ಬಂಧಿತರಾಗಿದ್ದ ಪ್ಯಾಲೆಸ್ಟೀನಿಯನ್ನರ ಬಿಡುಗಡೆಯ ಚಿತ್ರ 
ವಿದೇಶ

ಕದನ ವಿರಾಮ ಒಪ್ಪಂದ: ಇಸ್ರೇಲ್ ನಿಂದ 183 ಬಂಧಿತ ಪ್ಯಾಲೆಸ್ಟೀನಿಯನ್ನರ ಬಿಡುಗಡೆ

ಮೊದಲ ಹಂತದಲ್ಲಿ 33 ಒತ್ತೆಯಾಳುಗಳು ಮತ್ತು ಸುಮಾರು 2,000 ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿತ್ತು.

ಟೆಲ್‌ ಅವೀವ್‌: ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದದ ಭಾಗವಾಗಿ ಶನಿವಾರ ಬಂಧಿತರಾಗಿದ್ದ ಎಲ್ಲಾ 183 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೇಲಿ ಜೈಲು ಪ್ರಾಧಿಕಾರ ತಿಳಿಸಿದೆ.

ಅಕ್ಟೋಬರ್ 7, 2023 ರ ದಾಳಿಯ ನಂತರ ಬಂಧಿಸಲ್ಪಟ್ಟ ಮತ್ತು ವಿಚಾರಣೆಯಿಲ್ಲದೆ ಬಂಧಿತರಾಗಿದ್ದ 111 ಮಂದಿ ಸೇರಿದಂತೆ ಬಹುತೇಕ ಎಲ್ಲರನ್ನೂ ಗಾಜಾಗೆ ಬಿಡುಗಡೆ ಮಾಡಲಾಗಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಜನರು ಹರ್ಷೋದ್ಗಾರದಿಂದ ಮರಳಿದರು. ಇನ್ನೂ ಜೀವಾವಧಿ ಶಿಕ್ಷೆಗೊಳಗಾಗಿರುವ ಏಳು ಮಂದಿಯನ್ನು ಗಡೀಪಾರು ಮಾಡುವ ಮೊದಲು ಈಜಿಪ್ಟ್‌ಗೆ ಕಳುಹಿಸಲಾಯಿತು.

ಶನಿವಾರ ಬಿಡುಗಡೆಯಾದ ಪ್ರಮುಖರಲ್ಲಿ ಮಾನವೀಯ ನೆರವಿನ ಕಾರ್ಯಕರ್ತ ಮೊಹಮ್ಮದ್ ಎಲ್-ಹಲಾಬಿಯೂ ಸೇರಿದ್ದಾರೆ. ಅವರು 12 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇವರು ಕ್ರಿಶ್ಚಿಯನ್ ನೆರವಿನ ಸಂಸ್ಥೆಯಾದ ವರ್ಲ್ಡ್ ವಿಷನ್‌ನ ಗಾಜಾ ಶಾಖೆಯ ಪ್ಯಾಲೇಸ್ಟಿನಿಯನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. 2016 ರಲ್ಲಿ ಅವರನ್ನು ಬಂಧಿಸಲಾಗಿತ್ತು.

ಹಮಾಸ್‌ಗೆ ಹತ್ತಾರು ಮಿಲಿಯನ್ ಡಾಲರ್‌ಗಳನ್ನು ಕಳುಹಿಸಿದ ಆರೋಪ ಅವರ ಮೇಲಿದೆ. ಆದರೆ, ಈ ಆರೋಪವನ್ನು ಎಲ್-ಹಲಾಬಿ, 47, ಮತ್ತು ವರ್ಲ್ಡ್ ವಿಷನ್ ನಿರಾಕರಿಸಿದ್ದರು. ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಸ್ವತಂತ್ರ ವಿಚಾರಣೆಯಿಂದ ತಿಳಿದುಬಂದಿತ್ತು.

ಇದಕ್ಕೂ ಮುನ್ನಾ ಮೂವರು ಇಸ್ರೇಲಿ ಒತ್ತೆಯಾಳುಗಳನ್ನೂ ಹಮಾಸ್ ಬಿಡುಗಡೆ ಮಾಡಿತು. ಇದು ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಆರು ವಾರಗಳ ಆರಂಭಿಕ ಹಂತದಲ್ಲಿ ನಾಲ್ಕನೇ ಬಾರಿಗೆ ಒತ್ತೆಯಾಳುಗಳ ವಿನಿಮಯವಾಗಿದೆ.

ಮೊದಲ ಹಂತದಲ್ಲಿ 33 ಒತ್ತೆಯಾಳುಗಳು ಮತ್ತು ಸುಮಾರು 2,000 ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿತ್ತು. ಇಸ್ರೇಲ್ ಮತ್ತು ಹಮಾಸ್ ಮುಂದಿನ ವಾರ ಕದನ ವಿರಾಮದ ಎರಡನೇ ಹಂತದ ಮಾತುಕತೆಯನ್ನು ಪ್ರಾರಂಭಿಸಲು ಸಜ್ಜಾಗಿವೆ. ಇದರಲ್ಲಿ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಅನಿರ್ದಿಷ್ಟವಾಗಿ ಕದನ ವಿರಾಮವನ್ನು ವಿಸ್ತರಣೆಯಾಗುವ ಸಾಧ್ಯತೆಯಿದೆ.

ಯುಎನ್ ತಜ್ಞರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ಅನೇಕರು "ಜನಾಂಗೀಯ ಹತ್ಯೆ" ಎಂದು ಕರೆಯುವ ಯುದ್ಧದಲ್ಲಿ 18,000 ಕ್ಕೂ ಹೆಚ್ಚು ಮಕ್ಕಳು, ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು 200 ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 46,913 ಪ್ಯಾಲೆಸ್ಟೀನಿಯನ್ನರ ಹತ್ಯೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT