ವಿದೇಶ

ದಾಳಿಗೆ ಟ್ರಂಪ್ ಹಿಂದೇಟು ಬೆನ್ನಲ್ಲೇ ದೇಶದ್ರೋಹಿಗಳ 'ಬೆನ್ನು ಮುರಿಯಲು' ಅಧಿಕಾರಿಗಳಿಗೆ ಖಮೇನಿ ಮಹತ್ವದ ಆದೇಶ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಂದು ದೇಶದಲ್ಲಿ ವಾರಗಟ್ಟಲೆ ನಡೆದ ಪ್ರತಿಭಟನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ದೂಷಿಸಿದ್ದಾರೆ. ವಾಷಿಂಗ್ಟನ್ ಇರಾನ್ ಅನ್ನು 'ನುಂಗಲು' ಬಯಸುತ್ತಿದೆ ಎಂದು ಹೇಳಿದ್ದಾರೆ.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಂದು ದೇಶದಲ್ಲಿ ವಾರಗಟ್ಟಲೆ ನಡೆದ ಪ್ರತಿಭಟನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೇರವಾಗಿ ದೂಷಿಸಿದ್ದಾರೆ. ವಾಷಿಂಗ್ಟನ್ ಇರಾನ್ ಅನ್ನು 'ನುಂಗಲು' ಬಯಸುತ್ತಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಹಬ್ಬದ ಸಂದರ್ಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆ ಅಮೆರಿಕ ಪ್ರಾಯೋಜಿತ ಪಿತೂರಿಯಾಗಿತ್ತು ಎಂದು ಆರೋಪಿಸಿದ್ದು ದೇಶದ್ರೋಹಿಗಳ 'ಬೆನ್ನು ಮುರಿಯಲು' ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಾವು ದೇಶವನ್ನು ಯುದ್ಧಕ್ಕೆ ಕರೆದೊಯ್ಯಲು ಬಯಸುವುದಿಲ್ಲ. ಆದರೆ ದೇಶೀಯ ಅಪರಾಧಿಗಳನ್ನು ಯಾವುದೇ ಸಂದರ್ಭದಲ್ಲೂ ಬಿಡಲಾಗುವುದಿಲ್ಲ. ಅಂತರರಾಷ್ಟ್ರೀಯ ಅಪರಾಧಿಗಳನ್ನು ಸಹ ಶಿಕ್ಷಿಸಲಾಗುತ್ತದೆ. ಇರಾನ್ ರಾಷ್ಟ್ರವು ಹಿಂದಿನ ದಂಗೆಗಳನ್ನು ನಿಗ್ರಹಿಸಿದಂತೆಯೇ ಗಲಭೆಕೋರರನ್ನು ಮೂಳೆಗೆ ಪುಡಿಮಾಡಬೇಕು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.

ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಡಿಸೆಂಬರ್ 28ರಂದು ಸಣ್ಣ ಪ್ರಮಾಣದಲ್ಲಿ ಇರಾನ್‌ನಲ್ಲಿ ಶುರವಾದ ಪ್ರತಿಭಟನೆಗಳು ಪ್ರಾರಂಭವಾದರೂ, ಶೀಘ್ರದಲ್ಲೇ ಒಂದು ದೊಡ್ಡ ಚಳುವಳಿಯಾಗಿ ಉಲ್ಬಣಗೊಂಡಿತ್ತ. ಇಸ್ಲಾಮಿಕ್ ಗಣರಾಜ್ಯದ ಮುಲ್ಲಾ ಆಡಳಿತವನ್ನು ಉರುಳಿಸುವ ಬೇಡಿಕೆಗಳು ಘೋಷಣೆಗಳಲ್ಲಿ ಪ್ರಮುಖವಾದವು. ಪ್ರತಿಭಟನಾಕಾರರನ್ನು ಗಲ್ಲಿಗೇರಿಸಿದರೆ 'ಬಲವಾದ ಕ್ರಮ'ದ ಭರವಸೆ ನೀಡುವುದೂ ಸೇರಿದಂತೆ, ಹಸ್ತಕ್ಷೇಪದ ಬೆದರಿಕೆಯನ್ನು ಟ್ರಂಪ್ ಪದೇ ಪದೇ ಹಾಕಿದರು.

ಮಾನವ ಹಕ್ಕುಗಳ ಸಂಘಟನೆ HRANA ದ ಮಾಹಿತಿಯ ಪ್ರಕಾರ, ಭದ್ರತಾ ಪಡೆಗಳ ಕಾರ್ಯಾಚರಣೆಗಳಲ್ಲಿ 3,090 ಜನರು ಸಾವನ್ನಪ್ಪಿದರು. ಇದರಲ್ಲಿ 2,885 ಪ್ರತಿಭಟನಾಕಾರರು ಸೇರಿದ್ದಾರೆ. 22,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಇಂಟರ್ನೆಟ್ ಸಂಪರ್ಕ ಕಡಿತಗೊಂಡ ಕಾರಣ ನಿಖರವಾದ ಮಾಹಿತಿಯನ್ನು ಸಂಗ್ರಹಿಸುವುದು ಅತ್ಯಂತ ಕಷ್ಟಕರವಾಗಿತ್ತು. ಇದನ್ನು ಶನಿವಾರ ಭಾಗಶಃ ಪುನಃಸ್ಥಾಪಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

U19 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; 4 ವಿಕೆಟ್‌ ಪಡೆದು ಮಿಂಚಿದ ವಿಹಾನ್

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ

ನೀವು ದ್ವೇಷದಿಂದ ಕುರುಡರಾಗಿದ್ದೀರಿ...: ನಾನು ಮುಸ್ಲಿಂ ಅಂತ ಅವಕಾಶ ಸಿಗುತ್ತಿಲ್ಲ; ರೆಹಮಾನ್ ಹೇಳಿಕೆ ಖಂಡಿಸಿದ ಕಂಗನಾ!

ಡಿಸೆಂಬರ್‌ನಲ್ಲಿ ವಿಮಾನ ಹಾರಾಟದಲ್ಲಿ ಭಾರಿ ಅವ್ಯವಸ್ಥೆ: ಇಂಡಿಗೋಗೆ 22 ಕೋಟಿ ರೂ. ದಂಡ ವಿಧಿಸಿದ DGCA

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

SCROLL FOR NEXT