ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ 
ವಿದೇಶ

HKU5-CoV-2: ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ? China ದಲ್ಲಿ ಬಾವಲಿ ಮೂಲಕ ಮನುಷ್ಯರಿಗೆ ತಗುಲುವ ವೈರಾಣು ಪತ್ತೆ!

COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್‌ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ.

ಬೀಜಿಂಗ್: ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ ಆತಂಕ ಶುರುವಾಗಿದ್ದು, ಕೋವಿಡ್ ವೈರಸ್ ಪತ್ತೆಯಾಗಿದ್ದ ಅದೇ ಚೀನಾದಲ್ಲಿ ಇದೀಗ ಬಾವಲಿ ಮೂಲಕ ಮನಷ್ಯರಿಗೆ ಹರಡುವ HKU5-CoV-2 ಎಂಬ ವೈರಾಣು ಪತ್ತೆಯಾಗಿದೆ.

ಹೌದು.. COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್‌ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP)ವರದಿ ಮಾಡಿದ್ದು, HKU5-CoV-2 ಎಂಬ ಹೊಸ ವೈರಸ್ ಅನ್ನು "ಬ್ಯಾಟ್‌ವುಮನ್" ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಕಂಡುಹಿಡಿದಿದೆ.

ಈ ಹೊಸ ವೈರಸ್ SARS CoV-2 ಗೆ ಹೋಲುತ್ತದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದು, ಇದು ಕೂಡ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ವೈರಸ್ ಎನ್ನಲಾಗಿದೆ. ಇದು ಕೋವಿಡ್ ಮಾಡಿದಂತೆಯೇ ACE2 ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು ವರದಿಯಲ್ಲಿ ಉಲ್ಲೇಖಿಸಿದೆ.

ವುಹಾನ್ ನಲ್ಲಿ ಸೋರಿಕೆಯಾಗಿದ್ದ ವೈರಸ್ ಇದೇನಾ?

ಇನ್ನು ಹೊಸ ವೈರಸ್ ಪತ್ತೆ ಬೆನ್ನಲ್ಲೇ ಇದೀಗ ಈ ಹಿಂದೆ ವುಹಾನ್ ಇನ್‌ಸ್ಟಿಟ್ಯೂಟ್‌ನಲ್ಲಿ, COVID-19 ಪ್ರಯೋಗಾಲಯದ ಸೋರಿಕೆಯಲ್ಲಿ ಇದ್ದ ವೈರಸ್ ಇದೇನಾ ಎಂಬ ಪ್ರಶ್ನೆ ಕೂಡ ಉದ್ಙವವಾಗಿದೆ. ಅಂತೆಯೇ ಈ ವೈರಸ್ ಇದೀಗ ಸೋರಿಕೆ ಸಿದ್ಧಾಂತದ ಕೇಂದ್ರಬಿಂದುವಾಗಿದೆ. ಆದರೆ ಚೀನಾ ಸರ್ಕಾರ ಮಾತ್ರ ಈ ಸೋರಿಕೆ ಸಿದ್ಧಾಂತವನ್ನು ಅಲ್ಲಗಳೆಯುತ್ತಲೇ ಬಂದಿತ್ತು.

ಇಷ್ಟಕ್ಕೂ ಏನಿದು HKU5-CoV-2?

HKU5-CoV-2 ಎಂಬುದು ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದ ಕೊರೊನಾವೈರಸ್ ಆಗಿದ್ದು, ಇದು ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (MERS) ಗೆ ಕಾರಣವಾಗುವ ವೈರಸ್ ಅನ್ನು ಸಹ ಒಳಗೊಂಡಿದೆ. ವಿಜ್ಞಾನಿಗಳು ಹೊಸ ವೈರಸ್ ಈ ಹಿಂದಿನ ಕೋವಿಡ್ ವೈರಸ್ ನಂತೆಯೇ ಮಾನವನಿಗೆ ಸೋಂಕಿ ಉಸಿರಾಟ ವ್ಯವಸ್ಥೆ ಮೇಲೆ ಪರಿಣಾಮ ಬೀರಬಲ್ಲದು ಎಂದು ಕಂಡುಹಿಡಿದಿದ್ದಾರೆ, ಇದು SARS-CoV-2 ಮತ್ತು NL63 (ಸಾಮಾನ್ಯ ಶೀತ ವೈರಸ್) ಗೆ ಹೋಲುತ್ತದೆ. ಪ್ರಯೋಗಾಲಯ ಪರೀಕ್ಷೆಯ ಸಮಯದಲ್ಲಿ, ವಿಜ್ಞಾನಿಗಳು ಬಳಸಿದ ಮಿನಿ-ಮಾನವ ಅಂಗ ಮಾದರಿಗಳಲ್ಲಿ HKU5-CoV-2 ಮಾನವ ಜೀವಕೋಶ ಸಂಸ್ಕೃತಿಗಳಿಗೆ ಸೋಂಕು ತಗುಲಿಸಲು ಸಾಧ್ಯವಾಯಿತು ಎಂದು ತಂಡವು ಕಂಡುಹಿಡಿದಿದೆ.

ಈ ಹೊಸ ವೈರಸ್ ಈ ಹಿಂದೆ ಕೋವಿಡ್-19 ಗೆ ಕಾರಣವಾದ SARS-CoV-2 ವೈರಸ್‌ನಂತೆಯೇ ಜೀವಕೋಶಗಳ ಮೇಲ್ಮೈ ಪ್ರೋಟೀನ್ ಅನ್ನು ಜೀವಕೋಶಗಳಿಗೆ ನುಸುಳಲು ಬಳಸುವುದರಿಂದ ಅದು ಮನುಷ್ಯರಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾಡಿನಲ್ಲಿ ನೂರಾರು ಕೊರೊನಾವೈರಸ್‌ಗಳು ಇದ್ದರೂ, ಕೆಲವೇ ಕೆಲವು ಮಾತ್ರ ಮನುಷ್ಯರಿಗೆ ಸೋಂಕು ತಗುಲಬಹುದು. ಮನುಷ್ಯರಿಗೆ ಸೋಂಕು ತಗುಲುವ ಅಪಾಯವಿದ್ದರೂ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ತನಿಖೆ ಮಾಡಬೇಕಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಾನವ ಶ್ವಾಸಕೋಶದ ಮೇಲೆ ಬಂಧ ಹೊಂದಿಲ್ಲ

ಸಿಯಾಟಲ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯ ಮತ್ತು ವುಹಾನ್ ವಿಶ್ವವಿದ್ಯಾಲಯದ ಮತ್ತೊಂದು ಅಧ್ಯಯನದ ಪ್ರಕಾರ, ಬಾವಲಿ ಮತ್ತು ಸಸ್ತನಿಗಳು ಎಸಿಇ2 ಶ್ವಾಸಕೋಶದ ಬಂಧನ ಹೊಂದಿದ್ದರೂ ಇದು ಮಾನವನ ಶ್ವಾಸಕೋಶದಲ್ಲಿ ಬಲವಾದ ಬಂಧವನ್ನು ಹೊಂದಿಲ್ಲ.

ಚೀನಾದ ಪ್ರಖ್ಯಾತ ವೈರಲಾಜಿಸ್ಟ್​ ಹಾಗೂ ವುಹಾನ್​ ವೈರಾಲಜಿ ಸಂಸ್ಥೆಯಲ್ಲಿ ತಜ್ಞರಾಗಿದ್ದ ಝೆಂಗಲಿ ಡಬ್ಲ್ಯೂಐವಿ ಇದರ ಥಿಯರಿಯನ್ನು ಕೋವಿಡ್​ 10 ಉಗಮಕ್ಕೆ ಜೋಡಿಸಿದೆ ಎಂದಿದ್ದು, ಸೋಂಕು ಲ್ಯಾಬ್​ನ ಸೋರಿಕೆ ಎಂಬ ಆರೋಪವನ್ನು ಮತ್ತೊಮ್ಮೆ ಅಲ್ಲಗಳೆದಿದ್ದಾರೆ. ಸೋಂಕುಯುಕ್ತ ರೋಗಗಳ ಹೆಚ್ಚಳದಿಂದಾಗಿ ವಿಜ್ಞಾನಿಗಳು ಪ್ರಾಣಿಗಳಿಂದ ಬರುವ ಹೊಸ ವೈರಸ್​​ಗಳ​ ಬಗ್ಗೆ ನಿಕಟವಾದ ಮೇಲ್ವಿಚಾರಣೆ ಮಾಡುತ್ತಿದ್ದಾರೆ. HKU5-CoV-2 ಸದ್ಯ ಯಾವುದೇ ಅಪಾಯವನ್ನು ತೋರುತ್ತಿಲ್ಲ. ಭವಿಷ್ಯದ ಸಾಂಕ್ರಾಮಿಕ ರೋಗಗಳ ತಡೆಗಾಗಿ ಸಂಶೋಧನಾಯಲದಯಲ್ಲಿ ಕಣ್ಗಾವಲು ಇಟ್ಟಿದ್ದು, ಈ ಕುರಿತು ಸಂಶೋಧನೆ ಸಾಗಿದೆ ಎಂದಿದ್ದಾರೆ.

ಪ್ರತಿಕಾಯಗಳು ಮತ್ತು ಆಂಟಿವೈರಲ್ ಔಷಧಿ

SARS-CoV-2 ನಂತೆ, ಬಾವಲಿ ವೈರಸ್ HKU5-CoV-2 ಫ್ಯೂರಿನ್ ಕ್ಲೀವೇಜ್ ಸೈಟ್ ಎಂದು ಕರೆಯಲ್ಪಡುವ ಒಂದು ವೈಶಿಷ್ಟ್ಯವನ್ನು ಹೊಂದಿದ್ದು, ಇದು ಜೀವಕೋಶದ ಮೇಲ್ಮೈಗಳಲ್ಲಿ ACE2 ಗ್ರಾಹಕ ಪ್ರೋಟೀನ್ ಮೂಲಕ ಜೀವಕೋಶಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರಯೋಗಾಲಯದ ಪ್ರಯೋಗಗಳಲ್ಲಿ, HKU5-CoV-2 ಪರೀಕ್ಷಾ ಕೊಳವೆಗಳಲ್ಲಿ ಮತ್ತು ಮಾನವ ಕರುಳುಗಳು ಮತ್ತು ವಾಯುಮಾರ್ಗಗಳ ಮಾದರಿಗಳಲ್ಲಿ ಹೆಚ್ಚಿನ ACE2 ಮಟ್ಟಗಳನ್ನು ಹೊಂದಿರುವ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸಿತು. ಸಂಶೋಧಕರು ಬ್ಯಾಟ್ ವೈರಸ್ ಅನ್ನು ಗುರಿಯಾಗಿಸುವ ಮೊನೊಕ್ಲೋನಲ್ ಪ್ರತಿಕಾಯಗಳು ಮತ್ತು ಆಂಟಿವೈರಲ್ ಔಷಧಿಗಳನ್ನು ಸಹ ಗುರುತಿಸಿದ್ದಾರೆ.

ಮತ್ತೊಂದು ಸಾಂಕ್ರಾಮಿಕ?

ಇದೇ ವೇಳೆ ನಾವು ಮತ್ತೊಂದು ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಿನ್ನೇಸೋಟ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್‌ಹೋಮ್, '2019 ಕ್ಕೆ ಹೋಲಿಸಿದರೆ ಇದೇ ರೀತಿಯ SARS ವೈರಸ್‌ಗಳಿಗೆ ಜನಸಂಖ್ಯೆಯಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಇದೆ. ಇದು ಸಾಂಕ್ರಾಮಿಕ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT