ವಿದೇಶ

ಸುಡಾನ್‌ನಲ್ಲಿ ನರಮೇಧ: ನಿರಾಶ್ರಿತರ ಶಿಬಿರಗಳ ಮೇಲೆ RSF ದಾಳಿ; ಸುಮಾರು 114ಕ್ಕೂ ಜನರ ಹತ್ಯೆ!

ಸುಡಾನ್‌ನ ಕುಖ್ಯಾತ ಅರೆಸೈನಿಕ ಗುಂಪು ಡಾರ್ಫರ್ ಪ್ರದೇಶದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರಗಳ ಮೇಲೆ ಎರಡು ದಿನ ದಾಳಿ ನಡೆಸಿದ್ದಾರೆ.

ಸುಡಾನ್‌ನ ಕುಖ್ಯಾತ ಅರೆಸೈನಿಕ ಗುಂಪು ಡಾರ್ಫರ್ ಪ್ರದೇಶದಲ್ಲಿ ಸ್ಥಳಾಂತರಗೊಂಡ ಜನರ ಶಿಬಿರಗಳ ಮೇಲೆ ಎರಡು ದಿನಗಳ ದಾಳಿ ನಡೆಸಿ 20 ಮಕ್ಕಳು ಮತ್ತು ಒಂಬತ್ತು ನೆರವು ಕಾರ್ಯಕರ್ತರು ಸೇರಿದಂತೆ 114ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದೆ. ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ.

ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ನಿವಾಸಿ ಮತ್ತು ಸಂಯೋಜಕರಾಗಿರುವ ಕ್ಲೆಮೆಂಟೈನ್ ನ್ಕ್ವೆಟಾ-ಸಲ್ಮಿ, ರಾಪಿಡ್ ಸಪೋರ್ಟ್ ಫೋರ್ಸ್ (ಆರ್‌ಎಸ್‌ಎಫ್) ಮತ್ತು ಮಿಲಿಟಿಯಾಗಳು ಝಮ್‌ಜಮ್ ಮತ್ತು ಅಬು ಶೋರೂಕ್ ಶಿಬಿರಗಳು ಮತ್ತು ಉತ್ತರ ಡಾರ್ಫರ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿಯಾದ ಅಲ್-ಫಶರ್ ಪಟ್ಟಣದ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಪ್ರಕಾರ, ಅಲ್-ಫಶರ್ ಸೇನೆಯ ನಿಯಂತ್ರಣದಲ್ಲಿದೆ. ಎರಡು ವರ್ಷಗಳ ಹಿಂದೆ ಸುಡಾನ್‌ನಲ್ಲಿ ಅಂತರ್ಯುದ್ಧ ಆರಂಭವಾದಾಗಿನಿಂದ ಸೇನೆಯು ಆರ್‌ಎಸ್‌ಎಫ್ ವಿರುದ್ಧ ಹೋರಾಡುತ್ತಿದೆ. ಈ ಸಂಘರ್ಷದಲ್ಲಿ 24 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಕಾರ್ಯಕರ್ತರು ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಹೇಳುತ್ತಾರೆ. ಶನಿವಾರ ಮತ್ತೆ ಶಿಬಿರಗಳ ಮೇಲೆ ದಾಳಿ ನಡೆದಿದೆ ಎಂದು ನ್ಕ್ವೆಟಾ-ಸಲ್ಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಝಮ್‌ಜಮ್ ಶಿಬಿರದಲ್ಲಿದ್ದ ಒಂಬತ್ತು ನೆರವು ಕಾರ್ಯಕರ್ತರು ಸಹ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಸುಡಾನ್‌ನಲ್ಲಿ ಎರಡು ವರ್ಷಗಳ ಸಂಘರ್ಷದ ಸಮಯದಲ್ಲಿ ನಿರಾಶ್ರಿತರು ಮತ್ತು ನೆರವು ಕಾರ್ಯಕರ್ತರ ಮೇಲಿನ ಕ್ರೂರ ದಾಳಿಗಳು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ನ್ಕ್ವೆಟಾ-ಸಲಾಮಿ ನೆರವು ಕಾರ್ಯಕರ್ತರ ಹೆಸರನ್ನು ಹೇಳಲಿಲ್ಲ. ಆದರೆ ಸುಡಾನ್‌ನ ವೈದ್ಯರ ಒಕ್ಕೂಟವು ಝಮ್‌ಜಮ್‌ನಲ್ಲಿರುವ ತಮ್ಮ ಆಸ್ಪತ್ರೆಯ ಮೇಲೆ ದಾಳಿ ನಡೆಸಿದಾಗ ಆರು ರಿಲೀಫ್ ಇಂಟರ್‌ನ್ಯಾಷನಲ್ ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಸಾವನ್ನಪ್ಪಿದ ವೈದ್ಯಕೀಯ ಕಾರ್ಯಕರ್ತರಲ್ಲಿ ವೈದ್ಯರಾದ ಡಾ. ಮಹಮೂದ್ ಬಾಬಾಕರ್ ಇದ್ರಿಸ್ ಮತ್ತು ಗುಂಪಿನ ಪ್ರದೇಶದ ಮುಖ್ಯಸ್ಥರಾದ ಆಡಮ್ ಬಾಬಾಕರ್ ಅಬ್ದುಲ್ಲಾ ಸೇರಿದ್ದಾರೆ ಎಂದು ಒಕ್ಕೂಟ ತಿಳಿಸಿದೆ. ಈ ಅಪರಾಧಕ್ಕೆ ಆರ್‌ಎಸ್‌ಎಫ್ ಕಾರಣ ಎಂದು ಒಕ್ಕೂಟವು ಆರೋಪಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT