ಸರಿತಾ ರಾಮರಾಜು 
ವಿದೇಶ

ಡಿಸ್ನಿಲ್ಯಾಂಡ್ ಪ್ರವಾಸಕ್ಕೆ ಕರೆದೊಯ್ದು 11 ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ ಭಾರತ ಮೂಲದ ಮಹಿಳೆ

ಸರಿತಾ ರಾಮರಾಜು ಅವರು 2018ರಲ್ಲಿ ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಮಗು ತಂದೆಯ ಕಸ್ಟಡಿಯಲ್ಲಿ ಇತ್ತು.

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ತಮ್ಮ 11 ವರ್ಷದ ಮಗನನ್ನು ನಿರ್ದಯವಾಗಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

48 ವರ್ಷದ ಸರಿತಾ ರಾಮರಾಜು ಎಂಬವರು ತಮ್ಮ ಮಗನನ್ನು ಡಿಸ್ನಿಲ್ಯಾಂಡ್‌ಗೆ ಮೂರು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಯೇ ಹೋಟೆಲ್‌ನಲ್ಲಿ ಮಗನ ಕತ್ತು ಸೀಳಿ ಕೊಲೆ ಮಾಡಿರುವುದು ಪೋಲಿಸರಿಗೆ ತಿಳಿದುಬಂದಿದೆ. ಮಗನನ್ನು ಕೊಂದ ನಂತರ, ತಾನೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಮಗನನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಸರಿತಾ ರಾಮರಾಜು ಅವರು 2018ರಲ್ಲಿ ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಮಗು ತಂದೆಯ ಕಸ್ಟಡಿಯಲ್ಲಿ ಇತ್ತು. ಕೆಲ ದಿನಗಳ ಹಿಂದೆ ಮಗನನ್ನು ಭೇಟಿಯಾಗಿ ಕೆಲವು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ತಾಯಿ ಮಗನೊಂದಿಗೆ ಹೊರಟಿದ್ದರು.

ಡಿಸ್ನಿಲ್ಯಾಂಡ್‌ಗೆ ತಾವು ಮೂರು ದಿನಗಳ ಪಾಸ್ ಖರೀದಿಸಿದ್ದಾಗಿ ಪತ್ತೆಯಾಗಿದೆ. ಮಗು ಕೂಡ ತಾಯಿಯ ಜತೆ ಖುಷಿಯಿಂದ ಪ್ರವಾಸಕ್ಕೆ ತೆರಳಿದ್ದ. ಸ್ಯಾಂಟಾ ಅನಾ ಎಂಬ ಸ್ಥಳದ ಹೋಟೆಲ್‌ನಲ್ಲಿ ತಂಗಿದ್ದರು. ಮಾರ್ಚ್ 19ರಂದು ಹಿಂದಿರುಗಬೇಕಾಗಿತ್ತು. ಮಗನನ್ನು ತಂದೆ ಕಸ್ಟಡಿಗೆ ನೀಡಬೇಕಾಗಿತ್ತು. ಆದರೆ, ಅದಕ್ಕೂ ಮುನ್ನ ಈ ದುರ್ಘಟನೆ ನಡೆದಿದೆ.

ಅತ್ಯಂತ ವಿಚಿತ್ರವೆಂದರೆ, ಮಗನನ್ನು ಕೊಂದ ನಂತರ ತಾನೇ ಪೊಲೀಸರಿಗೆ ಕರೆಮಾಡಿ ವಿಷಯವನ್ನು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಗನನ್ನು ಕೊಲ್ಲಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತನಿಖೆ ಮುಂದುವರಿದಿದೆ.

ಭಾರತದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂದು ಪ್ರಕಾಶ್ ರಾಜು ಹೇಳಿದ್ದರು ಎಂದು NBC ವರದಿ ಹೇಳಿದ್ದು, ದಂಪತಿಗಳು ಜನವರಿ 2018 ರಲ್ಲಿ ವಿಚ್ಛೇದನ ಪಡೆದಿದ್ದಾರೆ, ರಾಜು ಅವರಿಗೆ ಮಗನ ಕಸ್ಟಡಿಯನ್ನು ನೀಡಲಾಯಿತು. ನ್ಯಾಯಾಲಯದ ದಾಖಲೆಗಳ ಪ್ರಕಾರ ಸರಿತಾ ರಾಮರಾಜು ಭೇಟಿ ಮಾಡುವ ಹಕ್ಕುಗಳನ್ನು ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT