ಇಸ್ರೇಲ್ ಸೇನಾ ಕಾರ್ಯಾಚರಣೆ 
ವಿದೇಶ

Israel Army ಬೆಂಬಲಿತ Yamam ಅಂಡರ್ ಕವರ್ ಆಪರೇಷನ್: ನಡುರಸ್ತೆಯಲ್ಲಿ Al-Aqsa Brigade ಮುಖ್ಯಸ್ಥ ಸೇರಿ 5 ಉಗ್ರರು ಹತ!, Video ವೈರಲ್!

ಬಂಡುಕೋರರ ಹಿಡಿತದಲ್ಲಿರುವ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ಕಮಾಂಡೋಗಳ ವಿಶೇಷ ಯಾಮಮ್ ಪಡೆ ರಹಸ್ಯ ಕಾರ್ಯಾಚರಣೆ ನಡೆಸಿ ವೆಸ್ಟ್ ಬ್ಯಾಂಕ್ ನಗರದ ನಬ್ಲಸ್‌ನಲ್ಲಿ ಉಗ್ರರಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.

ಟೆಲ್ ಅವೀವ್: ಒಂದೆಡೆ ಲೆಬೆನಾನ್ ನ ಹೆಜ್ಬೊಲ್ಲಾ ಬಂಡುಕೋರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ ಮತ್ತೊಂದೆಡೆ ಇತ್ತ ಬಂಡುಕೋರರ ಕಪಿಮುಷ್ಟಿಯಲ್ಲಿರುವ ವೆಸ್ಟ್ ಬ್ಯಾಂಕ್ ನಲ್ಲೂ ಪ್ರಮುಖ ಸೇನಾ ಕಾರ್ಯಾಚರಣೆ ನಡೆಸಿ Al-Aqsa Brigade ಮುಖ್ಯಸ್ಥ ಸೇರಿ 4 ಉಗ್ರರನ್ನು ಹೊಡೆದುರುಳಿಸಿದೆ.

ಹೌದು.. ಬಂಡುಕೋರರ ಹಿಡಿತದಲ್ಲಿರುವ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ಕಮಾಂಡೋಗಳು ರಹಸ್ಯ ಕಾರ್ಯಾಚರಣೆ ನಡೆಸಿ ವೆಸ್ಟ್ ಬ್ಯಾಂಕ್ ನಗರದ ನಬ್ಲಸ್‌ನಲ್ಲಿ ಉಗ್ರರಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಇಸ್ರೇಲ್ ಸೇನಾಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲಿ ಯೋಧರ ಅಂಡರ್ ಕವರ್ ಆಪರೇಷನ್ ನ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ವೆಸ್ಟ್ ಬ್ಯಾಂಕ್ ನ ನಬ್ಲಸ್ ಬಳಿ ಹಾಡಹಗಲೇ ನಡು ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇಸ್ರೇಲ್ ಸೇನಾ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಬಲಾಟಾ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಅಲ್-ಅಕ್ಸಾ ಹುತಾತ್ಮರ ಬ್ರಿಗೇಡ್ ಭಯೋತ್ಪಾದಕ ಗುಂಪಿನ ನಾಯಕ ಇಸ್ಸಾಮ್ ಅಲ್-ಸಲಾಜ್ ಕೂಡ ಸೇರಿದ್ದಾನೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

ಯಾಮಮ್ ಪಡೆಗಳಿಂದ ರಹಸ್ಯ ಕಾರ್ಯಾಚರಣೆ

ಇನ್ನು ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದು ಇಸ್ರೇಲ್ ಸೇನಾಪಡೆಗಳ ಬೆಂಬಲ ಇರುವ ಯಾಮಮ್ ಪಡೆಗಳು ಎಂದು ಹೇಳಲಾಗಿದೆ. ಇದು ಇಸ್ರೇಲ್ ಸೇನೆ ಬೆಂಬಲಿತ ರಹಸ್ಯ ಪಡೆಗಳಾಗಿದ್ದು, ಅಂಡರ್ ಕವರ್ ಆಪರೇಷನ್ ಗಾಗಿಯೇ ಈ ಯಾಮಮ್ ಪಡೆಗಳು ಖ್ಯಾತಿ ಪಡೆದಿವೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆಗಳು, ಶಿನ್ ಬೆಟ್ ಭದ್ರತಾ ಸೇವೆ ಮತ್ತು ಗಡಿ ಪೊಲೀಸ್ ಪಡೆಗಳ ಬೆಂಬಲದೊಂದಿಗೆ ಶಂಕಿತ ಭಯೋತ್ಪಾದಕರನ್ನು ಗುರಿಯಾಗಿಸುವ ಬಂಧನ ಕಾರ್ಯಾಚರಣೆಯ ಭಾಗವಾಗಿ ಈ ಯಾಮಮ್ ಪಡೆಗಳು ನಬ್ಲಸ್‌ನಲ್ಲಿತ್ತು ಎಂದು ಹೇಳಲಾಗಿದೆ.

ಭಾನುವಾರ ಇಸ್ರೇಲ್ ನ ಬೀರ್ಷೆಬಾದಲ್ಲಿ ನಡೆದ ಮಾರಣಾಂತಿಕ ಗುಂಡಿನ ದಾಳಿಯ ನಂತರ ಈ ವಾರ ನಡೆದ ಎರಡನೇ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರು ಇಸ್ರೇಲಿ ನಗರದ ಹಡೆರಾದಲ್ಲಿ ಹಲವಾರು ಜನರಿಗೆ ಇರಿದಿದ್ದರು. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರು. ಈ ದಾಳಿ ನಂತರ ನಡೆದ 2ನೇ ಪ್ರಮುಖ ಕಾರ್ಯಾಚರಣೆ ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT