ಟ್ರಂಪ್ ಜೊತೆಗೆ ಶೆಹಬಾಜ್ ಷರೀಫ್ 
ವಿದೇಶ

ಪಾಕಿಸ್ತಾನ ಪ್ರಧಾನಿ 'ಶೆಹಬಾಜ್ ಷರೀಫ್' ಗೆ ಮತ್ತೆ ಟ್ರಂಪ್ ಆಹ್ವಾನ! ಯಾಕೆ ಗೊತ್ತಾ?

ಗಾಜಾಕ್ಕೆ ಟ್ರಂಪ್‌ರ 20 ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವನ್ನು ಅಮೆರಿಕ ರೂಪಿಸುತ್ತಿದ್ದು, ಶುಕ್ರವಾರ ಶಾಂತಿ ಮಂಡಳಿಯ ಸಂಸ್ಥಾಪಕ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಹ್ವಾನಿಸಿದ್ದಾರೆ. ಗಾಜಾದ ಶಾಂತಿ ಮಂಡಳಿ ಸೇರಲು ಈ ಆಹ್ವಾನ ನೀಡಿರುವುದಾಗಿ ಪಾಕಿಸ್ತಾನ ಭಾನುವಾರ ಹೇಳಿದೆ.

ಗಾಜಾಕ್ಕೆ ಟ್ರಂಪ್‌ರ 20 ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವನ್ನು ಅಮೆರಿಕ ರೂಪಿಸುತ್ತಿದ್ದು, ಶುಕ್ರವಾರ ಶಾಂತಿ ಮಂಡಳಿಯ ಸಂಸ್ಥಾಪಕ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಧ್ಯಕ್ಷ ಟ್ರಂಪ್ ಈಗಾಗಲೇ ಈ ಮಂಡಳಿಯ ಅಧ್ಯಕ್ಷ ಎಂದು ಘೋಷಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಾಬಿ, ಪಾಕಿಸ್ತಾನಕ್ಕೆ ಔಪಚಾರಿಕ ಆಹ್ವಾನ ಬಂದಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಗಾಜಾದ ಶಾಂತಿ ಮಂಡಳಿಗೆ ಸೇರಲು ಅಮೆರಿಕದ ಅಧ್ಯಕ್ಷರ ಆಹ್ವಾನವನ್ನು ಪಾಕಿಸ್ತಾನದ ಪ್ರಧಾನಿ ಸ್ವೀಕರಿಸಿದ್ದಾರೆ ಎಂದು ಅಂದ್ರಾಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಪ್ಯಾಲೆಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ

ಗಾಜಾದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಪಾಕಿಸ್ತಾನವು ಅಂತರರಾಷ್ಟ್ರೀಯ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ವಿಚಾರವನ್ನು ವಿವರವಾಗಿ ಹೇಳಲಿಲ್ಲ.

ಶಾಂತಿ ಮಂಡಳಿಯು ರಾಜತಾಂತ್ರಿಕತೆ, ಅಭಿವೃದ್ಧಿ, ಮೂಲಸೌಕರ್ಯ ಮತ್ತು ಆರ್ಥಿಕ ಕಾರ್ಯತಂತ್ರದ ಅನುಭವ ಹೊಂದಿರುವ ನಾಯಕರನ್ನು ಒಳಗೊಂಡಿದೆ ಎಂದು ಶ್ವೇತಭವನ ಹೇಳಿದೆ. ಇದು ಟರ್ಕಿ, ಈಜಿಪ್ಟ್, ಅರ್ಜೆಂಟೀನಾ, ಇಂಡೋನೇಷ್ಯಾ, ಇಟಲಿ, ಮೊರಾಕೊ, ಯುಕೆ, ಜರ್ಮನಿ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಸುಮಾರು 60 ರಾಜ್ಯಗಳ ಮುಖ್ಯಸ್ಥರನ್ನು ಶಾಂತಿ ಸಂಸ್ಥೆಗೆ ಸೇರಲು ಆಹ್ವಾನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ayodhya: ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಆರೋಪಿಗಳ ವಿರುದ್ಧ FIR ದಾಖಲು!

Women T-20 World cup: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಗೆಲುವು!

ಸೇಡಿಗಾಗಿ ಖಾಸಗಿ ಪೋಟೋ, ವಿಡಿಯೋ ವೈರಲ್, ಬೆದರಿಕೆ ಪ್ರಕರಣ: ಕಡ್ಡಾಯವಾಗಿ FIR ದಾಖಲಿಸಬೇಕು, ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ!

Bidadi Township Project: ಸಿಎಂ ಡಿಕೆ ಶಿವಕುಮಾರ್‌ಗೆ 2ನೇ ಪತ್ರ ಬರೆದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ!

ಗರಿಷ್ಠ ಅವಧಿ ಸಂಪೂರ್ಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಅನರ್ಹ, BCCI ಒಂಬುಡ್ಸ್‌ಮನ್ ಆದೇಶ!