ಟೆಹರಾನ್: ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಫೆಬ್ರವರಿ 28 ರಂದು ಹತರಾದ ಎಲ್ಲಾ ಹುತಾತ್ಮರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಅವರು ಹಂಚಿಕೊಂಡಿದ್ದು, ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಇಡೀ ರಾಷ್ಟ್ರದ ಬೇಡಿಕೆಯಾಗಿದೆ. ಅದು ಖಂಡಿತವಾಗಿಯೂ ನಡೆದೇ ತೀರುತ್ತದೆ ಎಂದು ಹೇಳಿದ್ದಾರೆ.
ಇರಾನ್ನ ಸೇಡು "ಅನಿವಾರ್ಯವಾಗಿ ನಡೆಯಲೇಬೇಕು. ಈ ವಿಷಯವು ಅವರ ವೈಯಕ್ತಿಕ ಅಸ್ತಿತ್ವ ಅಥವಾ ಇತರ ಅಧಿಕಾರಿಗಳ ಅಸ್ತಿತ್ವವನ್ನು ಅವಲಂಬಿಸಿಲ್ಲ. ನಾವು ಇದ್ದರೂ ಇಲ್ಲದಿದ್ದರೂ ಅದು ನಿಜವಾಗುತ್ತದೆ ಎಂದು ಖಮೇನಿ ಬರೆದುಕೊಂಡಿದ್ದಾರೆ.
ಶಿಯಾ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಈಶಾನ್ಯ ಇರಾನ್ ನ ಮಶಾದ್ ಪಟ್ಟಣದಲ್ಲಿ ಭಾರಿ ಜನಸ್ತೋಮದ ನಡುವೆ ಅಂತಿಮ ಯಾತ್ರೆ ನಂತರ ಶಿಯಾ ಮುಸ್ಲಿಂ ನಾಯಕ ಇಮಾಮ್ ರೆಜಾ ಅವರ ಸಮಾಧಿ ಸ್ಥಳದಲ್ಲೇಆಯತೊಲ್ಲಾ ಅಲಿ ಖಮೇನಿ ಅವರನ್ನು ಸಮಾಧಿ ಮಾಡಲಾಯಿತು ಎಂದು ಮೂಲಗಲು ಹೇಳಿವೆ.