ಔತಣಕೂಟ ಬಳಿಕ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ ಮತ್ತು ಸರಯೂ ನದಿ ನೀರನ್ನು ಪ್ರಧಾನ ಮಂತ್ರಿ ಕಮಲಾ ಪರ್ಸಾದ್-ಬಿಸ್ಸೆಸರ್ ಗೆ ಉಡುಗೊರೆ ನೀಡಿದ ಪ್ರಧಾನಿ ಮೋದಿ  
ವಿದೇಶ

ಪ್ರಭು ಶ್ರೀರಾಮನಿಗೂ ಟ್ರಿನಿಡಾಡ್-ಟೊಬಾಗೋ ಸಂಬಂಧವಿದೆ, ಇಲ್ಲಿನ ಶಿಲೆ-ಪವಿತ್ರ ನೀರು ಅಯೋಧ್ಯೆಗೆ ಹೋಗಿದೆ: ರಾಮ ಮಂದಿರ ಪ್ರತಿಕೃತಿ, ಸರಯೂ ನೀರು ಪ್ರಧಾನಿ ಮೋದಿ ಗಿಫ್ಟ್; Video

ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಲ್ಲಿನ ಭಾರತೀಯ ಸಮುದಾಯ 'ಶಿಲೆಗಳು' ಮತ್ತು ಪವಿತ್ರ ನೀರನ್ನು ಕಳುಹಿಸಿದ್ದನ್ನು ಸ್ಮರಿಸಿಕೊಂಡರು.

ಪೋರ್ಟ್ ಆಫ್ ಸ್ಪೈನ್: ವೆನೆಜುವೆಲಾ ಬಳಿಯಿರುವ ದ್ವಿ-ದ್ವೀಪ ಕೆರಿಬಿಯನ್ ರಾಷ್ಟ್ರವಾದ ಟ್ರಿನಿಡಾಡ್ ಮತ್ತು ಟೊಬಾಗೋಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಅಧಿಕೃತ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದೊಂದಿಗೆ ಅವರ ಪೂರ್ವಜರ ಸಂಪರ್ಕದ ಬಗ್ಗೆ ಮಾತನಾಡಿದರು, ಅವರ ಸಾಂಸ್ಕೃತಿಕ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು ರಾಮ ಮಂದಿರದ ಪ್ರತಿಕೃತಿ ಮತ್ತು ಅಯೋಧ್ಯೆಯಲ್ಲಿ ಸರಯು ನದಿಯಿಂದ ಪವಿತ್ರ ನೀರನ್ನು ತಂದಿದ್ದು ಇದು ಗೌರವದ ಸಂಕೇತವಾಗಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಲ್ಲಿನ ಭಾರತೀಯ ಸಮುದಾಯ 'ಶಿಲೆಗಳು' ಮತ್ತು ಪವಿತ್ರ ನೀರನ್ನು ಕಳುಹಿಸಿದ್ದನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಪ್ರಭು ಶ್ರೀ ರಾಮಚಂದ್ರನ ಮೇಲೆ ನಿಮ್ಮ ಆಳವಾದ ನಂಬಿಕೆ ಬಗ್ಗೆ ನನಗೆ ತಿಳಿದಿದೆ. ಇಲ್ಲಿನ ರಾಮ ಲೀಲೆಗಳು ನಿಜವಾಗಿಯೂ ವಿಶಿಷ್ಟವಾಗಿವೆ. ಪ್ರಭು ಶ್ರೀ ರಾಮನ ಪವಿತ್ರ ನಗರವು ತುಂಬಾ ಸುಂದರವಾಗಿದ್ದು, ಅದರ ವೈಭವವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತದೆ ಎಂದು ರಾಮಚರಿತಮಾನಸ ಹೇಳುತ್ತದೆ. 500 ವರ್ಷಗಳ ನಂತರ ರಾಮಲಲ್ಲಾ ಅಯೋಧ್ಯೆಗೆ ಮರಳುವುದನ್ನು ನೀವೆಲ್ಲರೂ ಸ್ವಾಗತಿಸಿದ್ದೀರಿ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ನೀವು ಪವಿತ್ರ ನೀರು ಮತ್ತು 'ಶಿಲೆಯನ್ನು ಕಳುಹಿಸಿದ್ದೀರಿ. ನಾನು ಇದೇ ರೀತಿಯ ಭಕ್ತಿ ಭಾವನೆಯೊಂದಿಗೆ ಇಲ್ಲಿಗೆ ರಾಮ ಮಂದಿರದ ಪ್ರತಿಕೃತಿ ಮತ್ತು ಪವಿತ್ರ ಸರಯೂ ನದಿ ನೀರನ್ನು ತಂದಿದ್ದೇನೆ ಎಂದರು.

ಎರಡು ದಶಕಗಳ ಹಿಂದೆ ಟ್ರಿನಿಡಾಡ್ ಮತ್ತು ಟೊಬಾಗೋಗೆ ತಾವು ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಗಳು, ನಾನು ಕೊನೆಯ ಬಾರಿಗೆ 25 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆನು. ಅಂದಿನಿಂದ ಇಂದಿನವರೆಗೆ, ನಮ್ಮ ಸ್ನೇಹ ಇನ್ನಷ್ಟು ಬಲಗೊಂಡಿದೆ. ಬನಾರಸ್, ಪಾಟ್ನಾ, ಕೋಲ್ಕತ್ತಾ ಮತ್ತು ದೆಹಲಿ ಭಾರತದ ನಗರಗಳಾಗಿರಬಹುದು, ಆದರೆ ಇಲ್ಲಿ ಬೀದಿಗಳ ಹೆಸರುಗಳೂ ಇವೆ. ನವರಾತ್ರಿ, ಮಹಾಶಿವರಾತ್ರಿ ಮತ್ತು ಜನ್ಮಾಷ್ಟಮಿಯನ್ನು ಇಲ್ಲಿ ಸಂತೋಷ, ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸಲಾಗುತ್ತದೆ. ಚೌತಲ್ ಮತ್ತು ಭೈತಕ ಗಣ ಇಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತಿದೆ. ನನಗೆ ಇಲ್ಲಿ ಅನೇಕ ಪರಿಚಿತರಿದ್ದಾರೆ ಎಂದರು.

ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿರುವ ಭಾರತೀಯ ಸಮುದಾಯವನ್ನು ಶ್ಲಾಘಿಸುತ್ತಾ ಅವರು, ಇಲ್ಲಿನ ಭಾರತೀಯರು ಗಂಗಾ ಮತ್ತು ಯಮುನಾರನ್ನು ಬಿಟ್ಟು ಹೋದರೂ ತಮ್ಮ ಹೃದಯದಲ್ಲಿ ರಾಮಾಯಣವನ್ನು ಹೊತ್ತಿದ್ದರು. ಅವರು ತಮ್ಮ ಮಣ್ಣನ್ನು ಬಿಟ್ಟರು ಆದರೆ ಅವರ ಆತ್ಮವನ್ನಲ್ಲ. ಅವರು ಕೇವಲ ವಲಸಿಗರಲ್ಲ, ಅವರು ಕಾಲಾತೀತ ನಾಗರಿಕತೆಯ ಸಂದೇಶವಾಹಕರು. ಅವರ ಕೊಡುಗೆ ಈ ದೇಶಕ್ಕೆ ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನವನ್ನು ನೀಡಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT