ಡೊನಾಲ್ಡ್ ಟ್ರಂಪ್- ಇರಾನ್ ದಾಳಿ ನಡೆಸಿದ ಪ್ರದೇಶ online desk
ವಿದೇಶ

'ನೀವು ಮರೆಯಲಾಗದ ಹೊಡೆತ ತಿನ್ನುತ್ತೀರಿ; ಈ ಬಾರಿ ಭಯಾನಕ ಕ್ಷೀಪಣಿ ಬಳಸುತ್ತೇವೆ': ಟ್ರಂಪ್‌ ಸರ್ವನಾಶ ಹೇಳಿಕೆಗೆ ಇರಾನ್ ತಿರುಗೇಟು

ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಟ್ರಂಪ್ ವಿರುದ್ಧ ಗುಡುಗಿದ್ದು, "ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುತ್ತೀರಿ" ಎಂದು ತಿರುಗೇಟು ನೀಡಿದೆ.

ಟೆಹ್ರಾನ್: ಇಂದು ರಾತ್ರಿಯೇ ಒಂದು ಇಡೀ ನಾಗರಿಕತೆಯೇ ನಾಶವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್ ಗೆ ಎಚ್ಚರಿಕೆ ನೀಡಿದ್ದು, ಜಾಗತಿಕ ಸಂಚಲನಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಟ್ರಂಪ್ ವಿರುದ್ಧ ಗುಡುಗಿದ್ದು, "ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುತ್ತೀರಿ" ಎಂದು ತಿರುಗೇಟು ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೆ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿಯು, "ಟ್ರಂಪ್ ಹೇಳಿದ್ದಾರೆ, 'ಇಡೀ ನಾಗರಿಕತೆಯು ಇಂದು ರಾತ್ರಿಯೇ ಸಾಯುತ್ತದೆ' ಎಂದು. ಆದರೆ "ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತ ತಿನ್ನುತ್ತೀರಿ. ಈ ಬಾರಿ ನಾವು ಅತ್ಯಂತ ಪ್ರಭಾವಶಾಲಿ ಕ್ಷೀಪಣಿಯಾದ ಖೈಬರ್ ಕ್ಷೀಪಣಿ ಬಳಸುತ್ತೇವೆ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

"ಇಡೀ ನಾಗರಿಕತೆಯು ಇಂದು ರಾತ್ರಿಯೇ ಸಾಯುತ್ತದೆ. ಮತ್ತೆಂದೂ ಈ ನಾಗರಿಕತೆ ಮರಳುವುದಿಲ್ಲ. ಈ ಘಟನೆ ಸಂಭವಿಸಬೇಕೆಂದು ನಾನು ಬಯಸುವುದಿಲ್ಲ, ಆದರೆ ಅದು ಬಹುಶಃ ಸಂಭವಿಸುವ ಸಾಧ್ಯತೆಯಿದೆ. ಈ ಮೂಲಕ 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ಇರಾನ್‌ನ ಮಹಾನ್ ಜನರನ್ನು ದೇವರು ಆಶೀರ್ವದಿಸಲಿ!" ಎಂದು ಟ್ರಂಪ್ ಇದಕ್ಕು ಮುನ್ನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಡುವು ಅಂತ್ಯಕ್ಕೂ ಮೊದಲೇ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ ರಕ್ಕಸ ದಾಳಿ: 50ಕ್ಕೂ ಹೆಚ್ಚು ಸೇನಾ ನೆಲೆಗಳು ಸರ್ವನಾಶ!

'ಇಂದು ರಾತ್ರಿಯೇ ಇಡೀ ಇರಾನ್ ಅನ್ನು ಸರ್ವನಾಶ ಮಾಡುತ್ತೇವೆ': ಡೆಡ್‌ಲೈನ್ ಮುಗಿಯೋ ಮುನ್ನವೇ ಟ್ರಂಪ್‌ ಕೊನೆ ಎಚ್ಚರಿಕೆ!

ಬೆಂಗಳೂರು: ಬ್ಲಾಕ್ ನಲ್ಲಿ ದುಪ್ಪಟ್ಟು ಬೆಲೆಗೆ IPL ಟಿಕೆಟ್ ಮಾರಾಟ,11 ಮಂದಿಯ ಬಂಧನ!

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮಕ್ಕಳ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ CRPF ಫೈರಿಂಗ್; ಇಬ್ಬರು ಸಾವು, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಯತ್ನಾಳ್‌ ಬಿಜೆಪಿಗೆ ವಾಪಸ್: ಸಂಚಲನ ಸೃಷ್ಟಿಸಿದ ರಮೇಶ್‌ ಜಾರಕಿಹೊಳಿ ಹೇಳಿಕೆ

SCROLL FOR NEXT