ಹತ್ಯೆಗೀಡಾದ ಭಾರತೀಯ  
ವಿದೇಶ

ಕೆನಡಾದಲ್ಲಿ ಶಂಕಿತ ಜನಾಂಗೀಯ ದಾಳಿ: ಭಾರತೀಯ ಪ್ರಜೆ ಹತ್ಯೆ; ಆರೋಪಿ ಬಂಧನ

2019 ರಲ್ಲಿ ಕೆನಡಾಕ್ಕೆ ತೆರಳಿದ್ದ ಕಥಿರೀಯ, ಒಟ್ಟಾವಾದ ಹೊರವಲಯದಲ್ಲಿರುವ ರಾಕ್‌ಲ್ಯಾಂಡ್‌ನಲ್ಲಿರುವ ಅವರ ಅಪಾರ್ಟ್‌ಮೆಂಟ್ ನಲ್ಲಿ ದಾಳಿಗೊಳಗಾಗಿದ್ದರು.

ನವದೆಹಲಿ: ಕೆನಡಾದಲ್ಲಿ ವಾಸಿಸುತ್ತಿದ್ದ ಭಾರತೀಯ ಮೂಲದ 27 ವರ್ಷದ ಯುವಕ ಧರ್ಮೇಶ್ ಕಥಿರೀಯನನ್ನು ಚೂರಿ ಇರಿದು ಹತ್ಯೆ ಮಾಡಲಾಗಿದ್ದು, ಇದು ಜನಾಂಗೀಯ ಪ್ರೇರಿತ ದಾಳಿ ಎಂದು ಶಂಕಿಸಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇದು ಜನಾಂಗೀಯ ಹತ್ಯೆ ಎಂಬುದನ್ನು ತಳ್ಳಿಹಾಕಿದ್ದಾರೆ.

2019 ರಲ್ಲಿ ಕೆನಡಾಕ್ಕೆ ತೆರಳಿದ್ದ ಕಥಿರೀಯ, ಒಟ್ಟಾವಾದ ಹೊರವಲಯದಲ್ಲಿರುವ ರಾಕ್‌ಲ್ಯಾಂಡ್‌ನಲ್ಲಿರುವ ಅವರ ಅಪಾರ್ಟ್‌ಮೆಂಟ್ ನಲ್ಲಿ ದಾಳಿಗೊಳಗಾಗಿದ್ದರು.

ಕಥಿರೀಯ ಕಟ್ಟಡದಲ್ಲಿನ ಲಾಂಡ್ರಿ ಕೊಠಡಿಯಿಂದ ಹೊರಬರುತ್ತಿದ್ದಾಗ ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಸುಮಾರು 60 ವರ್ಷದ ನೆರೆಮನೆಯ ಬಿಳಿ ವ್ಯಕ್ತಿಯೊಬ್ಬರು ಕಥಿರೀಯ ಮತ್ತು ಅವರ ಪತ್ನಿಯ ಮೇಲೆ ಜನಾಂಗೀಯ ನಿಂದನೆ ಮಾಡಿ ಭಾರತೀಯ ವಿರೋಧಿ ಹೇಳಿಕೆ ನೀಡಿ ಚೂರಿಯಿಂದ ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಗುಜರಾತ್‌ನ ಭಾವ್ ನಗರ್ ಜಿಲ್ಲೆಯ ಕಥಿರೀಯ, ಕೆನಡಾದಲ್ಲಿ ಕೆಲಸದ ಪರವಾನಗಿಯ ಮೇಲೆ ವಾಸಿಸುತ್ತಿದ್ದರು. ಅವರು ರಾಕ್‌ಲ್ಯಾಂಡ್‌ನ ಮಿಲಾನೊ ಪಿಜ್ಜಾದಲ್ಲಿ ಉದ್ಯೋಗದಲ್ಲಿದ್ದರು, ಅವರ ಮರಣದ ನಂತರ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ.

ಮಿಲಾನೊ ಪಿಜ್ಜಾವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಪಿಜ್ಜಾ ರೆಸ್ಟೋರೆಂಟ್ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಿಳಿಸಲಾಗಿದೆ. ನಮ್ಮ ಪ್ರೀತಿಯ ಮ್ಯಾನೇಜರ್ ಧರ್ಮೇಶ್ ಏಪ್ರಿಲ್ 4 ರಂದು ನಡೆದ ಭೀಕರ ಘಟನೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ.

ಕಥಿರೀಯ ಅವರ ಸ್ಮರಣಾರ್ಥ ಪ್ರಾರಂಭಿಸಲಾದ ಆನ್‌ಲೈನ್ ನಿಧಿಸಂಗ್ರಹಣೆಯು ದಾಳಿಯನ್ನು ಅರ್ಥಹೀನ ಮತ್ತು ಅಪ್ರಚೋದಿತ ದ್ವೇಷ ಅಪರಾಧ ಎಂದು ಬಣ್ಣಿಸಿದೆ. ಘಟನೆಯ ಸ್ವಲ್ಪ ಸಮಯದ ನಂತರ ದಾಳಿಕೋರನನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಅವರ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಒಂಟಾರಿಯೊ ಪ್ರಾಂತೀಯ ಪೊಲೀಸರು (OPP) ಪ್ರಸ್ತುತ ಇರಿತದ ಸುತ್ತಲಿನ ಸಂದರ್ಭಗಳನ್ನು ತನಿಖೆ ಮಾಡುತ್ತಿದ್ದಾರೆ.

ಒಟ್ಟಾವಾ ಬಳಿಯ ರಾಕ್‌ಲ್ಯಾಂಡ್‌ನಲ್ಲಿ ಇರಿತದಿಂದ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟ ದುರಂತ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಸ್ಥಳೀಯ ಸಮುದಾಯ ಸಂಘದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT