಳನ್ನು ಒತ್ತಾಯಿಸಿದರು, ಇದು 2 ಮಿಲಿಯನ್ ಗಾಜಾ ಪ್ರಜೆಳಿಗೆ ಅವರ ದೈನಂದಿನ ಉಳಿವಿಗಾಗಿ ಒದಗಿಸುವ ಪ್ರಮುಖ ಬೆಂಬಲವನ್ನು ಮುಂದುವರೆಸಬೇಕು ಎಂದರು.  

UNRWA ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಒಂಬತ್ತು ದೇಶಗಳು ಗಾಜಾದಲ್ಲಿನ ಮುಖ್ಯ UN ಏಜೆನ್ಸಿಗೆ ಹಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಆದರೆ UNRWA ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ದೇಣಿಗೆ ಮುಂದುವರೆಸುವಂತೆ ಆಯಾ ದೇಶಗಳ ಸರ್ಕಾರಗಳಿಗೆ ಮನವಿ ಮಾಡಿದರು.

ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಕೆಲವು UNRWA ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಇಸ್ರೇಲ್ ಆರೋಪಿಸಿದ ನಂತರ ಗಾಜಾದಲ್ಲಿನ ಪ್ರಮುಖ UN ಏಜೆನ್ಸಿಯೊಳಗೆ ಪ್ರಕ್ಷುಬ್ಧತೆ ಉಂಟಾಗಿದೆ. ಗಾಜಾದಲ್ಲಿ ಸುಮಾರು 13,000 ಜನರನ್ನು ನೇಮಿಸಿಕೊಂಡಿರುವ ಸಂಸ್ಥೆಗೆ ಅಮೆರಿಕ ಮತ್ತು ಹಲವಾರು ಇತರ ದೇಶಗಳು ಧನಸಹಾಯವನ್ನು ಸ್ಥಗಿತಗೊಳಿಸಿವೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT