ಡ್ರಗ್ಸ್‌ನ ಅಮಲಿನಲ್ಲಿ 'ಅಡ್ಡಾದಿಡ್ಡಿ'ಯಾಗಿ ಟ್ರಕ್ ಓಡಿಸಿದ ಭಾರತೀಯ ವಲಸಿಗ 
ವಿದೇಶ

ಅಮೆರಿಕ: ಡ್ರಗ್ಸ್‌ನ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಟ್ರಕ್ ಓಡಿಸಿದ ಜಶನ್‌ಪ್ರೀತ್ ಸಿಂಗ್; ಮೂವರು ಸಾವು! Video

ಈತನನ್ನು ಜಶನ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಸ್ಯಾನ್ ಬರ್ನಾರ್ಡಿನೋ ಕೌಂಟಿಯ ಫ್ರೀವೇಯಲ್ಲಿ ಟ್ರಾಫಿಕ್ ನಿಧಾನಗತಿಯಲ್ಲಿದ್ದರೂ ಮಾದಕ ದ್ರವ್ಯದ ನಶೆಯಲ್ಲಿ ಕಾರಿಗೆ ಗುದ್ದಿದ್ದಾರೆ

ದಕ್ಷಿಣ ಕ್ಯಾಲಿಫೋರ್ನಿಯಾ: 21 ವರ್ಷದ ಭಾರತದ ಅಕ್ರಮ ವಲಸಿಗನೋರ್ವ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಡ್ಡಾದಿಡ್ಡಿ'ಯಾಗಿ ಟ್ರಕ್ ಓಡಿಸಿ ಮೂವರು ಸಾವಿಗೆ ಕಾರಣವಾಗಿದ್ದಾರೆ.

ಈತನನ್ನು ಜಶನ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಸ್ಯಾನ್ ಬರ್ನಾರ್ಡಿನೋ ಕೌಂಟಿಯ ಫ್ರೀವೇಯಲ್ಲಿ ಟ್ರಾಫಿಕ್ ನಿಧಾನಗತಿಯಲ್ಲಿದ್ದರೂ ಮಾದಕ ದ್ರವ್ಯದ ನಶೆಯಲ್ಲಿ ಕಾರಿಗೆ ಗುದ್ದಿದ್ದಾರೆ. ತದನಂತರ ಟ್ರಕ್ ಸೇರಿದಂತೆ ಎದುರಿಗೆ ಬಂದ ವಾಹನಗಳಿಗೆ ಗುದ್ದಿಕೊಂಡು ಹೋಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಣಿ ಅಪಘಾತ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಯುಎಸ್ ನ್ಯೂಸ್ ವರದಿಗಳು ಹೇಳಿವೆ.

ಸಿಂಗ್ ಅವರು 2022 ರಲ್ಲಿ ದಕ್ಷಿಣ ಯುಎಶ್ ಗಡಿಯನ್ನು ದಾಟಿದ್ದಾರೆಂದು ವರದಿಯಾಗಿದೆ. ಅವರು ಮಾರ್ಚ್ 2022 ರಲ್ಲಿ ಕ್ಯಾಲಿಫೋರ್ನಿಯಾದ ಎಲ್ ಸೆಂಟ್ರೊ ಸೆಕ್ಟರ್‌ನಲ್ಲಿ ಗಡಿ ಗಸ್ತು ಏಜೆಂಟರಿಗೆ ಸಿಕ್ಕಿಬಿದ್ದಿದ್ದರು. ಆದರೆ ಬೈಡನ್ ಆಡಳಿತಾವಧಿಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅಪಘಾತದ ದೃಶ್ಯವು ಜಶನ್‌ಪ್ರೀತ್ ಸಿಂಗ್ ಅವರ ಟ್ರಕ್ ನಲ್ಲಿದ್ದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿಯಲ್ಪಟ್ಟಿದೆ.

ಮೊದಲಿಗೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದರಿಂದ ಕನಿಷ್ಠ ಮೂವರು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮೂವರನ್ನು ಇನ್ನೂ ಸಾರ್ವಜನಿಕವಾಗಿ ಗುರುತಿಸಲಾಗಿಲ್ಲ. ಗಾಯಗೊಂಡವರಲ್ಲಿ ಸಿಂಗ್ ಮತ್ತು ವಾಹನದ ಟೈರ್ ಬದಲಾಯಿಸಲು ಸಹಾಯ ಮಾಡುತ್ತಿದ್ದ ಮೆಕ್ಯಾನಿಕ್ ಸೇರಿದ್ದಾರೆ.

ಡ್ರಗ್ಸ್‌ನ ಅಮಲಿನಲ್ಲಿದ್ದ ಕಾರಣ ಸಿಂಗ್ ಬ್ರೇಕ್‌ ಹಾಕಿಲ್ಲದ ಕಾರಣ ಈ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂತಿಮವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಸಿಬ್ಬಂದಿಯಿಂದ ತಪಾಸಣೆ ನಡೆಸಲಾಗಿದೆ. ಡ್ರಗ್ಸ್ ಸೇವಿಸಿ ವಾಹನ ಚಲಾಯಿಸುತ್ತಿದದ್ದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿರುವುದಾಗಿ ABC7 News ವರದಿ ಮಾಡಿದೆ. ಸಿಂಗ್ ಅಮೆರಿಕದಲ್ಲಿ ಕಾನೂನುಬದ್ಧವಾಗಿ ವಲಸೆ ಸ್ಥಾನಮಾನ ಹೊಂದಿಲ್ಲ ಎಂದು US Department of Homeland Security ದೃಢಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಹಿಳಾ ವಿಶ್ವಕಪ್ 2025: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 53 ರನ್‌ಗಳ ಭರ್ಜರಿ ಜಯ, ಸೆಮಿಫೈನಲ್‌ಗೆ INDIA ಲಗ್ಗೆ!

ವೆಸ್ಟ್ ಬ್ಯಾಂಕ್ ವಶಪಡಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೇ ಅಮೆರಿಕದ ಬೆಂಬಲ ಕಳಕೊಳ್ಳಬೇಕಾಗುತ್ತೆ: ಇಸ್ರೇಲ್‌ಗೆ ಟ್ರಂಪ್ ಕಟು ಎಚ್ಚರಿಕೆ

ರಕ್ಷಣಾ ವಲಯಕ್ಕೆ 79,000 ಕೋಟಿ ರೂ. ಮೌಲ್ಯದ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ!

ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆ ಆರಂಭ: ಯಾರಾಗಲಿದ್ದಾರೆ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ?

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಎರಡ್ಮೂರು ದಿನಗಳಲ್ಲಿ AAI ವರದಿ ಸಲ್ಲಿಕೆ- ಎಂ.ಬಿ ಪಾಟೀಲ್

SCROLL FOR NEXT