ಸಾವನ್ನಪ್ಪಿದ ಕುಟುಂಬ 
ವಿದೇಶ

ಬೀದಿ ಬದಿ ಆಹಾರ ಸೇವಿಸಿ ಘನ ಘೋರ ದುರಂತ: ರಜೆ ಕಳೆಯಲು ಬಂದು ಮಸಣ ಸೇರಿದ ಕುಟುಂಬ; ಮಕ್ಕಳ ಜೊತೆ ಪೋಷಕರ ಸಾವು!

6 ವರ್ಷದ ಕದಿರ್ ಮತ್ತು 3 ವರ್ಷದ ಮಸಾಲ್ ಎಂಬ ಮಕ್ಕಳು ಸಾವನ್ನಪ್ಪಿವೆ. ಮರುದಿನವೇ ಮಕ್ಕಳ ತಾಯಿ ಸಿಗ್ಡೆಮ್ ಬೊಸೆಕ್ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಟರ್ಕಿ: ರಜೆ ಕಳೆಯಲೆಂದು ಜರ್ಮನಿಯಿಂದ ಟರ್ಕಿಗೆ ಹೋಗಿದ್ದ ನಾಲ್ವರ ಪುಟ್ಟ ಕುಟುಂಬ ಮಸಣ ಸೇರಿದೆ. ಬೀದಿ ಬದಿಯ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ಇಸ್ತಾನ್‌ಬುಲ್‌ನ ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ಇರುವ ಸ್ಟ್ರೀಟ್​​ನಲ್ಲಿ ಈ ಕುಟುಂಬ ಆಹಾರ ಸೇವಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳೆ ಆಕೆಯ ಪತಿ ಹಾಗೂ ಚಿಕ್ಕ ಮಕ್ಕಳಿಬ್ಬರು ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು. ಕುಟುಂಬವು ರಜೆಗಾಗಿ ಜರ್ಮನಿಯಿಂದ ಪ್ರಯಾಣಿಸಿತ್ತು ಎಂದು ಪೀಪಲ್ ವರದಿ ಮಾಡಿದೆ.

ಘಟನೆಯ ನಂತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, 6 ವರ್ಷದ ಕದಿರ್ ಮತ್ತು 3 ವರ್ಷದ ಮಸಾಲ್ ಎಂಬ ಮಕ್ಕಳು ಸಾವನ್ನಪ್ಪಿವೆ. ಮರುದಿನವೇ ಮಕ್ಕಳ ತಾಯಿ ಸಿಗ್ಡೆಮ್ ಬೊಸೆಕ್ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ತಂದೆ ಸರ್ವೆಟ್ ಬೊಸೆಕ್ ಕೂಡ ಹಲವಾರು ದಿನಗಳ ತೀವ್ರ ನಿಗಾ ಘಟಕದಲ್ಲಿ ಕಳೆದ ನಂತರ ಸೋಮವಾರ ನಿಧನರಾಗಿದ್ದಾರೆ.

ಇಸ್ತಾನ್‌ಬುಲ್‌ನ ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಡಾ. ಅಬ್ದುಲ್ಲಾ ಎಮ್ರೆ ಗುನರ್ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಫಾತಿಹ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೋಸೆಕ್ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ. ಕೂಡಲೇ ಚಿಕಿತ್ಸೆ ನೀಡಲಾಗಿದ್ದರೂ ಕೂಡ ಕುಟುಂಬದ ಮುಖ್ಯಸ್ಥ ಸಾವನ್ನಪ್ಪಿದ್ದಾರೆ. ಬೋಸೆಕ್ ಕುಟುಂಬವು ನವೆಂಬರ್ 9 ರಂದು ಟ್ರಿಪ್​ಗೆಂದು ಜರ್ಮನಿಯ ಹ್ಯಾಂಬರ್ಗ್‌ನಿಂದ ಇಸ್ತಾನ್‌ಬುಲ್‌ಗೆ ಪ್ರಯಾಣ ಬೆಳೆಸಿತ್ತು.

ಇಸ್ತಾನ್‌ಬುಲ್‌ನಲ್ಲಿ ವಿಷಪ್ರಾಶನದಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಡೋಲು ಸುದ್ದಿ ಸಂಸ್ಥೆ ಸೋಮವಾರ ತಿಳಿಸಿದೆ. ನವೆಂಬರ್ 12 ರಂದು ಕುಟುಂಬವು ಆಸ್ಪತ್ರೆಗೆ ತೆರಳಿದ್ದರು. ಅದೇ ದಿನ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ನವೆಂಬರ್ 13ರಂದು ನಿಧನರಾಗಿದ್ದಾರೆ. ಆದರೆ ಹಲವರು ಈ ಸಾವು ಆಹಾರದಿಂದಾಗಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಹೋಟೆಲ್​​ನಲ್ಲಿ ಕೀಟನಾಶಕಗಳ ಸ್ಪ್ರೇ ಮಾಡಿದ್ದು, ಅದರಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇಸ್ತಾನ್‌ಬುಲ್‌ನ ಪ್ರಾಂತೀಯ ಆರೋಗ್ಯ ನಿರ್ದೇಶನಾಲಯ ಮತ್ತು ಮುಖ್ಯ ಸಾರ್ವಜನಿಕ ಅಭಿಯೋಜಕರ ಕಚೇರಿ ತನಿಖೆ ನಡೆಸುತ್ತಿದೆ, ವಿಧಿವಿಜ್ಞಾನ ವೈದ್ಯಕೀಯ ಸಂಸ್ಥೆಯು ಕುಟುಂಬದ ಸಾವಿಗೆ ಕಾರಣ ಪತ್ತೆ ಹಚ್ಚುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

4 ವರ್ಷಗಳಲ್ಲಿ ಮೊದಲ ಬಾರಿಗೆ ಖಜಾನೆ ಎಕ್ಸ್ಪೋಷರ್ ಕಡಿತಗೊಳಿಸಿದ ಆರ್‌ಬಿಐ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ; ಡೊನಾಲ್ಡ್ ಟ್ರಂಪ್

Video: ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ Sunil Gavaskar, ಜೆಮಿಮಾ ಜತೆ ಮ್ಯೂಸಿಕಲ್ ಡ್ಯೂಯೆಟ್!

WPL 2026: 4 ಓವರ್, 1 ಮೇಡನ್.. ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್.. RCBಯ ಲೇಡಿ ಹೇಜಲ್ವುಡ್ Lauren Bell!

SCROLL FOR NEXT