ಮುಹಮ್ಮದ್ ಯೂನಸ್ 
ವಿದೇಶ

ಭಾರತದ ಹೊಡೆತಕ್ಕೆ ಪತರುಗುಟ್ಟಿದ ಬಾಂಗ್ಲಾ: ಮಾವಿನ ರಾಜತಾಂತ್ರಿಕತೆ ಮೂಲಕ ಸಂಬಂಧ ಸರಿಪಡಿಸಿಕೊಳ್ಳಲು Yunus ಮುಂದು!

ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಪ್ರದರ್ಶನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಢಾಕಾ ಮತ್ತು ನವದೆಹಲಿ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಢಾಕಾ: "ಅನುಕೂಲಕರ" ವಾತಾವರಣದಲ್ಲಿ ಢಾಕಾ ಜೊತೆಗಿನ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ನವದೆಹಲಿ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದ ವಾರಗಳ ನಂತರ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮುಹಮ್ಮದ್ ಯೂನಸ್ ಭಾರತದೊಂದಿಗೆ 'ಮಾವಿನ ರಾಜತಾಂತ್ರಿಕತೆ'ಯನ್ನು ಪ್ರಾರಂಭಿಸಿದ್ದಾರೆ. ಎರಡು ನೆರೆಹೊರೆಯವರ ನಡುವಿನ ಸೌಹಾರ್ದತೆಯ ಸೂಚಕವಾಗಿ ಢಾಕಾದಿಂದ 1,000 ಕಿಲೋಗ್ರಾಂಗಳಷ್ಟು ಪ್ರಸಿದ್ಧ 'ಹರಿಭಂಗ' ಮಾವಿನ ವಿಧವನ್ನು ಹೊಂದಿರುವ ಸರಕನ್ನು ಬಾಂಗ್ಲಾದಿಂದ ಕಳುಹಿಸಲಾಗಿದೆ.

ಬಾಂಗ್ಲಾದೇಶದ ದಿನಪತ್ರಿಕೆ ಡೈಲಿ ಸನ್ ಪ್ರಕಾರ, ಈ ಸರಕು ಸೋಮವಾರ ನವದೆಹಲಿಯನ್ನು ತಲುಪಲಿದೆ ಎಂದು ನವದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಯೂನಸ್ ಏಪ್ರಿಲ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ಇದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಅವರ ಮೊದಲ ಮುಖಾಮುಖಿ ಸಭೆಯಾಗಿತ್ತು.

ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಪುನರುಚ್ಚರಿಸಿದರು. ಭಾರತ ಸಂಬಂಧಕ್ಕೆ ಜನ-ಕೇಂದ್ರಿತ ವಿಧಾನವನ್ನು ನಂಬುತ್ತದೆ ಎಂದು ಅವರು ಒತ್ತಿ ಹೇಳಿದ್ದರು ಮತ್ತು ದೀರ್ಘಾವಧಿಯವರೆಗೆ ಎರಡೂ ದೇಶಗಳ ನಡುವಿನ ಸಹಕಾರ ಎರಡೂ ದೇಶಗಳ ಜನರಿಗೆ ಸ್ಪಷ್ಟ ಪ್ರಯೋಜನಗಳನ್ನು ನೀಡಿದೆ ಎಂದು ಉಲ್ಲೇಖಿಸಿದ್ದರು.

ಯೂನಸ್ ಸರ್ಕಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಗೂ ಮಾವಿನ ಹಣ್ಣುಗಳನ್ನು ಕಳುಹಿಸುತ್ತಿದೆ. ಹರಿಭಂಗ ಬಾಂಗ್ಲಾದೇಶದ ಪ್ರೀಮಿಯಂ ಮಾವಿನ ವಿಧವಾಗಿದೆ.

"ಮಾವಿನ ರಾಜತಾಂತ್ರಿಕತೆ"

ಹಿಂದಿನ ಆಡಳಿತಗಳಿಂದಲೂ ಮಾವಿನ ಹಣ್ಣುಗಳನ್ನು ಕಳುಹಿಸುವ ಪದ್ಧತಿ ಅಸ್ತಿತ್ವದಲ್ಲಿತ್ತು. ಆದರೆ ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಪ್ರದರ್ಶನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಢಾಕಾ ಮತ್ತು ನವದೆಹಲಿ ನಡುವಿನ ಸಂಬಂಧಗಳು ಹದಗೆಟ್ಟಿವೆ. ಹಸೀನಾ ಸರ್ಕಾರ ನವದೆಹಲಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿತ್ತು.

ಬಾಂಗ್ಲಾದೇಶದ ಹೊಸ ಉಸ್ತುವಾರಿ ಸರ್ಕಾರ ಪ್ರಾದೇಶಿಕ ಅಸ್ಥಿರತೆಯನ್ನು ಹೆಚ್ಚಿಸುವ ಮೂಲಕ ಚೀನಾ ಮತ್ತು ಪಾಕಿಸ್ತಾನವನ್ನು ಆಕರ್ಷಿಸಲು ಆಯ್ಕೆ ಮಾಡಿತ್ತು. ಬೀಜಿಂಗ್ ಭಾರತೀಯ ಉಪಖಂಡದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಶಸ್ತ್ರಾಸ್ತ್ರ ಒಪ್ಪಂದಗಳು ಮತ್ತು ಸಾಲಗಳ ಮೂಲಕ, ಚೀನಾ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಳಗೊಳಿಸಲು ಯತ್ನಿಸುತ್ತಿದೆ.

ರಾಜತಾಂತ್ರಿಕ ಅಶಾಂತಿಯ ನಡುವೆ, ಬಾಂಗ್ಲಾದೇಶದ "ಮಾವಿನ ರಾಜತಾಂತ್ರಿಕತೆ" ಭಾರತದೊಂದಿಗಿನ ಸಂಬಂಧಗಳನ್ನು ಸರಿಪಡಿಸೊಕೊಳ್ಳುವ ಢಾಕಾದ ಕ್ರಮವೆಂದು ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT