ಪೋಪ್ ಲಿಯೋ XIV Photo| AP
ವಿದೇಶ

'ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ ಮಾಡುವ ಉದ್ದೇಶ ನನಗಿಲ್ಲ': ಪೋಪ್ ಲಿಯೋ XIV

ಪೋಪ್ ಲಿಯೋ ಅವರನ್ನು ಟ್ರಂಪ್ ಸಾರ್ವಜನಿಕವಾಗಿ ಟೀಕಿಸಿದರು. ಇರಾನ್ ಯುದ್ಧದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಪೋಪ್ ಮಾಡಿದ ಮನವಿಗಳನ್ನು ವಿರೋಧಿಸಿದರು.

ವಾಷಿಂಗ್ಟನ್: ಇರಾನ್‌ನ ನಾಗರಿಕತೆಯನ್ನು ನಾಶ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದು ಸ್ವೀಕಾರಾರ್ಹವಲ್ಲ ಎಂದು ಇತ್ತೀಚೆಗೆ ಅಮೆರಿಕ-ಇರಾನ್ ಯುದ್ಧದ ಕುರಿತು ಮಾತನಾಡಿದ್ದ ಪೋಪ್ ಲಿಯೋ XIV ಅವರನ್ನು ಅಮೆರಿಕ ಅಧ್ಯಕ್ಷರು ಟೀಕಿಸಿದ್ದು, ಟ್ರಂಪ್ ಅವರೊಂದಿಗೆ ಚರ್ಚಿಸುವ ಉದ್ದೇಶ ನನಗಿಲ್ಲ ಎಂದು ಸೋಮವಾರ ಹೇಳಿದ್ದಾರೆ.

'ನಾನು ರಾಜಕಾರಣಿಯಲ್ಲ'. ಟ್ರಂಪ್ ಜೊತೆ ಚರ್ಚೆ ಮಾಡುವ ಉದ್ದೇಶ ನನಗಿಲ್ಲ. ನಾನು ನೀಡುವ ಸಂದೇಶ ಒಂದೇ: ಅದು ಶಾಂತಿಯನ್ನು ಉತ್ತೇಜಿಸುವುದು ಎಂದು ಮೊದಲ ಆಫ್ರಿಕಾ ಭೇಟಿಗಾಗಿ ಅಲ್ಜೀರಿಯಾಕ್ಕೆ ತೆರಳುತ್ತಿದ್ದಾಗ ಪೋಪ್ ವಿಮಾನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

11 ದಿನಗಳ ಆಫ್ರಿಕಾ ಪ್ರವಾಸದಲ್ಲಿರುವ ಅಮೆರಿಕದಲ್ಲಿ ಜನಿಸಿದ ಪೋಪ್ ಸೋಮವಾರ ಅಲ್ಜೀರಿಯಾಕ್ಕೆ ಬಂದಿಳಿದರು. ಮುಸ್ಲಿಂ ಬಹುಸಂಖ್ಯಾತ ದೇಶಕ್ಕೆ ಪೋಪ್ ಒಬ್ಬರು ಮಾಡಿದ ಮೊದಲ ಪ್ರವಾಸ ಇದು.

ಪೋಪ್ ಲಿಯೋ ಅವರನ್ನು ಟ್ರಂಪ್ ಸಾರ್ವಜನಿಕವಾಗಿ ಟೀಕಿಸಿದರು. ಇರಾನ್ ಯುದ್ಧದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಪೋಪ್ ಮಾಡಿದ ಮನವಿಗಳನ್ನು ವಿರೋಧಿಸಿದರು.

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ'ನಾನು ಪೋಪ್ ಲಿಯೋ ಅವರ ಅಭಿಮಾನಿಯಲ್ಲ. ಪರಮಾಣು ಶಸ್ತ್ರಾಸ್ತ್ರವನ್ನು ಬಯಸುವ ದೇಶದ (ಇರಾನ್) ಪರ ಮಾತನಾಡುವ ಪೋಪ್ ಅವರಿಗೆ ವಿದೇಶಾಂಗ ನೀತಿಯ ಕುರಿತು ಏನೂ ಗೊತ್ತಿಲ್ಲ. ಅವರು ಪೋಪ್ ಆಗಿ ತನ್ನ ಕೆಲಸವನ್ನು ಮಾಡಿದರೆ ಸಾಕು' ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚೆಗೆ ಇರಾನ್ ಮೇಲಿನ ಯುದ್ಧದ ಕುರಿತು ಪ್ರತಿಕ್ರಿಯಿಸಿದ್ದ ಪೋಪ್ ಲಿಯೋ, 'ಇರಾನ್‌ನ ನಾಗರಿಕತೆಯನ್ನು ನಾಶಪಡಿಸುತ್ತೇನೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದು ಸ್ವೀಕಾರಾರ್ಹವಲ್ಲ, ಅವರ ಆಡಳಿತದಲ್ಲಿ ವಲಸೆ ನೀತಿಗಳಿಂದ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರವನ್ನು ಪ್ರದರ್ಶಿಸಿದ್ದು ಸಾಕು, ಈ ಯುದ್ಧ ಸಾಕು' ಎಂದು ಟೀಕಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿಕೆ ಶಿವಕುಮಾರ್

ಸಿದ್ದರಾಮಯ್ಯಗೆ ವಿಶ್ರಾಂತಿ ನೀಡಲ್ಲ, ಅವರ ಸೇವೆ ಇನ್ನೂ ಅಗತ್ಯವಿದೆ: CLP ಸಭೆಯಲ್ಲಿ ವೇಣುಗೋಪಾಲ್ ಭಾವುಕ

ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ: ಡಿಕೆಶಿಗೆ ಸಿದ್ದು ಪತ್ರ!

ಲೋಕಭವನಕ್ಕೆ ತೆರಳಿದ ಡಿ.ಕೆ ಶಿವಕುಮಾರ್: ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ; ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣವಚನ!

ವೈಭವ್ ಸೂರ್ಯವಂಶಿಗೆ ಬಂಪರ್ ಆಫರ್: ಜಾರ್ಖಂಡ್ ಆರೋಗ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್

SCROLL FOR NEXT